ಪ್ರಕೃತಿ ಶಾಲೆಯಲ್ಲಿ ಅದ್ಧೂರಿ ಸ್ವಾತಂತ್ರೋತ್ಸವ  ದಿನಾಚರಣೆ

 

ಸುದ್ದಿಒನ್, ಚಿತ್ರದುರ್ಗ, (ಆ.15) : ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಎಂ. ಕೆ. ರವೀಂದ್ರರವರು ಧ್ವಜಾರೋಹಣವನ್ನು ನೆರವೇರಿಸಿದರು.ಒಂದರಿಂದ ನಾಲ್ಕನೇ ತರಗತಿಯ ಪುಟ್ಟ ಮಕ್ಕಳು ಪಥಸಂಚಲನ ಮಾಡುತ್ತಾ ಶಿಸ್ತಾಗಿ ಧ್ವಜವಂದನೆ ನಡೆಸಿದರು.

ಮಕ್ಕಳಿಂದ ಭಾಷಣ : ನಂತರ 4ನೇ ತರಗತಿಯ ವಿದ್ಯಾರ್ಥಿನಿಯರಾದ ಶ್ರೀನಿಧಿ, ದಿವ್ಯಶ್ರೀ, 2ನೇ ತರಗತಿಯ ಹಿತೇಶ್ ಟಿ. ಸಜ್ಜನ್, 6ನೇತರಗತಿಯ ವರುಣ್, 7ನೇ ತರಗತಿಯ ಸೈಯದ್ ಫರ್ಹಾನ್ ಭಾಷಣ ಮಾಡಿದರು. ನಂತರ ಶಿಕ್ಷಕಿಯಾದ ಕುಮಾರಿ ತೇಜಸ್ವಿನಿಯವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ರಾಜ್ಯಗಳು ಮತ್ತು ರಾಜಧಾನಿಗಳನ್ನು ಸುಲಲಿತವಾಗಿ 5, 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ಹೇಳಿ ನೆರೆದಿದ್ದ ಸರ್ವರನ್ನೂ ಬೆರಗುಗೊಳಿಸಿದರು.

ಮುಖ್ಯ ಅತಿಥಿಗಳ ನುಡಿ : ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕೆ. ನಾರಾಯಣ್ ರವರು ಮಾತನಾಡುತ್ತಾ, ಯಾರಾದರೂ ಸೇನೆಯನ್ನು ಸೇರಲು ಬಯಸುವವರಿದ್ದರೆ ತಾವು ಮಾರ್ಗದರ್ಶನವನ್ನು ಮಾಡುವುದಾಗಿ ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ : ನಂತರ ನರ್ಸರಿ ವಿದ್ಯಾರ್ಥಿಗಳಿಂದ ಛದ್ಮ ವೇಷಧರಿಸಿದ್ದರು.

ಓಜಸ್ ಆರ್ಯನ್ ಯೋಧನಾಗಿ, ಆರ್ಯನ್ ಅಂಬೇಡ್ಕರ್ ಆಗಿ, ಜೋಷಿತ್ ಭಗತ್ ಸಿಂಗ್, ಧನ್ಯತಾ ಆರ್ ಗುಂಡರಪಿ ಒನಕೆ ಓಬವ್ವ, ಉಜ್ವಲ್ ನೆಹರು, ಭೂಮಿಕ ಕಿತ್ತೂರು ರಾಣಿ ಚೆನ್ನಮ್ಮನಾಗಿ ಅಭಿನಯಿಸಿ ಎಲ್ಲರ ಮನಸೂರೆಗೊಂಡರು.

ವಿಶೇಷ ಆಹ್ವಾನಿತರ ನುಡಿ : ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಶ ರಾಜು ಪಿ.ಎಲ್. ಮಾತನಾಡುತ್ತಾ, ತಟ್ಟೆಯಲ್ಲಿ ಅನ್ನವನ್ನಿಟ್ಟರೆ ಸಾಲದು, ಅದನ್ನು ತಿಂದರೆ ಮಾತ್ರ ನಮ್ಮ ಹೊಟ್ಟೆ ತುಂಬುವುದೋ ಹಾಗೆ, ಪಾಠಗಳನ್ನು ಶಿಕ್ಷಕರು ಮಾಡಿದರಷ್ಟೇ ಸಾಲದು ವಿದ್ಯಾರ್ಥಿಗಳು ಓದಿ ಮನನ ಮಾಡಿಕೊಂಡರೆ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಕೃತಿ ಪ್ರಯೋಗ ಶಾಲೆ ಉದ್ಘಾಟನೆ : ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಶ್ವಿನ್ ಕುಮಾರ್ ರವರು ಹಾಗೂ ಎಲ್ಲಾ ಗಣ್ಯರೊಡಗೂಡಿ  ಆಧುನಿಕವಾಗಿ ವಿನ್ಯಾಸಗೊಳಿಸಿರುವ ಪ್ರಕೃತಿ ಪ್ರಯೋಗ ಶಾಲೆಯನ್ನು ಹಾಗೂ ಕಂಪ್ಯೂಟರ್ ಲ್ಯಾಬ್ ಗಳನ್ನು ಉದ್ಘಾಟಿಸಿದರು.

ಪ್ರಶಸ್ತಿಪತ್ರ ವಿತರಣೆ : ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು  ಹಾಗೂ ಛದ್ಮ ವೇಷಧರಿಸಿದ್ದ ನರ್ಸರಿ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ಅಧ್ಯಕ್ಷರ ನುಡಿ : ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ಎಂ.ಕೆ. ರವೀಂದ್ರ ರವರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆಯು ಬದ್ಧವಾಗಿದೆ ಎಂದು ತಿಳಿಸುತ್ತಾ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿದರು.

ವಂದನಾರ್ಪಣೆ : ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನೂ ಶಾಲೆಯ ಕಾರ್ಯದರ್ಶಿಯವರಾದ ಶ್ರೀ ಕಾರ್ತೀಕ್ ರವರು ಮಾತನಾಡುತ್ತಾ ಮಕ್ಕಳು ಅತಿ ಅಲ್ಪ ಸಮಯದಲ್ಲಿ ಇಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮಕ್ಕೆ ಸಹಕರಿಸಿದ ಪೋಷಕರುಗಳಿಗೂ, ವಿದ್ಯಾರ್ಥಿಗಳಿಗೂ ಹಾಗೂ ಅವರುಗಳನ್ನು ತಯಾರುಮಾಡಿದ ಶಿಕ್ಷಕರುಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಆಗಮಿಸಿದ್ದ ಸರ್ವರಿಗೂ ವಂದನೆಗಳನ್ನು ಅರ್ಪಿಸಿದರು.

ಭಾಗವಹಿಸಿದ ಗಣ್ಯರು : ಈ ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷರಾದ ಉಮೇಶ್.ವಿ. ತುಪ್ಪದ  ಖಜಾಂಚಿಗಳಾದ ಶ್ರೀಮತಿ ಶ್ವೇತಾ ಕಾರ್ತಿಕ್ ಟ್ರಸ್ಟಿಗಳಾದ ಮಾರುತಿ ಮೋಹನ್,  ಡಾ|| ಮಧುಸುದನ್ ರೆಡ್ಡಿ,  ಹರೀಶ್, ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲ.ಎಂ.ಎಸ್ ಹಾಗು ಶಾಲೆಯ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು.

ಶಿಕ್ಷಕಿಯಾದ ಶ್ರೀಮತಿ ರೇಷ್ಮ ರವರು ಎಲ್ಲರನ್ನು ಸ್ವಾಗತಿಸಿದರು ಕುಮಾರಿ ರಮ್ಯಾ ಮತ್ತು ಶ್ರೀಮತಿ ಮಾನಸ ರವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ : ನಂತರ  ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡಿತು.

suddionenews

Recent Posts

ಹಿರಿಯೂರು : ಕಾರು – ಲಾರಿ ಡಿಕ್ಕಿ : ಓರ್ವ ಸಾವು

ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…

6 hours ago

ದುಡಿಯುವ ಕೈಗಳಿಗೆ ಕೆಲಸ ಕೊಡಿ: ಕೂಲಿ ಕಾರ್ಮಿಕರ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

6 hours ago

ಮದಕರಿಪುರ ಕೆರೆ ಹೊಳು ತೆಗೆಯುವ ಕಾರ್ಯಕ್ಕೆ ಶಾಸಕ ವಿರೇಂದ್ರ ಪಪ್ಪಿ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

6 hours ago

9ನೇ ತರಗತಿ‌ ಮಕ್ಕಳಿಗೆ ಬಂಪರ್ ಆಫರ್ ; ಬಾಹ್ಯಾಕಾಶದಲ್ಲಿ ಆಸಕ್ತಿ ಇದ್ದರೆ ಇಲ್ಲಿದೆ ಅವಕಾಶ

ಬೆಂಗಳೂರು; ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ದೊಡ್ಡ ಕನಸಿರುತ್ತದೆ. ಪೋಷಕರ ಆಸೆಯಂತೆ ಮಕ್ಕಳು ನಡೆದುಕೊಳ್ಳುವುದು ಸಾಮಾನ್ಯ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ…

6 hours ago

ದುಶ್ಚಟಗಳಿಂದ ದೂರವಿರಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ : ನಗರಸಭೆ ಅಧ್ಯಕ್ಷೆ ಸುಮಿತಾ ಕರೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

8 hours ago

ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಪಿಳ್ಳೇಕೆರೆನಹಳ್ಳಿ ಕುಮಾರ್‌ಗೆ ಶ್ರದ್ಧಾಂಜಲಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

9 hours ago