ನೀವೂ ಸಸ್ಯಹಾರಿಗಳಾ..? ಕಬ್ಬಿಣಾಂಶ.. ಕ್ಯಾಲ್ಶಿಯಂಗಾಗಿ ರಾಗಿ ಸೇವಿಸಿ..!

ರಾಗಿ ತಿಂದವ ನಿರೋಗಿಯಾಗಿರ್ತಾನೇ ಅನ್ನೋದು ಲೋಕಾರೂಢಿ ಮಾತು. ಹಾಗೇ ಹಿರಿಯರ ಅನುಭವದ ಮಾತು. ರಾಗಿ ತಿನ್ನುವುದರಿಂದ ದೇಹ ಶಕ್ತಿಯುತವಾಗಿಯೂ ಇರುತ್ತೆ, ರೋಗಗಳಿಂದಾನೂ ದೂರ ಇರಬಹುದು. ಯಾಕಂದ್ರೆ ರಾಗಿಯಲ್ಲಿ ಅಷ್ಟು ಪೋಷಾಕಾಂಶಗಳು ಇರುತ್ತವೆ. ನಮ್ಮ ದೇಹಕ್ಕೆ ಎಲ್ಲಾ ರೀತಿಯಿಂದಾನು ಅನುಕೂಲ ಒದಗಿಸುತ್ತದೆ.

ರಾಗಿಯಲ್ಲಿ ಕ್ಯಾಲ್ಶಿಯಂ ಹಾಗೂ ಕಭಿಣದ ಅಂಶಗಳು ಯಥೇಚ್ಛವಾಗಿರುತ್ತವೆ. ಈ ಎರಡು ನಮ್ಮ ದೇಹಕ್ಕೆ ಬೇಕಾದ ಬಹುಮುಖ್ಯವಾದ ಪೋಷಕಾಂಶಗಳು. ಕಬ್ಬಿಣದ ಪೂರೈಕೆ ದೇಹದಲ್ಲಿ ಹೆಚ್ಚಾಗಿಯೇ ಇರಬೇಕು. ಹೀಗಾಗಿ ಈ ಎರಡು ಅಂಶಗಳು ದೇಹದಲ್ಲಿ ಇರಬೇಕು ಅಂದ್ರೆ ರಾಗಿಯನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವಿಸಬೇಕಾಗುತ್ತದೆ.

ಇನ್ನು ಮನುಷ್ಯನಿಗೆ ಕ್ಯಾಲ್ಶಿಯಂ ಅನ್ನೋದು ಬಹಳ ಮುಖ್ಯ. ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಅತ್ಯಂತ ಅವಶ್ಯಕವಾಗಿದೆ. ಈಗಂತೂ ಸೂರ್ಯನ ಬಿಸಿಲನ್ನೇ ನೋಡದ ಮಕ್ಕಳಲ್ಲಿ ಮೂಳೆಗಳ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತದೆ. ಅದಕ್ಕಾಗಿ ವೈದ್ಯರು, ಔಷಧಿಗಳು ಅಂತಾನೇ ಹೋಗುವುದು ಹೆಚ್ಚು. ಅಡುಗೆ ಮನೆಯಲ್ಲಿಯೇ, ತಿನ್ನುವ ಆಹಾರದಲ್ಲಿಯೇ ನಾವೂ ಕ್ಯಾಲ್ಶಿಯಂ ಕಂಡುಕೊಳ್ಳಬಹುದು. ಅದರಲ್ಲಿ ಮುಖ್ಯವಾಗಿ ಬಳಕೆ ಮಾಡಬೇಕಿರುವುದೇ ರಾಗಿ.

ಮಾಂಸಹಾರಿಗಳಿಗೆ ಹೇಗೋ ಒಂದಷ್ಟು ಪೋಷಕಾಂಶಗಳು ಸಿಗುತ್ತವೆ. ಆದರೆ ಸಸ್ಯಹಾರಿಗಳಿಗೆ ವಿಟಮಿನ್ ಕೊರತೆ ಎದುರಾಗಬಾರದು ಎಂದರೆ ರಾಗಿ ಬಳಕೆ ಉತ್ತಮ. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಇದೆ. ರಾಗಿಯನ್ನ ಸೇವನೆ ಮಾಡುವುದಕ್ಕೆ ಹಲವು ವಿಧಗಳಿವೆ. ಹಲವು ಜಿಲ್ಲೆಯಲ್ಲಿ ಮುದ್ದೆ ಮಾಡಿ ಸವಿದರೆ, ಇನ್ನು ಕೆಲವು ಕಡೆ ಮುದ್ದೆಯ ಬಗ್ಗೆ ಪರಿಚಯವಿರಲ್ಲ. ಹೀಗಾಗಿ ರಾಗಿಯನ್ನ ಮಿಲ್ಲೆಟ್ ರೂಪದಲ್ಲು ತಿನ್ನಬಹುದು. ಹಾಗೇ ಇಡ್ಲಿ, ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಒಟ್ಟಾರೆ ದೇಹಕ್ಕೆ ಬೇಕಾದ ಪೋಷಾಕಾಂಶಗಳ ಆಗರವಿರುವ ರಾಗಿಯನ್ನು ತಪ್ಪದೆ ಸೇವಿಸಿ.

 

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

58 minutes ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

4 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago