Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುನೀತ ಪರ್ವಕ್ಕೆ ಬರಲು ಆಗದವರು ಇದ್ದಲ್ಲಿಯೇ ಲೈವ್ ನೋಡಬಹುದು : PRK Audioದಲ್ಲಿ ಲೈವ್ ಸಿಗಲಿದೆ

Facebook
Twitter
Telegram
WhatsApp

 

ಪವರ್ ಸ್ಟಾರ್ ಡಾ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲಾ ಅಗಲಿ ವರ್ಷವಾಗುತ್ತಾ ಬರುತ್ತಿದೆ. ಆದರೆ ಆ ಘಟನೆಯನ್ನು ನೆನೆದರೆ ವರ್ಷವಾಗೋಯ್ತಾ ಎಂಬ ಆಶ್ಚರ್ಯವೂ ಕಾಡುತ್ತೆ. ಆ ಕಹಿ ಘಟನೆಯನ್ನು ನೆನೆಯುವುದಕ್ಕೂ ಆಗುವುದಿಲ್ಲ. ಮರೆಯುವುದಕ್ಕೂ ಆಗುತ್ತಿಲ್ಲ. ಇದರ ನಡುವೆ ಅಪ್ಪು ಕಡೆ ಸಿನಿಮಾ ಎಂಬ ನೋವು ಇನ್ನೊಂದು ಕಡೆ.

ಇಷ್ಟು ದಿನ ಅಪ್ಪು ನಟಿಸಿದ್ದ ಸಿನಿಮಾಗಳನ್ನು ನೋಡಿಕೊಂಡು ನೋವಿನ ನಡುವೆ ಕೊಂಚ ಸಮಾಧಾನವನ್ನು ಮಾಡಿಕೊಂಡಿದ್ದೆವು. ಆದರೆ ಇನ್ನು ಮುಂದೆ ಅದು ಸಾಧ್ಯವೇ ಇಲ್ಲ. ಅಪ್ಪು ನಟಿಸಿ, ನಕ್ಕು ನಲಿದಿರುವ ಕಡೆಯ ಸಿನಿಮಾ ಗಂಧದ ಗುಡಿ. ಅವರನ್ನು ಮತ್ತೆ ಹೊಸದಾಗಿ ತೆರೆಯ ಮೇಲೆ ನೋಡುವುದಕ್ಕೆ ಆಗುವುದಿಲ್ಲ. ಅಪ್ಪು ತುಂಬಾ ಇಷ್ಟ ಪಟ್ಟು ಮಾಡಿರುವಂತ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ಇದೇ ತಿಂಗಳ 28ರಂದು ತೆರೆಗೆ ಬರುತ್ತಿದೆ.

ಅದರ ಉಸ್ತುವಾರಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತೆಗೆದುಕೊಂಡಿದ್ದಾರೆ. ಅಶ್ವಿನಿ ಅವರ ಜೊತೆಗೆ ಇಡೀ ದೊಡ್ಮನೆ ಕುಟುಂಬ ನಿಂತಿದೆ. ಕಡೆಯ ಸಿನಿಮಾವಾಗಿರುವ ಕಾರಣ ದೊಡ್ಡ ಮಟ್ಟದಲ್ಲಿಯೇ ಪ್ರಿರಿಲೀಸ್ ಇವೆಂಟ್ ಮಾಡಲಾಗುತ್ತಿದೆ. ಅಕ್ಕ ಪಕ್ಕ ರಾಜ್ಯದ ಕಲಾವಿದರ ದಂಡು ವೇದಿಕೆಗೆ ಬರಲಿದೆ. ಇನ್ನು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗಾಗಿ ವೇದಿಕೆ ಸಿದ್ದ ಮಾಡಲಾಗಿದೆ.

ಆದರೆ ಎಷ್ಟೊ ಜನ ಬರಬೇಕು ಎಂದುಕೊಂಡಿದ್ದರು ಪುನೀತ ಪರ್ವಕ್ಕೆ ಹಾಜರಾಗಿರಲು ಆಗುವುದಿಲ್ಲ. ಅಂತವರಿಗಾಗಿ ಲೈವ್ ನೋಡುವ ಅವಕಾಶ ಕೂಡ ಸಿಕ್ಕಿದೆ. ಅಶ್ವಿನಿ ಅವರ ನೇತೃತ್ವದ ಪಿಆರ್ಕೆ ಆಡಿಯೋ ಮೂಲಕ ಲೈವ್ ಸ್ಟ್ರೀಮ್ ನೀಡಲಾಗುತ್ತಿದೆ. ಅಲ್ಲಿಂದ ಕೂತಲ್ಲಿಯೇ ಪುನೀತ ಪರ್ವ ನೋಡಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು: ಪ್ರೊ.ಬಿ.ಎಸ್.ಮಂಜುನಾಥ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ.21  :  ಪದವಿ ಶಿಕ್ಷಣ ಕಲಿಕೆಯ ಹಂತದಲ್ಲೆ ಕಲೆ, ಸಾಹಿತ್ಯ ಹಾಗೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು

ಚಿತ್ರದುರ್ಗ | ಸಿಡಿಲಿಗೆ ಇಬ್ಬರ ಸಾವು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಮೇ. 21 : ಸೋಮುವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದ್ದಿದ್ದು ಸಿಡಿಲು ಬಡಿದು ಮಹಾರಾಷ್ಟ್ರ

ನೈರುತ್ಯ ಪದವೀಧರ ಚುನಾವಣೆ : ಬಂಡಾಯವೆದ್ದ ರಘುಪತಿ ಭಟ್ ಗೆ ಬೆಂಬಲ ನೀಡಿದ ಈಶ್ವರಪ್ಪ

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಇಬ್ಬರು ಈಗ ಒಂದೇ ದೋಣಿಯ ಪಯಣಗಿರು. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

error: Content is protected !!