Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಏನಿದು ಕೆಎಂಎಫ್ ತೆಗೆದು ಅಮೂಲ್ ಕರೆತರುವ ಹುನ್ನಾರ..? ಯಾಕಿಷ್ಟು ಆಕ್ರೋಶ..?

Facebook
Twitter
Telegram
WhatsApp

ಬೆಂಗಳೂರು: ಬೆಳಗ್ಗೆಯಿಂದಾನು ನಂದಿನಿ ವರ್ಸಸ್ ಅಮೂಲ್ ಹಾಲಿನ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಗುಜರಾತ್ ನ ಬ್ರಾಂಡ್ ಆಗಿರುವ ಅಮೂಲ್ ಜೊತೆಗೆ ನಂದಿನಿಯನ್ನು ವಿಲೀನ ಮಾಡುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ವಿಚಾರ ಕರುನಾಡ ಜನರನ್ನು ಆಕ್ರೋಶಭರಿತರನ್ನಾಗಿಸಿದೆ. ನಂದಿನಿ ಜೊತೆಗೆ ಅಮೂಲ್ ವಿಲೀನವಾಗುವುದು ಬೇಡ. ನಮ್ಮ ಸ್ವಂತದ ಬ್ರಾಂಡ್ ನಮ್ಮಲ್ಲಿಯೇ ಇರಲಿ ಎಂಬ ಎಚ್ಚರಿಕೆಯ ಧ್ವನಿ ಕೇಳಿಸುತ್ತಿದೆ.

ಗುಜರಾತ್ ಕೋ ಆಪರೇಟಿವ್ ಹಾಲು ಮಾರಾಟ ಮಹಾಮಂಡಳ ಅಮೂಲ್ ಹಾಲು ಉತ್ಪಾದಕತೆಯನ್ನು ನಡೆಸುತ್ತಿದೆ. ಇತ್ತಿಚೆಗಷ್ಟೇ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಘೋಷಿಸಿತ್ತು. ಏಪ್ರಿಲ್ 5 ರಂದು ಅಮೂಲ್ ಕನ್ನಡದಲ್ಲಿಯೇ ಒಂದು ಟ್ವೀಟ್ ಮಾಡಿತ್ತು. ಹಾಲು ಮತ್ತು ಮೊಸರಿನಿಂದ ತಾಜಾತನದ ಹೊಸ ಅಲೆ ಈಗ ಬೆಂಗಳೂರಿಗೆ ಬರುತ್ತಿದೆ. ಶೀಘ್ರದಲ್ಲಿಯೇ ಹೆಚ್ಚಿನ ಮಾಹಿತಿ ಬರಲಿದೆ” ಎಂದು ತಿಳಿಸಿತ್ತು.

ಈ ಕಡೆ ಕರ್ನಾಟಕದಲ್ಲಿ ಕೆಎಂಎಫ್ ಉತ್ಪಾದನೆ ಲಾಭದಾಯಕ ಹಾಗೂ ಉತ್ತಮ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲೆಡೆ ತನ್ನ ಉತ್ಪಾದನೆ ವಿಸ್ತರಿಸಿದ್ದು, ಗ್ರಾಮೀಣ ಭಾಗದಲ್ಲೂ ವಿಸ್ತರಿಸಿದೆ. ಗ್ರಾಮೀಣ ಭಾಗದಲ್ಲೂ ರೈತರ ಜೀವನೋಪಾಯದ ಒಂದು ಭಾಗವಾಗಿದೆ. ನಂದಿನಿ ಉತ್ಪನ್ನದಿಂದ ಕನ್ನಡಿಗರ ನಿತ್ಯ ಜೀವನ ನಡೆಯುತ್ತಿದೆ. ಆದರೆ ಈಗ ಅಮೂಲ್ ಜೊತೆಗೆ ವಿಲೀ‌ನ ಮಾಡಲು ಹೊರಟಿರುವುದನ್ನು ಜನ ಖಂಡಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!