Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾನೇ ಸಾಯಿಸಿದ ಸೊಳ್ಳೆಗಳ ಜೊತೆ ಕೋರ್ಟ್ ಗೆ ಹಾಜರಾದ ದಾವುದ್ ಇಬ್ರಾಹಿಂ ಮಾಜಿ ಸಹಚರ..!

Facebook
Twitter
Telegram
WhatsApp

ಮುಂಬೈ: ಜೈಲಿನಲ್ಲಿ ಸೊಳ್ಳೆಗಳು ಜಾಸ್ತಿ ಎಂಬ ಮಾತು ಇದೆ. ಇದೀಗ ತಾನಿದ್ದ ಕೊಠಡಿಯಲ್ಲಿ ಎಷ್ಟು ಸೊಳ್ಳೆಗಳು ಇದ್ದವು ಎಂಬುದನ್ನು ಪ್ರೂವ್ ಮಾಡುದಕ್ಕೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಮಾಜಿ ಸಹಚರ ಎಜಾಜ್ ಲಕ್ಡಾವಾಲಾ ಬಾಕ್ಸ್ ಒಂದರಲ್ಲಿ ಸತ್ತ ಸೊಳ್ಳೆಗಳನ್ನು ಸೇವ್ ಮಾಡಿಕೊಂಡು ಕೋರ್ಟ್ ಗೆ ಬಂದಿದ್ದ ವಿಚಿತ್ರ ಘಟನೆ ನಡೆದಿದೆ.

2020ರಲ್ಲಿಯೇ ಎಜಾಜ್ ಬಂಧನವಾಗಿತ್ತು. ಆಗ ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಿದ್ದರು. ಆ ವೇಳೆಯೂ ಎಜಾಜ್ ಸೊಳ್ಳೆ ಸಮಸ್ಯೆಯ ಬಗ್ಗೆ ಕೋರ್ಟ್ ಗೆ ಮನವಿ ಮಾಡಿದ್ದನು. ಆಗ ಕೋರ್ಟ್ ಸೊಳ್ಳೆ ಪರದೆಯನ್ನು ಕೊಡಲು ಅನುಮತಿ ನೀಡಿತ್ತು. ಆದರೆ ಈಗ ಭದ್ರತೆಯ ದೃಷ್ಟಿಯಿಂದ ಸೊಳ್ಳೆ ಪರದೆಯನ್ನು ಕೊಡುವುದನ್ನು ನಿಲ್ಲಿಸಿದೆ.

ಹೀಗಾಗಿ ತಾನು ಇದ್ದ ಕೊಠಡಿಯಲ್ಲಿ ಎಷ್ಟು ಸೊಳ್ಳೆಗಳ ಕಾಟವಿದೆ ಎಂದು ಕೋರ್ಟ್ ಗೆ ತೋರಿಸಲು ಡಬ್ಬ ಒಂದರಲ್ಲಿ ತಾನು ಸಾಯಿಸಿದ ಎಲ್ಲಾ ಸೊಳ್ಳೆಗಳನ್ನು ಬಾಕ್ಸ್ ಒಂದರಲ್ಲಿ ಸೊಳ್ಳೆಗಳನ್ನು ತಂದು, ಕೋರ್ಟ್ ಮುಂದೆ ಇಟ್ಟಿದ್ದಾನೆ. ಮತ್ತೆ ಕೋರ್ಟ್ ನಲ್ಲಿ ಸೊಳ್ಳೆ ಪರದೆಗೆ ಮನವಿ ಮಾಡಿದ್ದಾನೆ. ಆದ್ರೆ ಈ ಬಾರಿ ಯಾರಿಗೂ ಸೊಳ್ಳೆ ಪರದೆ ಕೊಡುವುದಿಲ್ಲ. ನಿನ್ನಂತೆ ಎಲ್ಲಾ ಕೈದಿಗಳು ಸೊಳ್ಳೆ ಕಡಿಸಿಕೊಂಡೆ ಮಲಗುತ್ತಾರೆ ಎಂದಿದೆ ಕೋರ್ಟ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಮನಗರದ ತೋಟದ ಮನೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್ : ಯೋಗೀಶ್ವರ್ ಸಮಾಧಾನಗೊಳಿಸಲು ನಿರ್ಧಾರ..!

    ರಾಮನಗರ: ಚನ್ನಪಟ್ಟಣ ಬೈಎಲೆಕ್ಷನ್ ವಿಚಾರ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ರೆ, ಜೆಡಿಎಸ್ ಲೆಕ್ಕಚಾರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೂ ಬಹಳ ಮುಖ್ಯವಾಗಿದೆ. ಇಲ್ಲಿ ಮೈತ್ರಿ

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ, ಕಡಲೆ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ…!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)    ಇಂದಿನ             

ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ : ಎರಡನೇ ಪತ್ನಿಗೆ 100 ಕೋಟಿ ಆಸ್ತಿ

ಬೆಂಗಳೂರು :ಮಾಜಿ ಡಾನ್ ಮುತ್ತಪ್ಪ ರೈ ಸಾವನ್ನಪ್ಪಿದ ಬಳಿಕ ಅವರ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಸಾವಿರಾರು ಕೋಟಿ ಆಸ್ತಿಯನ್ನು ಮುತ್ತಪ್ಪ ರೈ ಸಾಯುವುದಕ್ಕೂ ಮುನ್ನ ಮನೆಕೆಲಸದವರಿಗೂ ಸೇರಿ ಬರೆದಿದ್ದರು. 2019ರಲ್ಲಿ

error: Content is protected !!