ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಒಂದು ವಾರಗಳನ್ನು ಪೂರೈಸಿದೆ. ಆಟ – ಹೊಂದಾಣಿಕೆಯೆಲ್ಲಾ ಮುಗಿದು ಈಗ ವಾರದ ಕತೆ ಕಿಚ್ಚನ ಜೊತೆಗೆ ಸಮಯ ಬಂದು ನಿಂತಿದೆ. ಮನೆಯಲ್ಲಿ ಸಮರ್ಥರು ಹಾಗೀ ಅಸಮರ್ಥರು ಎಂಬ ಪಟ್ಟಿ ಮಾಡಲಾಗಿದೆ. ಆಟಗಳು, ಸೌಲಭ್ಯಗಳು ಇಬ್ಬರಿಗೂ ಡಿಫ್ರೆಂಟ್ ಆಗಿರಲಿದೆ. ಇದೀಗ ಮೊದಲ ವಾರದಲ್ಲಿ ಹೊರಗೆ ಬರುವ ಸ್ಪರ್ಧಿ ಯಾರು ಎಂಬ ಕುತೂಹಲ ಸಹಜವಾಗಿಯೇ ಇದೆ.
ಈಗಾಗಲೇ ಮನೆಯವರಿಂದಾನೇ ಮೈಕೆಲ್, ನೀತು, ತನಿಷಾ, ಸಿರಿ, ಸಂತೋಷ್ ಹಳ್ಳಿಕೆರೆ, ಡ್ರೋನ್ ಪ್ರತಾಪ್, ಸ್ನೇಕ್ ಶ್ಯಾಮ್, ಕಾರ್ತೀಕ್ ನಾಮಿನೇಟ್ ಆಗಿದ್ದಾರೆ. ವೋಟ್ ಮೂಲಕ ಜನ ಎಲ್ಲರನ್ನು ರಕ್ಷಿಸಬಹುದು. ಆದರೆ ಒಬ್ಬರಂತು ಮನೆಯಿಂದ ಹೊರಗೆ ಬರಲೇಬೇಕಾಗಿದೆ. ಈ ಎಂಟು ಜನರಲ್ಲಿ ಇಂದು ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ.
ಕಥೆ ಶುರುವಾಗುವ ಮುನ್ನವೇ ಮುಗಿಯುವುದು ಯಾರ ಪಾಲಿಗೆ ಎಂಬ ಪ್ರೋಮೋವನ್ನು ಕಲರ್ಸಗ ಕನ್ನಡ ರಿಲೀಸ್ ಮಾಡಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಸಖತ್ ಕ್ಲಾಸ್ ನಡೆಯಲಿದೆ. ಸಮರ್ಥರು ಎನಿಸಿಕೊಂಡವರ ನಡವಳಿಕೆ ನೋಡುಗರಿಗೇನೆ ಅಸಹ್ಯ ಎನಿಸಿದೆ. ಅದರಲ್ಲೂ ಡ್ರೋನ್ ಪ್ರತಾಪನನ್ನು ನಡೆಸಿಕೊಂಡ ರೀತಿಯೂ ಸರಿ ಇಲ್ಲ. ಅವನನ್ನು ನಗಿಸುವ ಪ್ರಯತ್ನ ಎಂದು ಹೇಳುವ ತುಕಾಲಿ ಸಂತು, ಮುಂದೆ ಒಂದು ಹಿಂದೆ ಒಂದು ಮಾತನಾಡುತ್ತಾರೆ. ಡ್ರೋನ್ ಬಗ್ಗೆ, ಇಬ್ಬರು ಸಂತೋಷ್, ಸ್ನೇಹಿತ್ ಬಹಳ ಕೆಟ್ಟದಾಗಿಯೇ ಮಾತನಾಡುತ್ತಾರೆ. ಈ ಎಲ್ಲಾ ವಿಚಾರಗಳಿಗೂ ಕಿಚ್ಚನಿಂದ ಖಂಡಿತ ಸಲಹೆ ಸೂಚನೆಗಳು ಸಿಗಲಿವೆ. ಹಾಗೇ ಕೊನೆಯಲ್ಲಿ ಮನೆಯಿಂದ ಹೊರ ಬರುವುದು ಯಾರು ಎಂಬುದು ತಿಳಿಯಲಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…