Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅತ್ಯಾಚಾರ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅರೆಸ್ಟ್..!

Facebook
Twitter
Telegram
WhatsApp

 

ಬೆಂಗಳೂರು: ಅತ್ಯಾಚಾರ ಆರೋಪ ಕೇಳಿ ಬಂದಾಗಲೇ ತಲೆ ಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಬಂಧನವಾಗಿದೆ. ಇವರು ಖ್ಯಾತ ನೃತ್ಯ ಸಂಯೋಜಕರಾಗಿದ್ದಾರೆ. 21 ವರ್ಷದ ಡ್ಯಾನ್ಸರ್ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿನ ಆಧಾರದ ಮೇಲೆ, ಜಾನಿ ಮಾಸ್ಟರ್ ಬಂಧನವಾಗಿದೆ. ಬೆಂಗಳೂರಿನಲ್ಲಿ ಪೊಲಿಒಸರು ಬಂಧಿಸಿದ್ದಾರೆ.

ಜಾನಿ ಮಾಸ್ಟರ್ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದಾರೆ. ಆದರೆ ಈಗ ಮಾಡಿರುವ ಕೆಲಸಕ್ಕೆ ಬಹಳಷ್ಟು ಜನರಿಂದ ನಿಂದನೆ ಎದುರಿಸುತ್ತಿದ್ದಾರೆ. ಅತ್ಯಾಚಾರ ಆರೋಪ ಕೇಳಿ ಬಂದಾಗ ಮೊದಲಿಗೆ ಇದು ಸುಳ್ಳೆಂದೆ ವಾದಿಸಿದ್ದರು. ಚಿತ್ರರಂಗವೂ ಸಂತ್ರಸ್ತೆಯ ಪರವಾಗಿ ನಿಂತಾಗ ಜಾನಿ ಮಾಸ್ಟರ್ ತಲೆ ಮರೆಸಿಕೊಂಡಿದ್ದರು. ಟ್ರಾನ್ಸಿಟಿ ವಾರೆಂಟ್ ಮೇಲೆ ಅರೆಸ್ಟ್ ಮಾಡಲಾಗಿದೆ.

ಯುವತಿ ಇತ್ತೀಚೆಗೆ ಸೈಬರಾಬಾದ್ ಪೊಲೀಸರಿಗೆ, ಜಾನಿ ಮಾಸ್ಟರ್ ವಿರುದ್ಧ ದೂರು ದಾಖಲಾಗಿತ್ತು. 2019ರಲ್ಲಿ ತನ್ನನ್ನು ರಿಯಾಲಿಟಿ ಶೋ ಒಂದರಲ್ಲಿ ನೋಡಿ, ಆಕೆಗೆ ಅಸಿಸ್ಟೆಂಟ್ ಕೋರಿಯೋಗ್ರಾಫರ್ ಅವಕಾಶ ಕೊಡಿಸುವುದಾಗಿ ಹೇಳಿದ್ದರಂತೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಕೆಲಸ ನೀಡಿದ ಬಳಿಕ ಯುವತಿಯನ್ನು ಲೈಂಗಿಕ ತೃಷೆಗೆ ಬಳಸಿಕಿಂಡಿದ್ದಾರೆ. ಅಲ್ಲದೆ ನಟಿ ಕೊಟ್ಟಿರುವ ದೂರಿನಂತೆ ಜಾನಿ ಮಾಸ್ಟರ್ ಜೊತೆಗೆ ಸೇರಿ ಅವರ ಪತ್ನಿಯೂ ಹಲ್ಲೆ ಮಾಡಿದ್ದರಂತೆ.

 

ಪ್ರಕರಣ ಬೆಳಕಿಗೆ ಬಂದ ಬಳಿಕ ಸಂತ್ರಸ್ತ ಯುವತಿಗೆ ಚಿತ್ರರಂಗದ ಹಲವು ಗಣ್ಯರಿಂದ ಬೆಂಬಲ ಸಿಕ್ಕಿದೆ. ನಟ, ನಿರ್ದೇಶಕ, ನಟಿಯರು ಕೂಡ ಸಂತ್ರಸ್ತೆಯ ಪರವಾಗಿ ನಿಂತಾಗ, ಕೇಸ್ ಸ್ಟ್ರಾಂಗ್ ಆಗಿದೆ. ಹೀಗಾಗಿ ಜಾನಿ ಮಾಸ್ಟರ್ ಅನ್ನು ಬಂಧಿಸಿಲಾಗಿದೆ.

ಜಾನಿ ಮಾಸ್ಟರ್ ದಕ್ಷಿಣ ಭಾರತದ ಖ್ಯಾತ ಕೊರಿಯೋಗ್ರಾಫರ್. ದಕ್ಷಿಣ ಭಾಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರಡ. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವರ ಜೊತೆಗೆ ವರ್ಕ್ ಮಾಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿಯೂ ಗುರುತಿಸಿಕೊಂಡಿದ್ದು, ಅಪ್ಪುಗೆ ಕೊರಿಯೋಗ್ರಫಿ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!