Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀಲಂಕಾದಂತೆ ಭಾರತ ಮಾಡಲು ಹೊರಟವ್ರೆ : ಎಂಬಿ ಪಾಟೀಲ್ ಆಕ್ರೋಶ

Facebook
Twitter
Telegram
WhatsApp

 

ವಿಜಯಪುರ: ಬದುಕನ್ನು ಕಟ್ಟುವಂತ ಕೆಲಸವಾಗಬೇಕು. ಆದರೆ ಇಲ್ಲಿ ಅಭಿವೃದ್ಧಿ ಇಲ್ಲ, ಸರ್ಕಾರದ ಹಣ ಇಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕೋದಕ್ಕೆ ಇಂತ ವಿಚಾರಗಳನ್ನು ತರುತ್ತಿದ್ದಾರೆ. ಹಸಿದವನಿಗೆ ಅನ್ನ ಬೇಕು, ರೈತರಿಗೆ ವಿದ್ಯುತ್ ಮತ್ತು ನೀರು ಬೇಕು. ವ್ಯಾಪಾರಸ್ಥರು ಕಂಗಲಾಗಿದ್ದಾರೆ. ಮಧ್ಯಮವರ್ಗದವರು ಪೆಟ್ರೋಲ್, ಡಿಸೇಲ್ ರೇಟ್ ಹೆಚ್ಚಳದಿಂದ ಕಂಗೆಟ್ಟಿದ್ದಾರೆ ಎಂದಿದ್ದಾರೆ.

ಇನ್ನು ಮುಂಚೆ ಅಭಿವೃದ್ಧಿ ಕಡೆಗೆ ಹೋಗುತ್ತಿತ್ತು. ನೆಹರು, ಶಾಸ್ತ್ರಿ, ನರಸಿಂಹ ರಾವ್ ಮತ್ತು ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಇವರೆಲ್ಲ ಭದ್ರ ಆರ್ಥಿಕ ಅಡಿಪಾಯವಾಕಿದ್ದರು. ಆದರೆ ಇವಾಗ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ. ಮುಂದೆ ಇದರಿಂದ ಬಹಳ ಕೆಟ್ಟದಾಗುತ್ತೆ. ಈಗ ಶ್ರೀಲಂಕಾದ ಪರಿಸ್ಥಿತಿ ಏನಾಗಿದೆ. ಆ ಸ್ಥಿತಿಗೆ ಭಾರತವನ್ನು ತಳ್ಳುತ್ತಿದ್ದಾರೆ.

ಎಲ್ಲವೂ ಅತಿರೇಕವಾಗಿದೆ. ನೀವೂ ನಿಮ್ಮ ಮತದ ಆಸೆಗಾಗಿ ಮತಗಳ ಕ್ರೂಢಿಕರಣಕ್ಕಾಗಿ ಅನೇಕ ವಿಚಾರಗಳನ್ನು ತರುತ್ತಿದ್ದೀರಿ. ಹಿಜಾಬ್, ಹಲಾಲ್, ಆಜಾನ್, ಕಾಶ್ಮೀರಿ ಫೈಲ್ಸ್ ಇನ್ನು ಏನೇನೋ ಇದೆ. ಇಲ್ಲಿ ಬೆಂಕಿ ಹಚ್ಚುವ ಕೆಲಸ ಹೆಚ್ಚಿದೆ. ಸಾಮರಸ್ಯವನ್ನು ಕೆಡಿಸಿದ ಮೇಲೆ ನಿಮಗೆ ತಿರುಗುಬಾಣವಾಗುತ್ತೆ. ಅಷ್ಟೆ ಅಲ್ಲ ದೇಶದ ಮೇಲೆ ರಾಜ್ಯದ ಮೇಲೆ ಪರಿಣಾಮ ಬೀರುತ್ತೆ. ಎಲ್ಲಿ ಸಾಮರಸ್ಯ ಇರಲ್ಲ ಅಲ್ಲಿ ಹೂಡಿಕೆದಾರರು ಬರಲ್ಲ.

ನಮ್ಮಲ್ಲಿ ಕೋಟ್ಯಾಂತರ ಹೂಡಿಕೆ ಮಾಡಿರೋ ಕಂಪನಿಗಳಿವೆ. ಆದ್ರೆ ಹಿಂಗೆ ಗಲಭೆಗಳು ಸೃಷ್ಟಿಯಾದರೆ ಆರ್ಥಿಕ ಹೊಡೆತಕ್ಜೆ ಕಾರಣವಾಗುತ್ತೆ. ಹೀಗಾಗಿ ಎಲ್ಲವನ್ನು ಬಗೆಹರಿಸುವ ಕೆಲಸವಾಗಬೇಕು. ಕೆಲವು ವಿಚಾರಗಳು ಬಂದಾಗ ಕೂತು ಚರ್ಚಿಸಿ ಆ ವಿಚಾರವನ್ನು ಬಗೆಹರಿಸಬೇಕಿದೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!