Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಳಲಿಯ ಜಾಗ ಮಠಕ್ಕೆ ಸೇರಿದ್ದಾ..? ಮಸೀದಿಯದ್ದಾ..?: ತಾಂಬೂಲ ಶಾಸ್ತ್ರ ಹೇಳಿದ್ದೇನು..?

Facebook
Twitter
Telegram
WhatsApp

ಮಂಗಳೂರು: ಇಲ್ಲಿನ ಮಳಲಿಯ ಮದನಿ ದರ್ಗಾವನ್ನು ಇತ್ತಿಚೆಗೆ ನವೀಕರಣಕ್ಕೆಂದು ಕೆಡವಲಾಗಿತ್ತು. ಈ ವೇಳೆ ಮಸೀದಿಯ ಒಳಗೆ ದೇಗುಲದ ಕುರುಹುಗಳು ಪತ್ತೆಯಾಗಿದ್ದವು. ದೇಗುಲದ ಕಳಸ, ತೋಮರ, ಕಂಬಗಳಂತ ಮಾದರಿ ಪತ್ತೆಯಾಗಿತ್ತು. ಈ ಹಿನ್ನೆಲೆ ಅಲ್ಲಿನ ಜಿಲ್ಲಾಡಳಿತ ದರ್ಗಾ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಮಸೀದಿ ಜಾಗಕ್ಕೆ ಹಿಂದೂಪರ ಸಂಘಟನೆಗಳು ಭೇಟಿ ನೀಡಿ ಪರಿಶೀಲನೆಯನ್ನು ಮಾಡಿದ್ದರು. ಇಂದು ದೇಗುಲದ ಬಳಿ ತಾಂಬೂಲದ ಪ್ರಶ್ನೆಗೆ ಸಿದ್ಧತೆ ಮಾಡಿದ್ದರು.

ಇದಕ್ಕಾಗಿ ಕೇರಳದ ಪುದುವಾಲ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಮಾಡಿತ್ತು. ತಾಂಬೂಲ ಪ್ರಶ್ನೆಯ ಬಳಿಕ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಉತ್ತರ ನೀಡಿದ್ದು, ಯಜಮಾನರು 9 ತಾಂಬೂಲ ನೀಡಿದ್ದಾರೆ. ಅದಕ್ಕೆ ದೇವರ ದಯೆ ಇದೆ. ಇದು ಮೇಲ್ನೋಟಕ್ಕೆ ದೇವಸ್ಥಾನವಿದ್ದ ಭೂಮಿ ಎಂಬುದು ಗೊತ್ತಾಗಿದೆ ಎಂದಿದ್ದಾರೆ.

ಈ ಜಾಗ ಮಠ ಮತ್ತು ಆರಾಧನೆಯಾದ ಜಾಗ ಎಂಬ ಸುಳಿವು ಸಿಕ್ಕಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದು ದೈವ ಸಾನಿದ್ಯವಾದ ಭೂಮಿ. ಪೂರ್ವ ಕಾಲದಲ್ಲಿ ಮಠವಾಗಿತ್ತು ಎನಿಸುತ್ತದೆ. ಸಾಮಾನ್ಯ ತಾಂಬೂಲ ಶಾಸ್ತ್ರದಿಂದ ಇದು ಯಾವ ದೈವ ಸಾನಿದ್ಯ ಎಂಬುದು ತಿಳಿಯಲು ಸಾಧ್ಯವಿಲ್ಲ. ಆ ಜಾಗದಲ್ಲಿ ಇನ್ನೂ ಶಕ್ತಿಗಳು ಇವೆ. ಈ ಸಾನಿಧ್ಯಕ್ಕೆ ದೇವರ ಬಲ ಇದೆ. ಅಲ್ಲಿ ಅಭಿವೃದ್ಧಿ ಆಗದೆ ಇದ್ದರೆ ಊರಿಗೆ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

ಇತ್ತಿಚೆಗಷ್ಟೇ ಗೆಲುವಿನ ಹಾದಿಯಲ್ಲಿ ಆರ್ಸಿಬಿ : ಇಂದು ನಡೆಯಬೇಕಿದ್ದ ಮ್ಯಾಚ್ ರದ್ದಾಗುತ್ತಾ..?

ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ

error: Content is protected !!