ಭೀಮಾ ತೀರದ ಭಾಗಪ್ಪ ಹರಿಜನ ಕೊಲೆಗೆ ಹಿಂದೆ ಕೆಲಸದವಳಾ ಕೈವಾಡವಿದೆಯಾ..?

ವಿಜಯಪುರ: ಜಿಲ್ಲೆಯ ಜನರನ್ನು ನಡುಗಿಸುವ ಭೀಕರ ಹತ್ಯೆಯೊಂದು ನಡೆದು ಹೋಗಿದೆ. ಭೀಮಾತೀರದ ಹಂತಕ, ರೌಡಿಶೀಟರ್, ಕುಖ್ಯಾತ ನಟೋರಿಯಸ್ ಎನಿಸಿಕೊಂಡಿದ್ದ 50 ವರ್ಷದ ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದ್ದಾನೆ. ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹಲವು ಕೊಲೆ ಮತ್ತು ದರೋಡೆಗಳನ್ನು ಮಾಡಿರುವ ಕೇಸುಗಳು ಬಾಗಪ್ಪ ಹರಿಜನ ಮೇಲಿವೆ. ಈತನನ್ನು ಮಂಗಳವಾರ ರಾತ್ರಿ ಅಟ್ಯಾಕ್ ಮಾಡಿದ್ದು, ಆತನ ಮುಖ, ಕೈಗಳು, ದೇಹವನ್ನು ಕೊಚ್ವಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಎಲ್ಲಾ ಆಯಾಮದಿಂದಾನೂ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಬಾಗಪ್ಪ ಪುತ್ರಿಯರಿಗೆ ಮನೆ ಕೆಲಸದಾಕೆ ಮೇಲೆಯೇ ಅನುಮಾನ ಮೂಡಿದೆ.

ಬಾಗಪ್ಪ ಹರಿಜನ್ ವಿಜಯಪುರ ಹೊರವಲಯದ ಮದೀನಾ ನಗರದಲ್ಲಿ ಬಾಡಿಗೆ ಮನೆಯಲಗಲಿದ್ದ. ಅಡುಗೆ ಕೆಲಸಕ್ಕಾಗಿ ತನ್ನ ಸಂಬಂಧಿಯೇ ಆಗಿದ್ದಂತ ಸಂಜನಾ ಎಂಬಾಕೆಯನ್ನು ನೇಮಕ ಮಾಡಲಾಗಿತ್ತು. ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿರುವುದು ಬಾಗಪ್ಪನ ವಿರೋಧಿಗಳಿಗೆ ತಿಳಿದಿರಲಿಲ್ಲ‌. ಆದರೂ ಏಕಾಏಕಿ ಬಾಗಪ್ಪನ ಮೇಲೆ ಮಂಗಳವಾರ ದಾಳಿ ನಡೆದಿದೆ. ಹೀಗಾಗಿ ಮನೆ ಕೆಲದಾಕೆ ಮೇಲೆ ಅನುಮಾನ ಮೂಡಿದೆ.

ಈ ಸಂಬಂಧ ಗಂಗೂಬಾಯಿ ಹಾಗೂ ಇಂದ್ರಾಬಾಯಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸಂಜನಾಳ ಮೇಲೆ ನಮಗೆ ಅನುಮಾನವಿದೆ. ಯಲ್ಲಪ್ಪನ ಹರಿಜನ ಮಗ ಭೀಮಶಿ ಹರಿಜನ ಇವರೆಲ್ಲರೂ ಸೇರಿ ಹತ್ಯೆ ಮಾಡಿರಬಹುದು. ಹಾಗೆ ನಮ್ಮ ತಂದೆ ಹತ್ಯೆ ಬಳಿಕ ಅವರ ಫೋಟೋವನ್ನು ಪಿಂಟ್ಯೂ ಅಲಿಯಾಸ್ ಪ್ರಕಾಶ್ ಹಾಕಿಕೊಂಡಿದ್ದ. ನನ್ನ ಸಹೊಇದರನ ಆತ್ಮಕ್ಕೆ ಶಾಂತಿ ಸಿಕ್ತು ಅಂತ ಸ್ಟೇಟಸ್ ಹಾಕಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

suddionenews

Recent Posts

ರಾಮ್ ಚರಣ್ ಮತ್ತೆ ಹೆಣ್ಣು ಮಗುವಿನ ತಂದೆಯಾಗುತ್ತಾನೆಂಬ ಭಯ : ಚಿರಂಜೀವಿಗೆ ಹೆಣ್ಣು ಮಕ್ಕಳ ಮೇಲಿನ ಅಸಡ್ಡೆಗೆ ಆಕ್ರೋಶ..!

ಕಾಲ ಈಗ ಅದೆಷ್ಟು ಬದಲಾಗಿದೆ ಅಲ್ವಾ. ಗ್ರಾಮೀಣ ಭಾಗದಲ್ಲಿ ಹೆಣ್ಣು ಎಂದರೆ ಮೂಗು ಮುರಿಯುತ್ತಿದ್ದರು. ಗಂಡು ಮಗುವೇ ಬೇಕು ಎನ್ನುತ್ತಿದ್ದರು.…

17 minutes ago

ಚಿನ್ನಾಭರಣದಲ್ಲಿ ಇಂದು 70 ರೂಪಾಯಿ ಇಳಿಕೆ : ಪ್ರಸ್ತುತ ದರ ಎಷ್ಟಿದೆ..?

  ಬೆಂಗಳೂರು:  ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಇದನ್ನು ಕಂಡ ಚಿನ್ನಾಭರಣ ಪ್ರಿಯರು ಇಳಿಕೆಯಾಗುತ್ತೋ ಇಲ್ವೋ ಅಂತ…

3 hours ago

ಇನ್ವೆಸ್ಟ್ ಕರ್ನಾಟಕ-2025: ಯುಪಿ, ಬಿಹಾರಿಗಳಿಗೆ ಉದ್ಯೋಗ : ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಾಜನಾಥ್ ಸಿಂಗ್

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾದರೆ ಸಾಕು ಎಂದು ಕನವರಿಸುವಾಗಲೇ ಇನ್ವೆಸ್ಟ್ ಕರ್ನಾಟಕ ಸಮಾವೇಶ ಕರ್ನಾಟಕ ನಿರುದ್ಯೋಗಿಗಳಿಗೆ…

3 hours ago

ಇಂದು ಮಾಘ ಹುಣ್ಣಿಮೆ : ಏನು ಮಾಡಬೇಕು, ಗಂಗಾ ಸ್ನಾನ ಮಹತ್ವ ಇಲ್ಲಿದೆ ನೋಡಿ

ಹುಣ್ಣಿಮೆಗಳಲ್ಲಿಯೇ ಮಾಘ ಹುಣ್ಣಿಮೆ ಬಹಳ ಶ್ರೇಷ್ಠವಾದದ್ದು. ಈ ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಮಾಘ ಹುಣ್ಣಿಮೆ ಎಂದು ಕರೆಯುತ್ತಾರೆ. ಈ…

9 hours ago

ವಿಶ್ವದಾಖಲೆಯತ್ತ ತುರುವನೂರಿನ ವಿರಾಟ್ ಆಂಜನೇಯ ರೇಖಾಚಿತ್ರ : ಇಂದು ಲೋಕಾರ್ಪಣೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 12 : ತಾಲ್ಲೂಕಿನ ತುರುವನೂರು ಗ್ರಾಮ ಕಳೆದ ಕೆಲವು ದಿನಗಳಿಂದ ಬಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ…

10 hours ago

ತಂತ್ರಜ್ಞಾನ ಆಧಾರಿತ ಭೋದನಾ ಸಾಧನಗಳನ್ನು ಅಳವಡಿಸಿಕೊಳ್ಳಿ : ಎನ್.ಆರ್. ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಶ್ರೀಧರ್, ತುರುವನೂರು ಮೊ: 78997 89545 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 :…

19 hours ago