ಅಂಬೇಡ್ಕರ್ ಅವರು ಈ ಜಗದ ಇರುವಿಕೆಯ ಅರಿವು : ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್

 

ಚಿತ್ರದುರ್ಗ, (ಮೇ.01) : ವಿಕಾರಗೊಂಡ ಸಮಾಜವನ್ನು ಸುಸ್ವರೂಪಕ್ಕೆ ತರುವ ಬಹು ಪ್ರಯತ್ನಕ್ಕೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ಅಂಬೇಡ್ಕರ್ ಅವರು ಈ ಜಗದ ಇರುವಿಕೆಯ ಅರಿವನ್ನು ಬಿತ್ತಿದವರು.

ಸಮ ಸಮಾಜ ನಿರ್ಮಾಣವಾಗಬೇಕು, ಸರ್ವರೂ ಒಂದಾಗಿ ಬಾಳಬೇಕು. ಶತೃವನ್ನೂ ಪ್ರೀತಿಯಿಂದ ನೋಡಿ ಎಂದು ಹೇಳಿದವರು ಅಂಬೇಡ್ಕರ್ ಅವರು. ತನ್ನನ್ನು ತಾನು ಯಾರೆಂಬುದನ್ನು ಅರಿತು, ಆ ಅರಿವಿನೊಳಗೆ ಬೆರೆತು ಜ್ಞಾನಬೆಳಕಿನ ಬೆಟ್ಟವಾಗಿದ್ದಾರೆಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ತಿಳಿಸಿದರು.

ತಾಲ್ಲೂಕಿನ ಯಳಗೋಡು ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರವರ 131ನೇ ಜನ್ಮ ಜಯಂತೊತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಜಾತಿ ಎಂಬುದು ದೊಡ್ಡ ಸುಳ್ಳು ಈ ಹೊತ್ತು ಜಾತಿ ಪದದ ಬದಲು ನೀತಿ ಪದ ಬಳಸುವ ಅಗತ್ಯವಿದೆ. ಜಾತಿ ಎಂಬ ಕ್ಯಾನ್ಸರ್ ರೋಗಕ್ಕೆ ತಕ್ಕ ಮದ್ದು ಆಧ್ಯಾತ್ಮಿಕ ಬದುಕು. ಇದು ಸರ್ವರ ಸ್ವತ್ತಾಗಬೇಕು. ಆದಿ ಮತ್ತು ಆತ್ಮ ಎಂಬೆರಡು ಪದಗಳ ಸಂಯೋಜಿತ ರೂಪವೇ ಆಧ್ಯಾತ್ಮ. ಆದಿ ಎಂದರೆ ಒಳಗೆ, ಒಳಗಿನ, ನಮ್ಮೊಳಗಿನ ಎಂದರ್ಥ. ನಮ್ಮೊಳಗಿನ ಆತ್ಮಕ್ಕೆ ಸಂಬಂಧಿಸಿದ್ದೇ ಆಧ್ಯಾತ್ಮ. ತಲ್ಲೀನತೆಯಿಂದ ಸೇವೆ ಸಲ್ಲಿಸುವುದೇ ಆಧ್ಯಾತ್ಮ. ಇಂತಹ ಆಧ್ಯಾತ್ಮಿಕ ಜೀವಿಯಾಗಿದ್ದವರು ಡಾ. ಬಿ. ಆರ್. ಅಂಬೇಡ್ಕರ್ ಅವರು. ಹಾಗಾಗಿಯೇ ಸಹಸ್ರ ಸಹಸ್ರ ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಈ ದೇಶದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಅಂಬೇಡ್ಕರ್ ಅವರೆಂದು ಅಭಿಪ್ರಾಯಪಟ್ಟರು.

ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ “ಅಂಬೇಡ್ಕರ್ ಮತ್ತು ಆಧ್ಯಾತ್ಮ” ಕೃತಿಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಆರ್. ಬಸವರಾಜಪ್ಪ ಅವರು ಲೋಕಾರ್ಪಣೆಗೊಳಿಸಿದರು.

ಕೃತಿ ಕುರಿತು ಮಾತನಾಡಿದ ನಾಗರಾಜ ಕಣಿವೆಬಿಳಚಿ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮಹಾಮಾರ್ಗಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ಅಂಬೇಡ್ಕರ್ ಅವರು ನೀಡಿದ ಬಗೆಯನ್ನು ಇಲ್ಲಿ ದಾಖಲಿಸಲಾಗಿದೆ. ಅವರ ಬದುಕು ಬರಹಕ್ಕೆ ಆಧ್ಯಾತ್ಮವೇ ತಹಳದಿಯಾಗಿರುವುದನ್ನು ಅನಾವರಣಗೊಳಿಸಲಾಗಿದೆ. ಅಂಬೇಡ್ಕರ್ ಅವರು ಆ ಆಧ್ಯಾತ್ಮದ ಮಾರ್ಗವೇ ಅವರ ಜಾÐನ ಶಕ್ತಿಗೆ ಪ್ರೇರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೊಳಲ್ಕೆರೆ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರು ಅಗಾಧವಾದ ಜ್ಞಾನ ಸಂಪಾದನೆಗೆ ಮತ್ತು ಭಾರತದ ಸಹಸ್ರ ಸಮಸ್ಯೆಗಳ ಫರಿಹಾರಕ್ಕೆ ತಕ್ಕ ಮಾರ್ಗತೋರಿಸಲು ಅವರೊಳಗಿದ್ದ ಆಧ್ಯಾತ್ಮಿಕ ಶಕ್ತಿಯೇ ಮೂಲಧಾತುವಾಗಿರುವುದನ್ನು `ಅಂಬೇಡ್ಕರ್ ಮತ್ತು ಆಧ್ಯಾತ್ಮ’ ಕೃತಿಯು ಅನಾವರಣಗೊಳಿಸುತ್ತದೆ. ಹಾಗಾಗಿ ಅಂಬೇಡ್ಕರ್ ಅಭಿವೃದ್ಧಿಗೆ, ಅಸಮಾನತೆಯ ವಿನಾಶಕ್ಕೆ ದಿವ್ಯ ಸಾಧನವಾಗಿದ್ದಾರೆ ಎಂದರು.

ಡಾ. ರಮೇಶ್ ಚೀಳಂಗಿ ಅವರು ಮಾತನಾಡಿ ಅಂಬೇಡ್ಕರ್ ಅವರು ತೋರಿದ ಮಾರ್ಗದಿಂದ ಶೋಷಣೆಗ ಒಳಗಾದ ಸಮುದಾಯವು ಎಚ್ಚೆತ್ತುಕೊಂಡು ಬದುಕಲು ಸಾಧ್ಯವಾಗಿದೆ ಎಂದರು. ಯಲ್ಲಪ್ಪನವರು ಮಾತನಾಡುತ್ತಾ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಸರ್ವರನ್ನೂ ಪ್ರೀತಿಸುವ ಸಾಧನವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಸಿ. ಶರಣಪ್ಪ ವಹಿಸಿದ್ದರು. ಆರ್.ಟಿ ಮಾಹಾಂತೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಲಯ ಅರಣ್ಯಾಧಿಕಾರಿ ಆರ್.ಟಿ ಮಂಜುನಾಥ ಅವರು ನಿವೃತ್ತ ನೌಕರರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.  ಗ್ರಾಮ ಪಂಚಾಯತಿ ಸದಸ್ಯರಾದ ಪಾರ್ವತಮ್ಮ, ಬಸಮ್ಮ, ಅನಿತಾ ಮತ್ತು ಪಿ.ಡಿ.ಓ. ಮಲ್ಲಿಕಾರ್ಜುನ, ಪೋಲೀಸ್ ಉಪಠಾಣಾಧಿಕಾರಿ ಸಿದ್ದರಾಮಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗುಣಶ್ರೀ ಎಂ. ಪ್ರಾರ್ಥಿಸಿದರು. ಅಜ್ಜಯ್ಯ ಅವರು ಸ್ವಾಗತಿಸಿದರು, ವಿಜಯಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

suddionenews

Recent Posts

ವಿರಾಟ್ ಕೊಹ್ಲಿ ಸೂಪರ್ ಸೆಂಚುರಿ : ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ಭಾರತ

  ಸುದ್ದಿಒನ್ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ 51 ನೇ ಶತಕವನ್ನು ಗಳಿಸಿದರು. ಟೀಮ್ ಇಂಡಿಯಾ ಪಾಕಿಸ್ತಾನವನ್ನು 6…

5 minutes ago

ಕಬೀರಾನಂದಾಶ್ರಮಕ್ಕೆ ಯಾವುದೆ ಜಾತಿ, ಧರ್ಮ ಇಲ್ಲ, ಎಲ್ಲರೂ ಸಮಾನರು : ಡಾ.ಬಸವಕುಮಾರ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…

29 minutes ago

ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ : ವಿಶೇಷತೆ ಏನು ಗೊತ್ತಾ?

  ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…

1 hour ago

ವಿಜಯೇಂದ್ರ ನೇತೃತ್ವದಲ್ಲಿಯೇ ತಾಲೂಕು, ಜಿಲ್ಲಾ ಪಂಚಾಯತಿಗೆ ಸ್ಪರ್ಧೆ : ರೇಣುಕಾಚಾರ್ಯ

    ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…

1 hour ago

ತುಮಕೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 24 , 27 ಹಾಗೂ 28ರಂದು ವಿದ್ಯುತ್ ವ್ಯತ್ಯಯ…!

  ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…

1 hour ago

ಭಾರತ vs ಪಾಕಿಸ್ತಾನ : 25 ವರ್ಷಗಳ ಹಳೆಯ ದಾಖಲೆ ಮುರಿದ ಕಿಂಗ್ ಕೊಹ್ಲಿ

    ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…

2 hours ago