Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕರೆಂಟ್ ಜೊತೆಗೆ ಆನೆ ಆಟ : ಅಲ್ಲಿದ್ದವರ ಕೈಕಾಲು ನಡುಕ..!

Facebook
Twitter
Telegram
WhatsApp

 

ಮೈಸೂರು: ಒಮ್ಮೊಮ್ಮೆ ಕಾಡಿನಿಂದ ನಾಡಿಗೆ ಗಜರಾಜನೇನಾದ್ರೂ ಬಂದ್ರೆ ಅವನ ರಂಪಾಟ ಹೆಚ್ಚಾಗಿಯೇ ಇರುತ್ತೆ. ರೈತರ ಬೆಳೆಯನ್ನು ನೋಡೋದಿಲ್ಲ, ಆಸ್ತಿ ಪಾಸ್ತಿಯನ್ನು ನೋಡೋದಿಲ್ಲ. ತಾನು ನಡೆದದ್ದೇ ದಾರಿ ಅಂತ ನಡೆದುಕೊಂಡು ಹೋಗ್ತಾ ಇರುತ್ತೆ. ಆದ್ರೆ ಈ ಬಾರಿ ಪ್ರತ್ಯಕ್ಷವಾದ ಗಜರಾಜ ಮಾಡಿದ್ದು ಮಾತ್ರ ಭಿನ್ನ ವಿಭಿನ್ನ.‌ ಅಲ್ಲಿದ್ದವರಿಗೆ ಕೈಕಾಲು ನಡುಗುವುದರ ಜೊತೆಗೆ ಜೀವನದ ಭಯವೂ ಆಗಿತ್ತು.

ಹುಣಸೂರು-ಹೆಚ್ ಡಿ ಕೋಟೆ ರಸ್ತೆಯಲ್ಲಿರುವ ಗುರುಪುರ ಟಿಬೆಟ್ ಕ್ಯಾಂಪ್ ಬಳಿ ಆನೆಯೊಂದು ತನ್ನ ರಂಪಾಟ ಶುರು ಮಾಡಿತ್ತು. ಅದು ಹೇಗೆ ಅಂದ್ರೆ ಕರೆಂಟ್ ಜೊತೆಗೇನೆ ಆಟವಾಡೋದಕ್ಕೆ ಹೋಗಿದೆ. ಇದನ್ನ ಕಂಡವರು ಆತಂಕಕ್ಕೊಳಗಾಗಿದ್ದಂತು ಸತ್ಯ.

ರಸ್ತೆ ಮಧ್ಯೆ ಇದ್ದ ಕರೆಂಟ್ ಕಂಬಕ್ಕೆ ಆನೆ ಡಿಕ್ಕಿ ಹೊಡೆದಿದೆ. ಅನೆ ಹೊಡೆದ ಡಿಕ್ಕಿಯ ರಭಸಕ್ಕೆ ಕಂಬದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಷ್ಟೇ ಅಲ್ಲ ಸ್ಥಳೀಯರನ್ನು ಕಂಡು ಓಡಿಸಿಕೊಂಡು ಹೋಗಿದೆ. ಆನೆಯ ರಂಪಾಟಕ್ಕೆ ಜನ ಸುಸ್ತೆದ್ದು ಹೋಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿ, ಆನೆಯನ್ನ ಸೆರೆಹಿಡಿಯುವಂತೆ ಮಾಡಿದ್ದಾರೆ. ಈ ಆನೆ ನಾಗರಹೊಳೆ ಅರಣ್ಯದಿಂದ ಬಂದಿದ್ದು ಎನ್ನಲಾಗಿದೆ‌. ಆನೆಯ ರಂಪಾಟಕ್ಕೆ ಅಲ್ಲಿದ್ದ ಜನ ಒಂದು ಕ್ಷಣ ಜೀವ ಕೈನಲ್ಲಿಡಿದುಕೊಂಡು ತಪ್ಪಿಸಿಕೊಂಡಿದ್ದಂತು ಸತ್ಯ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

ಇಂದು ಸಂಜೆ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ : ಪ್ರಚಾರದ ವೇಳೆ ಪೆನ್ ಡ್ರೈವ್ ವಿಚಾರ ಪ್ರಸ್ತಾಪ ಮಾಡ್ತಾರಾ..?

ಶಿವಮೊಗ್ಗ: ಎರಡನೇ ಹಂತದ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ‌. ಚುನಾವಣೆಯ ಹೊತ್ತಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮುಜುಗರವಾಗುವಂತ ಘಟನೆ ನಡೆದಿದೆ. ರಾಜ್ಯದೆಲ್ಲೆಡೆ ಪೆನ್ ಡ್ರೈವ್ ಸುದ್ದಿ ತಾಂಡವವಾಡುತ್ತಿದ್ದರೆ,

error: Content is protected !!