ಕಳೆದ ಕೆಲವು ದಿನಗಳಿಂದ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ಬರೀ ರಾಜ್ಯವಲ್ಲ ದೇಶಾದ್ಯಂತ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಹಲವೆಡೆ ಈ ವಿಚಾರ ರಾಜಕೀಯ ಬಣ್ಣವನ್ನು ಬಳಿದುಕೊಂಡಿದೆ. ಇದೀಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಂದಿರ ಮಸೀದಿ ಎನ್ನದೆ ಎಲ್ಲಾ ಕಡೆ ಧ್ವನಿವರ್ಧಕಗಳನ್ನು ತೆಗೆಸಿದೆ.
ಮಸೀದಿಗಳ ಧ್ವನಿವರ್ಧಕ ಕರ್ನಾಟಕದಲ್ಲಿ ಒಂದು ಆಯಾಮ ಪಡೆದುಕೊಂಡರೆ, ಮಹಾರಾಷ್ಟ್ರದಲ್ಲಿ ಮತ್ತೊಂದು ಆಯಾಮ ಪಡೆದುಕೊಂಡಿತ್ತು. ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಸಿಎಂ ಠಾಕ್ರೆ ಮನೆ ಮುಂದೆಯೇ ಹನುಮಾನ್ ಚಾಲೀಸಾ ಪಠಿಸಲು ಹೋಗಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ಧ್ವನಿವರ್ಧಕದ ಚರ್ಚೆಗಳಾಗುತ್ತಿದ್ದವು.
ಸುಪ್ರೀಂ ಕೋರ್ಟ್ ಈ ಧ್ವನಿವರ್ಧಕದ ಬಗ್ಗೆ ಸಲಹೆ, ಸೂಚನೆಗಳನ್ನು ಕೊಟ್ಟಿದೆ. ಅದರ ಶಬ್ದ ಎಷ್ಟಿರಬೇಕು ಎಂಬುದನ್ನು ವಿವರಿಸಿದೆ. ಆದರೂ ಸುಪ್ರೀಂ ಆಜ್ಞೆಯನ್ನು ಮೀರಿ, ಶಬ್ಧ ಜೋರಾಗಿಯೇ ಕೊಡಲಾಗಿತ್ತು. ಇದೀಗ ಯೋಗಿ ಆದಿತ್ಯನಾಥ್ ಸರ್ಕಾರ ಮಂದಿರ ಮಸೀದಿ ಎಂಬ ಭೇದ ಬಿಟ್ಟು ಒಂದೇ ದಿನದಲ್ಲಿ ಬರೋಬ್ಬರಿ 21,900 ಧ್ವನಿವರ್ಧಕಗಳನ್ನು ತೆಗೆಸಿದೆ. ಕಣ್ಣಿಗೆ ಕಂಡ ಅನಗತ್ಯ ಸ್ಪೀಕರ್ ಗಳನ್ನು ತೆಗೆಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…