ಹೊರಗೆ ಹೋದರೆ ತಣ್ಣನೆಯ ಗಾಳಿ ಎಲ್ಲಾದರೂ ಬೀಸುತ್ತಾ, ನೆರಳು ಸಿಗುತಚತಾ, ಎಷ್ಟೊತ್ತಿಗೆ ಮನೆ ಸೇರ್ತೀವಿ ಎಂಬ ಚಿಂತೆ ಶುರುವಾಗುತ್ತದೆ. ಅದಕ್ಕೆ ಕಾರಣವೇ ಈ ಬೇಸಿಗೆ. ಹೌದು ಈ ವರ್ಷವಂತೂ ಬೇಸಿಗೆ ಬೇಗನೆ ಬಂದಿರೋದು ಅಲ್ಲದೆ, ಹೆಚ್ಚಿನ ತಾಪಮಾನ ಆರಂಭವಾಗಿದೆ. ಪ್ರತಿವರ್ಷ ಕೂಡ ಬಿಸಿಲು ಹೆಚ್ಚಾಗುತ್ತಲೆ ಇರುತ್ತದೆ. ಅದರಂತೆ ಈ ವರ್ಷವೂ ಸಿಕ್ಕಾಪಟ್ಟೆ ಜಾಸ್ತಿ ಇದೆ. ಈ ಬೇಸಿಗೆ ಕಾಲಕ್ಕೆ ನಮ್ಮ ಆರೋಗ್ಯದ ವಿಚಾರ ಬಹಳ ಮುಖ್ಯವಾಗುತ್ತದೆ. ನೀರಿನಂಶ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೇರಿಸಲೇಬೇಕು. ಇಲ್ಲವಾದಲ್ಲಿ ಡಿಹೈಡ್ರೇಷನ್ ಸಮಸ್ಯೆ ಶುರುವಾಗಿ ಬಿಡುತ್ತದೆ. ಹೀಗಾಗಿ ಈ ಹಣ್ಣುಗಳನ್ನು ಮಿಸ್ ಮಾಡದೆ ತಿನ್ಮಿ.
* ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹಾಗೇ ಈ ಸಮಯದಲ್ಲಿ ಹೆಚ್ಚು ಜನ ಕಲ್ಲಂಗಡಿ ಹಣ್ಣನ್ನೇ ತಿನ್ನುವುದು. ಇದರಲ್ಲಿ 96% ನೀರಿನಂಶ ಇರುವ ಕಾರಣ ದೇಹಕ್ಕರ ತಂಪನ್ನು ನೀಡುತ್ತದೆ.
* ಹಾಗೇ ಸ್ಟ್ರಾಬೆರಿ ಕೂಡ ಈ ಬೇಸಿಗೆಗೆ ಬಹಳ ಒಳ್ಳೆಯದು. ಇದರಲ್ಲೂ 92% ನೀರಿನ ಅಂಶ ಇರುವ ಕಾರಣ, ಪ್ರತಿದಿನ ಸ್ಟ್ರಾಬೆರಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರಲಿದೆ. ನೀರಿನ ಅಂಶ ದೇಹದಲ್ಲಿ ಶೇಕರಣೆಯಾದಂತೆ ಆಗುತ್ತದೆ.
* ಟಮೋಟೋ, ಹೌದು ಅಡುಗೆಗೆ ಬಳಸುವ ಟಮೋಟೋವನ್ನು ಹಾಗೇ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭವಿದೆ ಅನ್ನೋದು ಗೊತ್ತಾ. ಅದರಲ್ಲೂ ಈ ಬೇಸಿಗೆ ಬೇಗೆಯನ್ನು ಒಂದು ಟಮೋಟೋ ನೀಗಿಸುತ್ತದೆ. ಟಮೋಟೋದಲ್ಲಿ ಕೂಡ 94% ನೀರಿನ ಅಂಶ ಇರುವ ಕಾರಣ ಈ ಬೇಸಿಗೆಗೆ ದೇಹವನ್ನು ಆರೋಗ್ಯಯುತವಾಗಿ ಕಾಪಾಡಲು ಉಪಯೋಗಕಾರಿ.
* ಕಿತ್ತಳೆ ಹಣ್ಣಿನಲ್ಲೂ ನೀರಿನಂಶ 96% ಪರ್ಸೆಂಟ್ ಇದೆ. ಹೀಗಾಗಿ ಈ ಎಲ್ಲಾ ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹ ಡಿಹೈಡ್ರೇಷನ್ ಆಗುವುದು ತಪ್ಪುತ್ತದೆ.
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28 : ನಗರದ ಐ.ಯು.ಡಿ.ಪಿ. ಲೇಔಟ್ ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಕರೆನ್ಸಿ ಚೆಸ್ಟ್ ಶಾಖೆಯಲ್ಲಿ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಎಲ್ಲೆಡೆ ಪರೀಕ್ಷೆಗಳು ಮುಗಿಯುವ ಹಂತಕ್ಕೆ ಬಂದಿವೆ. ಇನ್ನೇನೂ ಸದ್ಯದಲ್ಲೇ ಶಾಲಾ-ಕಾಲೇಜು ರಜೆ ಘೋಷಣೆ…
ಹಲವರಿಗೆ ಇದ್ದಕ್ಕಿದ್ದ ಹಾಗೇ ತಲೆ ನೋವು ಬರುತ್ತೆ. ಮಾತ್ರೆಗಳಿಗೆ ಅಂತವರು ಅಡಿಕ್ಟ್ ಆಗಿರುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಸದಾ ಕಾಲ…
ಈ ರಾಶಿಯವರು ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ, ಶುಕ್ರವಾರದ ರಾಶಿ ಭವಿಷ್ಯ 28 ಮಾರ್ಚ್ 2025…
ಸುದ್ದಿಒನ್, ಹಿರಿಯೂರು, ಮಾರ್ಚ್. 27 : ಅಕ್ರಮ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಐಮಂಗಲ ಪೊಲೀಸರು…
ಬೆಂಗಳೂರು; ಇತ್ತೀಚೆಗಂತೂ ಕೊಲೆ ಕೇಸದ ಗಳನ್ನೇ ಹೆಚ್ಚಾಗಿಕೇಳ್ತಾ ಇದ್ದೀವಿ. ಅದರಲ್ಲೂಈ ರೀತಿಯ ಕೊಲೆಗಳು ಕೂಡ ಜಾಸ್ತಿ ಆಗ್ತಾ ಇದಾವೆ. ಇಂದು…