Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾರಿಗೆ ವಿಚಾರಕ್ಕೆ ಗೆಟ್ ಲಾಸ್ಟ್ ಎಂದ ಕಾರಜೋಳ.. ನೀನ್ಯಾರು ಹೇಳೋಕೆ ಎಂದ ರಂಗನಾಥ್ : ಸದನದಲ್ಲಿ ಕೋಲಾಹಲ..!

Facebook
Twitter
Telegram
WhatsApp

ಬೆಳಗಾವಿ: ಕೊರೊನಾ ಸಮಸ್ಯೆಯ ಬಳಿಕ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಗಳ ಕೊರತೆ ಉಂಟಾಗಿದೆ. ಈ ವಿಚಾರವನ್ನು ಇಂದು ಸದನದಲ್ಲೂ ಪ್ರಸ್ತಾಪ ಮಾಡಲಾಗಿದೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿದ್ದು ಸವದಿ ವಿಚಾರ ಎತ್ತಿದ್ದು, ನಮ್ಮ ಕ್ಷೇತ್ರದಲ್ಲಿ ಕಾಲೇಜು ಮಕ್ಕಳಿಗೆ ಬಸ್ ಗಳ ವ್ಯವಸ್ಥೆ ಸರಿಯಾಗಿಲ್ಲ. ಮಕ್ಕಳು ಶಾಲೆಗೆ ಹೋಗುವುದಕ್ಕೆ ಬಸ್ ಗಳನ್ನು ಕೊಡಿ. ದೊಡ್ಡ ಬಸ್ ಕೊಡದೆ ಇದ್ದರು ಪರವಾಗಿಲ್ಲ, ಮಿನಿ ಬಸ್ ಆದರೂ ನೀಡಿ ಎಂದಿದ್ದರು. ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮುಲು, ಸಮಸ್ಯೆ ಯಾವ ಭಾಗದಲ್ಲಿ ಇದೆ ಹೇಳಿ ಬಗೆಹರಿಸೋಣಾ ಎಂದರು.

ಸಿದ್ದು ಸವದಿ ಕೂಡ ಈ ಮಾತಿಗೆ ತೃಪ್ತರಾಗಲಿಲ್ಲ. ಜೊತೆಗೆ ಮಾಜಿ ಸಚಿವ ಆರ್ ವಿ ದೇಶಪಾಂಡೆ ಕೂಡ ಬೆಂಬಲ ಸೂಚಿಸಿದರು. ಕನಿಷ್ಠ ಮೂಲ ಸೌಕರ್ಯದ ಅಡಿಯಲ್ಲಿ ಬಸ್ ಸೌಲಭ್ಯ ಕೊಡದೆ ಇದ್ರೆ ಹೇಗೆ ರಾಮುಲು ಅವರೇ..? ಸದನಕ್ಕೆ ತಪ್ಪು ಮಾಹಿತಿ ನೀಡವೇಡಿ ಎಂದರು. ಬಳಿಕ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಹೋರಾಟ ಮಾಡಿದರು. ಇದೇ ವೇಳೆ ಶಾಸಕ ಕುಣಿಗಲ್ ರಂಗನಾಥ್ ಹಾಗೂ ಗೋವಿಂದ ಕಾರಜೋಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ರಂಗನಾಥ್ ಅವರಿಗೆ ಗೆಟ್ ಲಾಸ್ಟ್ ಎಂದು ಬೈದರು. ಬಳಿಕ ರಂಗನಾಥ್, ಅದನ್ನು ಹೇಳುವುದಕ್ಕೆ ನೀನ್ಯಾರು..? ನನ್ನ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ ನೀನ್ಯಾರು ಎಂದು ಹರಿಹಾಯ್ದ ಘಟನೆ ನಡೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!