Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇಷ್ಟು ದಿನ ತಳ್ಳಿಕೊಂಡು ಬಂದ ಆರ್ಯನ ಪಾತ್ರ ಇಂದಿಗೆ ಖತಂ.. ಆಕ್ಸಿಡೆಂಟ್ ಮೂಲಕ ಆರ್ಯವರ್ಧನ್ ಪಾತ್ರ ಮಾಯ..!

Facebook
Twitter
Telegram
WhatsApp

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ವರ್ಷಗಳೇ ಉರುಳಿದರು ಆ ಧಾರಾವಾಹಿ ನೋಡುಗರ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ. ಹಾಗೇ ಮನೆಯ ಹಿರಿಯ ಮಹಿಳೆಯರು ಅನು-ಆರ್ಯನ ಬಿಗ್ ಫ್ಯಾನ್ ಆಗಿದ್ದಾರೆ. ಈ ಧಾರಾವಾಹಿ ಹಲವು ಟ್ರೆಂಡ್ ಗಳನ್ನು ಕ್ರಿಯೇಟ್ ಮಾಡಿದೆ. ಒಮ್ಮೆ ಈ ಧಾರಾವಾಹಿಯಲ್ಲಿ ನಟನನ್ನು ಸಾಯಿಸಲಾಗುತ್ತದೆ ಎಂದಾಗ ನೋಡುಗರು ರೊಚ್ಚಿಗೆದ್ದಿದ್ದರು. ಹೀಗಾಗಿ ಧಾರಾವಾಹಿ ತಂಡ ಅಂದು ಕಥೆಯನ್ನು ಬದಲಾಯಿಸಿ, ಹೀರೋನನ್ನು ಉಳಿಸಿತ್ತು. ಆದರೆ ಇಂದು ಜಗಳದ ನಡುವೆ ಹೀರೋ ಪರ್ಮನೆಂಟಾಗಿ ಸತ್ತಿದ್ದಾನೆ.

ಇತ್ತಿಚೆಗೆ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕರಿಗೂ ಹಾಗೂ ಆರ್ಯನ ಪಾತ್ರಧಾರಿ ಅನಿರುದ್ಧ್ ಅವರಿಗೂ ಸಾಕಷ್ಟು ಮನಸ್ತಾಪಗಳಾಗಿ, ಸುದ್ದಿಗೋಷ್ಠಿ ನಡೆಸುವ ತನಕ ತಲುಪಿತ್ತು. ಅದರ ಜೊತೆಗೆ ಕಿರುತೆರೆ ನಿರ್ಮಾಪಕರೆಲ್ಲಾ ಸೇರಿ ಅನಿರುದ್ಧ್ ಜೊತೆ ಕೆಲಸ ಮಾಡುವುದಿಲ್ಲ ಎಂಬಂತೆ, ಕಿರುತೆರೆಯಿಂದ ಬ್ಯಾನ್ ಕೂಡ ಮಾಡಿದ್ದಾರೆ. ಇದೆಲ್ಲ ನಡೆದು ಹತ್ತಿರತ್ತಿರ ಎರಡು ವಾರಗಳಾಗುತ್ತಾ ಬರುತ್ತಿದೆ. ಆದರೂ ಇಲ್ಲಿಯ ತನಕ ಆರ್ಯನ ಪಾತ್ರ ಅನಿರುದ್ಧ್ ಮೂಲಕವೇ ಸಾಗುತ್ತಿತ್ತು. ಎಂದರೆ ಅಷ್ಟು ಬ್ಯಾಂಕಿಂಗ್ ಮಾಡಿಕೊಂಡಿದ್ದರು. ಆದರೆ ಇದೀಗ ಸೀರಿಯಸ್ ಆಗಿ ಅನಿರುದ್ಧ್ ಪಾತ್ರ ಮುಗಿದಿದೆ. ಆರ್ಯನಿಗೆ ಆಕ್ಸಿಡೆಂಟ್ ಆಗಿದೆ.

ಆರ್ಯನ ಪಾತ್ರಕ್ಕೆ ಹರೀಶ್ ರಾಜ್ ಬರುತ್ತಾರೆ ಎಂಬ ಮಾತಿತ್ತು. ಆದ್ರೆ ಹರೀಶ್ ರಾಜ್ ಧಾರವಾಹಿಗೆ ಎಂಟ್ರಿಯಾಗಿದ್ದಾರೆ. ಅದು ಆರ್ಯನ ಪಾತ್ರಕ್ಕಲ್ಲ, ಬದಲಿಗೆ ಅವನ ತಮ್ಮನಾಗಿ, ವಿಶ್ವಾಸ್ ದೇಸಾಯಿಯಾಗಿ. ಆರ್ಯನ ಹೆಸರು ಚಾಲ್ತಿಯಲ್ಲಿರಿಸಿಕೊಂಡೇ ಧಾರವಾಹಿಯ ಕಥೆಯನ್ನು ಬೇರೆ ರೀತಿ ಸಾಗಿಸಲು ನಿರ್ದೇಶಕರು, ನಿರ್ಮಾಪಕರು ನಿರ್ಧರಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

ಇಂದು ಸಂಜೆ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ : ಪ್ರಚಾರದ ವೇಳೆ ಪೆನ್ ಡ್ರೈವ್ ವಿಚಾರ ಪ್ರಸ್ತಾಪ ಮಾಡ್ತಾರಾ..?

ಶಿವಮೊಗ್ಗ: ಎರಡನೇ ಹಂತದ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ‌. ಚುನಾವಣೆಯ ಹೊತ್ತಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮುಜುಗರವಾಗುವಂತ ಘಟನೆ ನಡೆದಿದೆ. ರಾಜ್ಯದೆಲ್ಲೆಡೆ ಪೆನ್ ಡ್ರೈವ್ ಸುದ್ದಿ ತಾಂಡವವಾಡುತ್ತಿದ್ದರೆ,

error: Content is protected !!