Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಣ್ಣನನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ತೆಲುಗು‌ ನಟ ನಾಗಾರ್ಜುನ

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಸಂಪಾದಿಸಿದ್ದು ಏನು ಅನ್ನೋದು ಅವರ ನಿಧನದ ಬಳಿಕ ಎಲ್ಲರಿಗೂ ಚೆನ್ನಾಗೆ ಅರ್ಥವಾಗಿದೆ. ಅವರ ಸರಳತೆಗೆ ಮತ್ತೊಬ್ಬರಿಲ್ಲ. ಹುಟ್ಟಿದಾಗಲೇ ಚಿನ್ನದ ಸ್ಪೂನ್ ನಲ್ಲೇ ಊಟ ಮಾಡಿದವರು. ರಾಯಲ್ ಆಗಿ ಬೆಳೆದವರು.‌ಕೋಟಿ ಕೋಟಿ ಹಣ ಇದ್ರು ಕೊಂಚವೂ ಅಹಂ ಅನ್ನೋದು ಅವ್ರಲ್ಲಿ ಇರ್ಲಿಲ್ಲ. ಅಂಥ ವ್ಯಕ್ತಿಯನ್ನ ಯಾರ್ ತಾನೇ ಇಷ್ಟ ಪಡಲ್ಲ ಹೇಳಿ. ಕನ್ನಡ ಇಂಡಸ್ಟ್ರಿ ಮಾತ್ರ ಅಲ್ಲ. ಪಕ್ಕದ ತೆಲುಗು ಇಂಡಸ್ಟ್ರಿಗೂ ಅಪ್ಪು ಅಂದ್ರೆ ಅಚ್ಚುಮೆಚ್ಚು.

ಅಪ್ಪು ಇನ್ನಿಲ್ಲ ಅನ್ನೋದನ್ನ ಯಾರಿಗೂ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಅಪ್ಪು ನಿಧನ ಸುದ್ದಿ ಕೇಳಿ ಚಿರಂಜೀವಿ, ವೆಂಕಟೇಶ್, ಅಲಿ ಸೇರಿದಂತೆ ಹಲವರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಇದೀಗ ಅಕ್ಕಿನೇನಿ ನಾಗಾರ್ಜುನ ಕೂಡ ಅಪ್ಪು ಮನೆಗೆ ಭೇಟಿ ನೀಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಹಾಗೂ ಶಿವಣ್ಣ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಾಗಾರ್ಜುನ, ಪುನೀತ್ ನಮ್ಮನ್ನ ಬಿಟ್ಟು ಹೋಗಿದ್ದು ಶಾಕಿಂಗ್ ಆಗಿದೆ. ಈಗಲೂ ಇಲ್ಲೇ ಎಲ್ಲೊ ಇದ್ದಾರೇನೋ ಅನ್ನಿಸುತ್ತಿದೆ. ಯಾರೇ ಮಾತಾಡಿದ್ರು ಪುನೀತ್ ಅವರ ಬಗ್ಗೆ ಒಳ್ಳೆಯ ವಿಚಾರಗಳನ್ನೇ ಮಾತನಾಡುತ್ತಾರೆ.

ಅವರು ಹೀರೋ ಮಾತ್ರ ಅಲ್ಲ ಎಷ್ಟೋ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಇಂಥಹ ವ್ಯಕ್ತಿಯನ್ನ ದೇವರು ಯಾಕೆ ಕರೆದುಕೊಂಡು ಹೋದರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಶಿವಣ್ಣನನ್ನು ಭೇಟಿಯಾದಾಗ ಏನು ಹೇಳಬೇಕು ಅಂತಾನು ತಿಳಿಲಿಲ್ಲ. ದೇವರು ಅವರಿಗೆಲ್ಲಾ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಕೇಸ್ ಸಿಐಡಿಗೆ ಒಪ್ಪಿಸಿದ ಸರ್ಕಾರ : ಬೇಸರ ಮಾಡಿಕೊಂಡ ರಂಭಾಪುರಿ ಶ್ರೀಗಳು

ಹುಬ್ಬಳ್ಳಿ: ನೇಹಾಳ ಕೊಲೆಯಾದ ಮೇಲೆ ನಿರಂಜನ ಹೀರೆಮಠ ಅವರಿಗೆ ಸಾಂತ್ವನ ಹೇಳಲು ಇಂದು ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದಾರೆ. ಮನೆಗೆ ಬಂದು ಧೈರ್ಯ ಹೇಳಿ, ಒಂದಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೇಸನ್ನು

ಬೆಳಗಾವಿಯಲ್ಲಿ ಪ್ರಧಾನಿ ಮೋದಿ : ಸಿಎಂ ಸಿದ್ದರಾಮಯ್ಯ ವಿಮಾನಕ್ಕೆ ನಿರಾಕರಣೆ..!

ಬೆಳಗಾವಿ: ರಾಜ್ಯದ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿದ್ದು, ಬಳಿಕ ಅಲ್ಲಿಂದ ಶಿರಸಿಗೆ ತೆರಳಲಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಜನರನ್ನುದ್ದೇಶಿಸಿ

ದಾವಣಗೆರೆ, ಶಿರಸಿಯಲ್ಲಿ ಮೋದಿ ಮತಬೇಟೆ : ಬೆಳಗಾವಿಯಿಂದ ಆರಂಭ

ಬೆಳಗಾವಿ: ಈಗಾಗಲೇ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಜನತೆ ರೆಡಿಯಾಗಿದ್ದಾರೆ. ಈಗಾಗಲೇ ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ನಾಳೆಯೂ ರಾಜ್ಯ

error: Content is protected !!