Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀಗಳ ಸಹಕಾರದಿಂದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿಯಿತು : ಶಾಸಕ ಡಾ.ಎಂ.ಚಂದ್ರಪ್ಪ

Facebook
Twitter
Telegram
WhatsApp

ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್. 25 : ಸಾವಿರಾರು ಕೋಟಿ ರೂ.ಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಮುತ್ತುಗದೂರು ಸರ್ಕಲ್‍ನಲ್ಲಿ ನಡೆಯುತ್ತಿರುವ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೇ ಶ್ರದ್ದಾಂಜಲಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬಹಳಷ್ಟು ಸಲ ಸರ್ಕಾರ ಎಚ್ಚರಿಕೆ ಕೊಟ್ಟರು ಇಂಜಿನಿಯರ್, ಗುತ್ತಿಗೆದಾರರು ಕೆಲಸ ಮಾಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳು ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಇವರುಗಳು ಮುಖ್ಯಮಂತ್ರಿಗಳಾಗಿದ್ದಾಗ ಸಾಕಷ್ಟು ಒತ್ತಡ ತಂದ ಪರಿಣಾಮ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ತಾಲ್ಲೂಕಿನ ಮುತ್ತುಗದೂರು ಗ್ರಾಮದ ಕೆರೆಗೆ ನೀರು ಹರಿಯಲು ಸಾಧ್ಯವಾಯಿತು. ಜಿ.ಎಂ.ಸಿದ್ದೇಶ್ವರ್‍ರವರು ಕೇಂದ್ರ ಮಂತ್ರಿಯಾಗಿದ್ದಾಗ ಸಾಕಷ್ಟು ಹಣ ಮಂಜೂರು ಮಾಡಿಸಿದ್ದಾರೆಂದು ಹೇಳಿದರು.

ರೈತರು, ಜನಸಾಮಾನ್ಯರ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಾಲ ಕಾಲಕ್ಕೆ ಇಂಜಿನಿಯರ್, ಗುತ್ತಿಗೆದಾರರುಗಳಿಗೆ ಎಚ್ಚರಿಕೆ ನೀಡುತ್ತ ಬಂದ ಪರಿಣಾಮ ಮುತ್ತುಗದೂರು ಗ್ರಾಮದ ಕೆರೆಗೆ ನೀರು ಬರುತ್ತಿದೆ. 2019 ರಲ್ಲಿ ಭರಮಸಾಗರ ಏತ ನೀರಾವರಿಗೆ 680 ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೆ. ಮೂರು ವರ್ಷಗಳಲ್ಲಿ ನಲವತ್ತು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಸಾಸಲು ಸರ್ಕಲ್‍ನಿಂದ ಹಿರೇಬೆನ್ನೂರು ಸರ್ಕಲ್‍ವರೆಗೆ 105 ಕೋಟಿ ರೂ.ಗಳಲ್ಲಿ ಕಾಂಕ್ರಿಟ್ ರಸ್ತೆಯಾಗಿದೆ. ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಲು ಯಾರಾದರೂ ಜಾಗ ಕೊಟ್ಟರೆ ಹತ್ತು ಕೋಟಿ ರೂ.ಗಳಾಗಲಿ ಕಾಮಗಾರಿಗೆ ಆರಂಭಿಸುತ್ತೇನೆ.

ಸಾಸಲು ಸರ್ಕಲ್‍ನಿಂದ ರುದ್ರಪ್ಪ ಪೆಟ್ರೋಲ್ ಬಂಕ್‍ವರೆಗೆ ರಸ್ತೆಗೆ ಆರು ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ. ಭೂತಪ್ಪನ ದೇವಸ್ಥಾನದ ಹತ್ತಿರ ಫ್ಲೈ ಓವರ್‍ಗೆ 34 ಕೋಟಿ ರೂ.ಗಳನ್ನು ಕೊಟ್ಟಿದ್ದೇನೆಂದರು.

ಶಾಂತಿವನ ವಿಶ್ರಾಂತಿ ಧಾಮದವರೆಗೆ ಸಿ.ಸಿ.ರಸ್ತೆ ಮಾಡಿಸುತ್ತೇನೆ. ಅಲ್ಲಿ ಬಿಲ್ಡಿಂಗ್ ಕಟ್ಟಲು ಹಣ ಮಂಜೂರು ಮಾಡಿಸುವೆ. ಮುತ್ತುಗದೂರು ಕೆರೆಗೆ ಎಸ್ಟಿಮೇಷನ್ ಮಾಡಿಸಿಕೊಟ್ಟರೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಲಾಗುವುದು. ಭರಮಸಾಗರ ಕೆರೆ ಮಧ್ಯೆ ನೀರು ಉಕ್ಕಿ ಹರಿಯುತ್ತಿರುವುದನ್ನು ಕಂಡು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪುಳಕಿತರಾದರು ಎಂದು ಡಾ.ಎಂ.ಚಂದ್ರಪ್ಪ ನುಡಿದರು.

ದಾವಣಗೆರೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಪುಟ್ಟಣ್ಣ, ರುದ್ರಣ್ಣ, ನಾಗರಾಜ್, ಕೃಷ್ಣಪ್ರಸಾದ್, ಶಶಿಪಾಟೀಲ್ ಮತ್ತಿತರ ಪ್ರಮುಖರು ಶ್ರದ್ದಾಂಜಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನನ್ನ ಬಳಿ ಇರುವ ದಾಖಲೆ ಕೊಟ್ಟರೆ ಇನ್ನು 6-7 ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ : ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ

  ಬೆಂಗಳೂರು: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾಗಿ ಬಂದ ಮರುದಿನವೇ ಸುದ್ದಿಗೋಷ್ಟಿ ನಡೆಸಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ. ವಿಚಾರಣೆ ಮಾಡುವುದಕ್ಕೆ

ನಿರ್ಮಲಾ ಸೀತರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರು ಕೋರ್ಟ್ ಆದೇಶ : ಕಾರಣವೇನು ಗೊತ್ತಾ..?

  ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ವಿರುದ್ಧ ಎಫ್ಐಆರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ನ್ಯಾಯಾಲಯಕ್ಕೆ ನಿರ್ಮಲಾ ಸೀತರಾಮನ್ ವಿರುದ್ಧ ದೂರು ಸಲ್ಲಿಕೆಯಾದ ಹಿನ್ನೆಲೆ ಎಫ್ಐಆರ್ ದಾಖಲಿಸಲು ಸೂಚನೆ

ಮೈಸೂರು ದಸರಾ 2024 ವೇಳಾಪಟ್ಟಿ ಬಿಡುಗಡೆ : ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ..?

  ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಅಂಬಾರಿ ಮೇಲೆ ನಾಡ ಅಧಿದೇವತೆಯನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಅದ್ದೂರಿ ಆಚರಣೆಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಬರದ ಸಿದ್ಧತೆ ಮಾಡಿಕೊಂಡಿದೆ. ದಸರಾ

error: Content is protected !!