Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

14 ವರ್ಷಗಳ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ.. ಕಡ್ಡಿಯೂ ಹೆಚ್ಚಳ..!

Facebook
Twitter
Telegram
WhatsApp

ಚೆನ್ನೈ: ಬೆಂಕಿಪೊಟ್ಟಣ ಖರೀದಿ ಮಾಡದವರು ಯಾರಾದ್ರೂ ಇದ್ದಾರಾ..? ನೋ ವೆ ಚಾನ್ಸೆ ಇಲ್ಲ. ಪ್ರತಿಯೊಬ್ಬರ ಮನೆ ದೇವರ ಕೋಣೆಯಲ್ಲಿ ಇರುತ್ತೆ. ಕೆಲವು ಪುರುಷರ ಜೇಬಲ್ಲಿ ಸದಾ ಇರುತ್ತೆ. ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಬೆಂಕಿಪೊಟ್ಟಣ ಸಹ ಒಂದು. ಹೀಗಿದ್ರು ಸಹ ಬೆಂಕಿಪೊಟ್ಟಣ ತನ್ನ ಬೆಲೆಯನ್ನ ಹೆಚ್ಚಳ ಮಾಡಿಕೊಂಡಿರಲಿಲ್ಲ. ಸುಮಾರು 14 ವರ್ಷಗಳ ಬಳಿಕ 1 ರೂಪಾಯಿ ಏರಿಕೆ ಮಾಡಿದೆ.

ಡಿಸೆಂಬರ್ 1 ರಿಂದ ಬೆಂಕಿಪೊಟ್ಟಣದ ಬೆಲೆ 2 ರೂಪಾಯಿ ಆಗಲಿದೆ. ಸದ್ಯಕ್ಕೆ ಬೆಂಕಿಪೊಟ್ಟಣದ ಬೆಲೆ 1 ರೂಪಾಯಿ ಇದೆ. ಅಷ್ಟೆ ಅಲ್ಲ ಬೆಲೆ ಹೆಚ್ಚಳವಾದಂತೆ ಅದರಲ್ಲಿರುವ ಕಡ್ಡಿಯೂ ಹೆಚ್ಚಳವಾಗಲಿದೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಕಂಪನಿ, ಬೆಂಕಿಪೊಟ್ಟಣಕ್ಕೆ ಖರ್ಚಾಗುವ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ತಿಳಿಸಿದೆ. ಸದ್ಯಕ್ಕೆ 1 ರೂಪಾಯಿ ಪಟ್ಟಣದಲ್ಲಿ 36 ಕಡ್ಡಿಗಳಿವೆ. 2 ರೂಪಾಯಿ ಪೊಟ್ಟಣದಲ್ಲಿ 50 ಕಡ್ಡಿಗಳಿರುತ್ತವೆ ಎಂಬುದನ್ನ ತಿಳಿಸಿದೆ. ಈ ಮೂಲಕ ಬೆಲೆ ಏರಿಕೆ ಜೊತೆಗೆ ಹೆಚ್ವಿನ ಕಡ್ಡಿಗಳು ನಮಗೆ ದೊರೆಯಲಿದೆ.

ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ಕಂಪನಿ ನಿರ್ಧರಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

error: Content is protected !!