Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿದೆ ವಿಂಡೋಸೀಟ್ ಸರೆಂಡರ್ ಹಾಡು..!

Facebook
Twitter
Telegram
WhatsApp

ವಿಂಡೋಸೀಟ್ ಬಗ್ಗೆ ಈಗಾಗಲೇ ನಿಮಗೆಲ್ಲಾ ಗೊತ್ತೆ ಇದೆ. ಶೀತಲ್ ಶೆಟ್ಟಿ ನಿರ್ದೇಶನ ಮಾಡ್ತಿರೋ ಈ ಸಿನಿಮಾದ ಅಪ್ಡೇಟ್ ಆಗಾಗ ನಿಮ್ಗೆಲ್ಲಾ ಸಿಗುತ್ತಲೇ ಇತ್ತು. ಹಾಗಾಗಿಯೇ ಸಿನಿಮಾ ಮೇಲಿನ ಭರವಸೆ-ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಬೆಳೆಯುತ್ತಾ ಹೋಯ್ತು. ಸಿನಿಮಾ ನೋಡಲೇಬೇಕೆಂಬ ಕಂಟೆಂಟ್ ಕೊಟ್ಟಿರುವ ವಿಂಡೋಸೀಟ್ ಇದೀಗ ಹೊಸದೊಂದು ಹಾಡನ್ನ ರಿಲೀಸ್ ಮಾಡಿದೆ.

ಸರೆಂಡರ್ ಅನ್ನೋ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡನ್ನ ನೋಡಿದ್ರೆ ಖಂಡಿತ ಪಡೆ ಹೈಕ್ಳು ಮನಸ್ಸು ಡಿಸ್ಟರ್ಬ್ ಆಗದೆ ಇರದು. ಆ ಮಟ್ಟಿಗಿನ ಮಾದಕತೆ ಹಾಡಿನಲ್ಲಿ ತುಂಬಿದೆ. ಇಂಗ್ಲೀಷ್ ಪದಗಳಲ್ಲೇ ಎಲ್ಲಾ ಹುಡುಗರ ಚಿತ್ತ ಕದ್ದಿದೆ ವಿಂಡೋಸೀಟ್. ಹಾಡನ್ನ ನೋಡಿದವರ ಕಣ್ಣುಗಳು ಒಂದು ಕ್ಷಣವೂ ಆ ಕಡೆ ಈ ಕಡೆ ಹೋಗಲ್ಲ. ಅಷ್ಟು ರೋಮಾಂಚನಕಾರಿಯಾಗಿ ಹಾಡನ್ನ ಸೆರೆ‌ ಹಿಡಿಯಲಾಗಿದೆ.


ಜಾಝ್ ಶೈಲಿಯಲ್ಲಿ ಮೂಡಿಬಂದ ಸರೆಂಡರ್ ಹಾಡು ಅದ್ಭುತವಾಗಿದೆ ಅನ್ನೋದರಲ್ಲಿ ಎರಡೂ ಮಾತಿಲ್ಲ. ನಿಮ್ಗೂ ಅದರ ಅನುಭವ ಆಗ್ಬೇಕು ಅಂದ್ರೆ ಒಮ್ಮೆ ಹಾಡನ್ನ ನೋಡ್ಬಿಡಿ. ಆಗ ನಿಮ್ಮ ಗಮನಕ್ಕೂ ಆ ಅನುಭವ ಬಂದೇ ಬರುತ್ತೆ. ಇನ್ನೊಂದು ವಿಶೇಷ ಅಂದ್ರೆ ಜಾಝ್ ಶೈಲಿಯ ಹಾಡು ಕನ್ನಡದ ಪಾಲಿಗೆ ಇದೇ ಮೊದಲು. ಈ ಹಾಡು ಎಲ್ಲರ ಹಾರ್ಟ್ ಗೂ ಫೇವರಿಟ್ ಆಗಿದೆ ಅನ್ನೋದಕ್ಕೆ ಕೆಲವೇ ಗಂಟೆಗಳಲ್ಲಿ ಆಗಿರೋ ವೀಕ್ಷಣೆ, ಕಮೆಂಟ್ ಗಳೇ ಸಾಕ್ಷಿ.

ಮಹೇಶ್ ರಘುನಂದನ್ ಬರೆದಿರೋ ಸಾಹಿತ್ಯಕ್ಕೆ, ಸೌಂದರ್ಯ ಜಯಚಂದ್ರನ್ ಧ್ವನಿ ನೀಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಸಿನಿಮಾದಲ್ಲೂ ಸಂಗೀತದ ಮ್ಯಾಜಿಕ್ ಮಾಡಿದ್ದಾರೆ. ಸಿನಿಮಾಗೆ ಕೆ ಎಸ್ ಕೆ ಶೋ ರೀಲ್ ಬ್ಯಾನರ್ ನಡಿ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾ ಹಿಡಿದಿದ್ದು, ರಿತ್ವಿಕ್ ಸಂಕಲನವಿದೆ.

ನಿರೂಪ್ ಭಂಡಾರಿ ನಾಯಕರಾಗಿದ್ದು, ಅಮೃತಾ ಅಯ್ಯರ್ ಹಾಗೂ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಉಳಿದಂತೆ ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!