Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಲಿತ ಸಿಎಂ ಧ್ವನಿ ಎತ್ತಿದ ಬೆಂಬಲಿಗರು : ನೀವೂ ಇಲ್ಲಿ ಕೂಗಿದ್ರೆ, ಅಲ್ಲಿ ಹೊಡೆತ ಬೀಳುತ್ತೆ ಎಂದ ಪರಮೇಶ್ವರ್..?

Facebook
Twitter
Telegram
WhatsApp

ತುಮಕೂರು: ದಲಿತ ಸಿಎಂ ವಿಚಾರ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಇದೀಗ ಮತ್ತೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಲಿತ ಸಿಎಂ ಆಗ್ಬೇಕು ಅನ್ನೋ ಸದ್ದು ಜೋರಾಗಿ ಕೇಳಿಸಿದೆ.

ಜಿಲ್ಲೆಯ ಕೊರಟಗೆರೆಯ ಚಿಕ್ಕಗುಂಡಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಅವರ ಬೆಂಬಲಿಗರು ಪರಮೇಶ್ಚರ್ ಸಿಎಂ ಆಗುವ ಬಗ್ಗೆ ಕೂಗು ಕೇಳಿ ಬಂದಿದೆ. ತಕ್ಷಣ ಪರಮೇಶ್ವರ್ ಅದಕ್ಕೆ ಸಲಹೆ ನೀಡಿದ್ದಾರೆ.

ನಾನೂ ಸಿಎಂ ಆಗ್ಬೇಕುವಾಂತ ಕೂಗ್ಬೇಡಿ. ಆಮೇಲೆ ಒಳಗೊಳಗೆ ಸಂಚು ಶುರುವಾಗುತ್ತೆ. ಈ ವಿಚಾರ ಎತ್ತಿದ್ರೆ ನನಗೆ ತುಂಬಾ ಕಷ್ಟವಾಗುತ್ತೆ. ನೀವು ಇಲ್ಲಿ ಕೂಗೋಕೆ ಶುರು ಮಾಡಿದ್ರೆ, ನನಗೆ ಅಲ್ಲಿ ಹೊಡೆತ ಬೀಳುತ್ತೆ. ನೀವೂ ಮನಸ್ಸಿನಲ್ಲಿ ಬೇಕಾದ್ರೆ ಹೇಳಿಕೊಳ್ಳಿ.

ನಿಮ್ಮ ಆಶೀರ್ವಾದ ಮತ್ತು ಪರಮಾತ್ಮನ ಆಶೀರ್ವಾದ ಇದ್ದರೆ ಖಂಡಿತ ನಾನು ಮುಖ್ಯಮಂತ್ರಿ ಆಗ್ತೇನೆ. ಅಷ್ಟೇ ಅಲ್ಲ‌ ಮುಖ್ಯಮಂತ್ರಿ ಸ್ಥಾನವನ್ನ ಯಾರಿಗೆ ನೀಡ್ಬೇಕು ಅನ್ನೋದು ವರಿಷ್ಠರಿಗೆ ತಿಳಿದಿದೆ ಎಂದಿದ್ದಾರೆ. ಆದರೂ ಬೆಂಬಲಿಗರಿಗೆ ಬುದ್ಧಿ ಹೇಳುವ ಮೂಲಕ ಸಿಎಂ ಆಗುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ : ಬಿಜೆಪಿಯ ಪ್ಲ್ಯಾನ್ ಏನು ಗೊತ್ತಾ..?

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ, ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೀಗ ಆ ಸಂತಸದ ಗಳಿಗೆಗೆ ಭರ್ತಿ ಒಂದು ವರ್ಷವಾಗುತ್ತಿದೆ. ಮೇ20ಕ್ಕೆ ಸರ್ಕಾರ ರಚನೆ ಮಾಡಿ

ಬಿಜೆಪಿ – ಜೆಡಿಎಸ್ ಪಕ್ಷದಿಂದ 25 ರಿಂದ 30 ಜನ  ನಮ್ಮ ಪಕ್ಷಕ್ಕೆ ಬರುತ್ತಾರೆ : ಚಿತ್ರದುರ್ಗದಲ್ಲಿ ಸಚಿವ ಸುಧಾಕರ್ ಹೇಳಿಕೆ

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,                         ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17

ಮಳೆರಾಯನನ್ನೇ ಬೇಡಿದ ಅಭಿಮಾನಿಗಳು : RCB ಗೆಲುವಿಗಾಗಿ ವಿಶೇಷ ಪೂಜೆ

RCB ಅಭಿಮಾನಿಗಳು ಕಡೆಯ ತನಕ ತಮ್ಮ ಟೀಂ ಬಗ್ಗೆ ಹೋಪ್ ಕಳೆದುಕೊಳ್ಳುವುದೇ ಇಲ್ಲ. ಯಾಕಂದ್ರೆ ಆರ್ಸಿಬಿ ಆಟಗಾರರು ಸಹ ಅದೇ ಥರ ಕೊನೆಯಲ್ಲಿ ಚೋಕ್ ಕೊಡ್ತಾರೆ. ಈ ಬಾರಿಯ ಐಪಿಎಲ್ ನಲ್ಲಿ ಆರಂಭದ ಅಷ್ಟು

error: Content is protected !!