Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಳ್ಳೇಕೆರೆನಹಳ್ಳಿ | ಡಿಸೆಂಬರ್ 27 ರಂದು ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ 13ನೇ ವರ್ಷದ ಕಾರ್ತಿಕ ಮಹೋತ್ಸವ

---Advertisement---

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿ ಗ್ರಾಮದ ಶಕ್ತಿ ದೇವತೆಯಾದ ಶ್ರೀ ಶ್ರೀ ಶ್ರೀ ಗೌರಸಮುದ್ರದೇವಿಯ ಸನ್ನಿಧಿಯಲ್ಲಿ ಡಿಸೆಂಬರ್ 27 ರಂದು ಕಾರ್ತಿಕ ಮಹೋತ್ಸವ ನಡೆಯಲಿದೆ.

ಅಂದು ಅಮ್ಮನವರಿಗೆ ಬೆಳಗ್ಗೆ 8.50 ನಿಮಿಷಕ್ಕೆ ಗಂಗೆಪೂಜೆ, ಆದ ನಂತರ ಕುಂಭ ಮೇಳದಲ್ಲಿ ಭಾಗವಹಿಸುವ ಎಲ್ಲಾ ಸಹೃದಯ ಭಕ್ತಾದಿಗಳು ಸಣ್ಣದಾದ ಸ್ಟೀಲ್‌ ಕೊಡಪಾನ, ಒಂದು ತೆಂಗಿನಕಾಯಿ,ಮತ್ತು ಒಂದು ಹಸಿರು ಬಣ್ಣದ ಜಾಕಿಟ್ ಪೀಸ್ ತರಲು ಕೋರಿದೆ. ಗ್ರಾಮದ ದೇವಸ್ಥಾನಗಳಿಗೆ ಹರಿಶಿನ ಕುಂಕುಮ ಅಕ್ಷತೆ ಸಮರ್ಪಣೆ, ಕುಂಭ ಹೊತ್ತ ಭಕ್ತಾಧಿಗಳವರಿಂದ ಶ್ರೀಮತಿ ಭೋರಮ್ಮ ಶ್ರೀ ಬೋರಪ್ಪ ಮತ್ತು ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳ ಭಕ್ತಿಯ ಕೊಡುಗೆಯಾದ 52.1 ಕೆ.ಜಿ. ತೂಕದ ಓಂಕಾರ ನಾದದ ಗಂಟೆಯ ಮೆರವಣಿಗೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಮಹಾಪಂಚಾಮೃತಾಭಿಶೇಕ, ಮಹಾಮಂಗಳಾರತಿ ಹಾಗೂ ಸಂಜೆ ಸರಿಯಾಗಿ 6.49 ಗಂಟೆಗೆ ದೀಪೋತ್ಸವ ಕಾರ್ಯಕ್ರಮ,ಸಂಜೆ 7.30 ಗಂಟೆಗೆ ಅನ್ನ ಸಂತರ್ಪಣೆ‌ ನೆರವೇರಲಿದೆ.

ಅನ್ನ ಸಂತಾರ್ಪಣೆ ದಾನಿಗಳು:

ಶ್ರೀಮತಿ ವೀಣಾ ಶ್ರೀ ಎಂ.ಆರ್. ಮಂಜುನಾಥ್, ಡಿ.ಡಿ.ಪಿ.ಐ., ಶಿಕ್ಷಣ ಇಲಾಖೆ, ಚಿತ್ರದುರ್ಗ

ಅಧ್ಯಕ್ಷರು, ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳು, ಪಿಳ್ಳೇಕೆರೆನಹಳ್ಳಿ ಗ್ರಾಮ, ಚಿತ್ರದುರ್ಗ

ಶ್ರೀಮತಿ ಭಾಗ್ಯಮ್ಮ ಪೂಜಾರಿ ಗುತ್ಯಪ್ಪ ಮತ್ತು ಮಕ್ಕಳು ಈಚಲನಾಗೇನಹಳ್ಳಿ

ಶ್ರೀಮತಿ ನಿರ್ಮಲ ಮತ್ತು ಶ್ರೀ ನಾಗರಾಜ ಮತ್ತು ಮಕ್ಕಳು, ಈಚಲನಾಗೇನಹಳ್ಳಿ

ಶ್ರೀಮತಿ ಜಯಲಕ್ಷ್ಮಮ ಶ್ರೀ ಮಲ್ಲಿಕಾರ್ಜುನಯ್ಯ, ನಿವೃತ್ತ ಶಿಕ್ಷಕರು,
ಶ್ರೀ ರಂಗ ಗ್ರಾನೈಟ್, ಚಿತ್ರದುರ್ಗ
ಶ್ರೀಮತಿ ಕೆ. ಶೃತಿ ಕೋಂ ಶ್ರೀ ಎ.ಎನ್. ಶಂಕರ, ಜೆ.ಎಂ. . ರಸ್ತೆ, ಚಿತ್ರದುರ್ಗ
ಶ್ರೀಮತಿ ವಿಜಯಲಕ್ಷ್ಮೀ ಕೋಂ ಶ್ರೀ ಪರಮೇಶ್ವರಪ್ಪ ಮತ್ತು ಪಿ.
ಅಚ್ಚುತರಾವ್, ಕೆಳಗೋಟೆ, ಚಿತ್ರದುರ್ಗ

ಪುಷ್ಪಾಲಂಕಾರ ದಾನಿಗಳು: ಶೈಲಾಜಾ, ಕೆ. ದಯಾನಂದ ಬಿನ್ ಕಲ್ಲಪ್ಪ ಮತ್ತು ಜೆ.ಕೆ. ಫ್ಯಾಮಿಲಿ, ಬ್ಯಾಂಕ್ ಕಾಲೋನಿ, ಚಿತ್ರದುರ್ಗ

ಸತತ 13 ವರ್ಷಗಳಿಂದ ಕಾರ್ತೀಕ ಮಹೋತ್ಸವಕ್ಕೆ ದೀಪಾಲಂಕಾರ ಎಸ್.ಎಲ್.ಎನ್.ಎಸ್. ಶಾಮಿಯಾನ ಸಪ್ಲೇಯ‌ರ್ಸ್ ಚಿತ್ರದುರ್ಗ ಹಾಗೂ ಆರ್.ಆರ್. ಕ್ಯಾಟರಿಂಗ್ ವತಿಯಿಂದ ಅಡುಗೆ ತಯಾರಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಸಮಸ್ತ ಗ್ರಾಮಸ್ಥರು, ಸರ್ವಭಕ್ತಾಧಿಗಳು ತನು-ಮನ-ಧನದೊಂದಿಗೆ ಸಹಕರಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗೌರಸಮುದ್ರ ಮಾರಮ್ಮ ದೇವಾಲಯದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :

9886800003, 8618416841, 9901151427, 7353424042

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment