Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುನೀತ್ ರಾಜ್ ಕುಮಾರ್ ಸಾವು, ಅನ್ಯಾಯದ ಸಾವು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

Facebook
Twitter
Telegram
WhatsApp

ಚಿತ್ರದುರ್ಗ, (ಅ.29) : ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರು ಕೇವಲ 46 ನೇ ವಯಸ್ಸಿನಲ್ಲಿ   ನಮ್ಮನ್ನು ಅಗಲಿರುವುದು ಊಹಿಸುಕೊಲ್ಳಲು ಆಗುತ್ತಿಲ್ಲ. ಇದು ಅನ್ಯಾಯದ ಸಾವು. ಅವರು ಆಸ್ಪತ್ರೆಗೆ ಸೇರಿದ್ದ ಸುದ್ದಿ ಬೆಳಗ್ಗೆ ತಿಳಿದಿತ್ತು. ಆರೋಗ್ಯವಾಗಿ ಮರಳಿ ಬರುತ್ತಾರೆಂದು ತಿಳಿದಿದ್ದೆ ಆದರೆ ವಿಧಿಯಾಟವಾಡಿದೆ ಎಂದರು.

ಚಿತ್ರದುರ್ಗದಲ್ಲಿ ದೊಡ್ಮನೆ ಹುಡುಗ, ಅಜಯ್  ಸಿನಿಮಾಗಳ ಚಿತ್ರೀಕರಣ ಕೋಟೆ ಮತ್ತು ಮದಕರಿ ವೃತ್ತದಲ್ಲಿ  ನಡೆಸಿದ್ದರು ಯಶಸ್ವಿಯಾಗಿದ್ದರು. ಅವರಿಗೆ ನಾನು ಸಹ ದೊಡ್ಡ ಅಭಿಮಾನಿಯಾಗಿದ್ದೆ ಎಂದರು.

ತಂದೆ ರಾಜ್ ಕುಮಾರ್ ಅವರಂತೆ ಪುನೀತ್ ರಾಜ್ಯದಲ್ಲಿ ಅತಿ ಹೆಚ್ಚು  ಅಭಿಮಾನಿಗಳನ್ನು ಹೊಂದಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಾದರಿ ಚಿತ್ರಗಳನ್ನು ತೆಗೆದು ಜನಗಳ ನಿಜವಾದ ರಾಜ್ ಕುಮಾರ್ ಆದರು. ತಂದೆಯಂತೆ ಅವರು ಸಹ ಸರಳ ಸಜ್ಜನಿಕೆ, ದೊಡ್ಡ ಸಿನಿಮಾ ಸ್ಟಾರ್ ಎಂಬ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದರು.

ನಮಗೆ ತಿಳಿದಿರುವಂತೆ ಟ್ರಸ್ಟ್ ಮೂಲಕ ಅನೇಕ ಶಾಲೆಗಳ ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ದಾಶ್ರಮ, ಆನಾಥಾ ಆಶ್ರಮ ಮೂಲಕ ಎಲ್ಲಾ ನಟರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದರು.

ರಾಜ್ ಕುಮಾರ್ ಸಿನಿಮಾ ಮೂಲಕ ರಾಜ್ಯದ ಯುವ ಸಮೂಹದಲ್ಲಿ ತಂದೆ-ತಾಯಿಯನ್ನು ಹೇಗೆ ಹಾರೈಕೆ ಮಾಡಬೇಕು ಎಂಬುದನ್ನು  ಒಂದು ಪ್ರಸ್ತುತ ಸಮಾಜವನ್ನು ಕಟುಂಬಗಳನ್ನು ತಿದ್ದುವ ಕೆಲಸ ಮಾಡಿದರು. ನಾನು ಸಹ ರಾಜ್ ಕುಮಾರ್ ಸಿನಿಮಾ ನೋಡಿ ಮನ ಸೋತಿದ್ದೆ ಎಂದು ಸ್ಮರಿಸಿದರು.

ರಾಜ್ ಕುಟುಂಬಕ್ಕೆ ದೇವರು ಪುನೀತ್ ರಾಜ್ ಕುಮಾರ್ ಕಳೆದುಕೊಂಡಿರುವ ದುಃಖವನ್ನು ಭರಿಸುವ ಶಕ್ತಿ ದೇವರು ರಾಜ್ ಕುಟುಂಬಕ್ಕೆ ‌ ನೀಡಲಿ  ಮತ್ತು ರಾಜ್ಯ ಎಲ್ಲಾ ಅವರ ಅಭಿಮಾನಿಗಳು ಶಾಂತಿಯಿಂದ ಅವರ ವಿಧಿ ವಿಧಾನ ಅಂತಿಮ ಕಾರ್ಯ ಮಾಡಲು ಸಹಕರಿಸಬೇಕು  ಎಂದು  ಮನವಿ ಮಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಲ್ಲುಜ್ಜದೇ ನೀರು ಕುಡಿತೀರಾ..? ಡೋಂಟ್ ವರಿ ಅದರಿಂದಾನೂ ಆರೋಗ್ಯ ಲಾಭಗಳಿವೆ

ಸುದ್ದಿಒನ್ : ಅನೇಕ ಜನರು ಬೆಳಿಗ್ಗೆ ಹಲ್ಲುಜ್ಜಿದ ನಂತರವೇ ಏನನ್ನಾದರೂ ತಿನ್ನಲು ಅಥವಾ ಕುಡಿಯಲು ಬಯಸುತ್ತಾರೆ. ಹಲ್ಲುಜ್ಜದೆ ನೀರು ಕುಡಿಯುವುದು ಉತ್ತಮವೇ ? ವೈದ್ಯರ ಪ್ರಕಾರ ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ದಿನಕ್ಕೆ 8 ರಿಂದ

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು.

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು. ಮಂಗಳವಾರ ರಾಶಿ ಭವಿಷ್ಯ -ಮೇ-7,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

error: Content is protected !!