Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇನ್ಮುಂದೆ ಟ್ರೈನ್ ತಡವಾದ್ರೆ ಪ್ರಯಾಣಿಕರಿಗೆ ಸಿಗುತ್ತೆ ಪರಿಹಾರ..!

Facebook
Twitter
Telegram
WhatsApp

ನವದೆಹಲಿ: ರೈಲಿನಲ್ಲಿ ಹೋಗೋದು ಸುಖಕರ ಪ್ರಯಾಣ ಅಂತಾನೆ ಎಲ್ಲಾ ಭಾವಿಸೋದು. ಆದ್ರೆ ರೈಲು ಪ್ರಯಾಣಕ್ಕೆ ಹೊರಟರೆ ಸರಿಯಾದ ಸಮಯಕ್ಕೆ ಒಮ್ಮೊಮ್ಮೆ ರೈಲು ಸಿಗೋದೆ ಇಲ್ಲ. ರೆಗ್ಯೂಲರ್ ರೈಲು ಪ್ರಯಾಣಿಕರಾಗಿದ್ರೆ ಆ ಬಗ್ಗೆ ನಿಮ್ಗೆ ಖಂಡಿತ ಗೊತ್ತೆ ಇರುತ್ತೆ. ಇನ್ಮುಂದೆ ಹೀಗ್ ಹಾಗೋ ಆಗಿಲ್ಲ ಅಂತ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ.

ಒಂದು ವೇಳೆ ರೈಲು ವಿಳಂಬವಾಗಿ ಬರುವುದಿದ್ದರೆ ಪ್ರಯಾಣಿಕರಿಗೆ ಮುಂಚಿತವಾಗಿಯೇ ತಿಳಿಸಬೇಕು. ಇಲ್ಲವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಪ್ರಯಾಣಿಕರ ಸಮಯವೂ ಅಮೂಲ್ಯವಾದದ್ದು. ರೈಲು ಸಮಯಗಳಲ್ಲಿ ವ್ಯತ್ಯಾಸವಾದಲ್ಲಿ ಇನ್ನು ಮುಂದೆ ವ್ಯತ್ಯಾಸವಾದಲ್ಲಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ಈ ಆದೇಶಕ್ಕೆ ಕಾರಣ 2016ರಲ್ಲಿ ನಡೆದ ಘಟನೆ. ಸಂಜಯ್ ಶುಕ್ಲಾ ಎಂಬುವವರು ಕುಟುಂಬ ಸಮೇತರಾಗಿ ಜಮ್ಮು ಕಾಶ್ಮೀರಕ್ಕೆ ಹೊರಟಿದ್ದರಂತೆ. ರೈಲು ಅಂದು ನಾಲ್ಕು ಗಂಟೆ ವಿಳಂಬವಾಗಿದೆ. ಈ ಹಿನ್ನೆಲೆ ಸಂಜಯ್ ಶುಕ್ಲಾ ಪರಿಹಾರ ಕೇಳಿ ಎನ್ಸಿಡಿಆರ್ಸಿಗೆ ಅರ್ಜಿ ಹಾಕಿದ್ರು. ಯಾಕಂದ್ರೆ ಅಂದು ವಿಮಾನಯಾನ ಮಿಸ್ ಆದ ಕಾರಣ ದುಬಾರಿ ಹಣ ನಷ್ಟವಾಗಿತ್ತು. ಎನ್ಸಿಡಿಆರ್ಸಿ ಸಂಜಯ್ ಶುಕ್ಲಾ ಪರವೇ ತೀರ್ಪು ಬಂದಿತ್ತು.

ಬಳಿಕ ಈ ಅರ್ಜಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿತ್ತು. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪಿನ ವಿರುದ್ಧ ಪಶ್ಚಿಮ ರೈಲ್ವೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಸಂಜಯ್ ಶುಕ್ಲಾ ಪರ ಆದೇಶ ಹೊರಡಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!