Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗೊಬ್ಬರ ಸಿಗ್ತಾ ಇಲ್ಲ, ಅಡುಗೆ ಎಣ್ಣೆ ಗಗನಕ್ಕೇರುತ್ತಿದೆ.. ಇವರು ಯಾತ್ರೆ ಮಾಡ್ತಾ ಇರ್ತಾರೆ : ಕುಮಾರಸ್ವಾಮಿ ಆಕ್ರೋಶ

Facebook
Twitter
Telegram
WhatsApp

 

ರಾಮನಗರ: ಚನ್ನಪಟ್ಟಣ, ರಾಮನಗರದ ಜನತೆ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಅವರು, ನನಗೆ ಇವತ್ತು ನಂಬಿಕೆ ಇದೆ. ಚನ್ನಪಟ್ಟಣ, ರಾಮನಗರ ಇರಬಹುದು. ಆದರೆ ಕನಕಪುರದಲ್ಲಿ ನಂದೆ ತಪ್ಪು ಇರುವುದು ಇರಬಹುದು. ಕಾಂಗ್ರೆಸ್ ಜೊತೆ ಕೈಜೋಡಿಸಿ ತಪ್ಪು ಮಾಡಿದೆ. ಅಲ್ಲಿನ ಜನರಿಗೆ ಏನಾದ್ರೂ ಕೆಲಸ ಮಾಡ್ಬೇಕು ಅಂತ ಒದ್ದಾಡುತ್ತಾ ಇದ್ದೀನಿ. ರಾಮನಗರ ಜಿಲ್ಲೆಯಲ್ಲಿ ತಾಯಿ ಮಕ್ಕಳ ಸಂಬಂಧ ಏನಿದೆ ಅದೇ ಸಂಬಂಧ ದೇವೇಗೌಡರ ಕುಟುಂಕ್ಕೂ ರಾಮನಗರ ಕುಟುಂಬಕ್ಕೂ ಇರುವುದು. ತಾಯಿ ಯಾವುದೇ ಕಾರಣಕ್ಕೂ ಮಗನಿಗೆ ವಿಷ ಹಾಕಲ್ಲ, ಮಗನ ಕುತ್ತಿಗೆ ಕುಯ್ಯಲ್ಲ ಅನ್ನೋದು 100% ಗೊತ್ತು.

ಪ್ರತಿ ಸಮಯದಲ್ಲೂ ಸೂಕ್ತವಾದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದೀನಿ. ಕೆಲವು ಸಮಸ್ಯೆಗಳನ್ನು ಹೊರಗಡೆ ಹೇಳುವುದಕ್ಕೆ ಆಗಲ್ಲ.‌ 2008ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲ್ಕಬೇಕಿತ್ತು. ಸೋತಿದ್ದು ಕೇವಲ ಮೂರು ಸಾವಿರ ಮತದಲ್ಲಿ. ಕೆಲವರು ಮಾಡುವ ಅವಾಂತರವಿದು.

ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ನನಗೆ ಈ ಬಗ್ಗೆ ವಿಚಾರವೇ ಗೊತ್ತಿಲ್ಲ. ನನ್ನ ಗಮನ ಕ್ಷೇತ್ರದ ಅಭಿವೃದ್ಧಿ ಕಡೆಗೆ ಅಷ್ಟೆ ಗಮನಕೊಟ್ಟಿದ್ದೇನೆ. ನನ್ನ ಮಾತನ್ನು ಕೇಳುತ್ತಾರೆ ಎಂವುದರಲ್ಲಿ ಏನು ಅರ್ಥ. ಏನಾಗಿದೆ ಅನ್ನೋದೆ ನಂಗೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಶೋಭಾ ಯಾತ್ರೆಯಲ್ಲಿ ಕೇಸರಿಮಯದ ಬಗ್ಗೆ ಉತ್ತರಿಸಿದ ಅವರು, ನೋಡಿ ಅವರು ಯಾವ ಮಯವನ್ನಾದರೂ ಮಾಡಲಿ. ಅದು ಅವರಿಗೆ ಸಂಬಂಧಿಸಿದ್ದು. ಯಾವ ಯಾತ್ರೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಯಾರಿಗೆ ಶೋಭೆ ತರಲು ಗೊತ್ತಿಲ್ಲ. ಎಲ್ಲಾ ಕಡೆ ನಡೆಯುತ್ತಿದೆ. ಯಾತ್ರೆಗಳನ್ನ ಬಹಳ ಚೆನ್ನಾಗಿ ನಡೆಸುತ್ತಿದ್ದಾರೆ. ರೈತರ ಭೂಮಿಯೊಳಗೆ ಕಷ್ಟಪಟ್ಟು ಸಂಪಾದನೆ ಮಾಡಿದ್ದಕ್ಕೆ ಬೆಲೆ ಕೊಡೋದಕ್ಕೆ ಆಗಲಿಲ್ಲ. ಬೆಲೆ ಏರಿಕೆ ಹೋಗ್ತಾ ಇದೆ. ಅಡುಗೆ ಎಣ್ಣೆ ಏರುತ್ತಿದೆ, ಗೊಬ್ಬರ ಸಿಗ್ತಾ ಇಲ್ಲ. ಅದಕ್ಕೆ ಮಾಡ್ರಪ್ಪ ಶೋಭಯಾತ್ರೆಯನ್ನ. ದೇಶದಲ್ಲಿ ಯಾರು ಮಾಡದೆ ಇರುವ ಕೆಲಸ ಮಾಡಿದ್ದೀವಿ ಅಂತ ಎಂದು ಬಿಜೆಪಿ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!