ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಟರ್ಕಿಯಲ್ಲಿ ಭೂಕಂಪನ ದಿನೇ ದಿನೇ ಪ್ರಬಲವಾಗುತ್ತಿದೆ. ಮನೆಗಳು ಕುಸಿಯುತ್ತಿವೆ, ರಸ್ತೆಗಳು ಬಾಯ್ಬಿಡುತ್ತಿವೆ. ಜೀವಗಳು ಲೆಕ್ಕವಿಲ್ಲದ್ದಷ್ಟು ಹಾರಿ ಹೋಗುತ್ತಿವೆ. ಭೂಕಂಪದ ಹೊಡೆತಕ್ಕೆ ಸಿಲುಕಿ ಸುಮಾರು ಈಗಾಗಲೇ 7800 ಜನ ಅಸುನೀಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಟರ್ಕಿಯ ಭೂಕಂಪದ ನಡುವೆ ವಿಡಿಯೋವೊಂದು ಹರಿದಾಡುತ್ತಿದ್ದು, ಎಂಥ ಕಲ್ಲು ಹೃದಯವೇ ಆದರೂ ಕಣ್ಣೀರು ತರಿಸುತ್ತೆ. ಏಳು ವರ್ಷದ ಪುಟಾಣಿ ಬಾಲಕಿ ಅವಶೇಷಗಳಡಿ ತನ್ನ ತಮ್ಮನನ್ನು ರಕ್ಷಿಸಿದ್ದಾಳೆ. ಸಿಮೆಂಟ್ ಚಪ್ಪಡಿ ಬಿದ್ದಾಗಲೂ ಅದು ತಮ್ಮನ ಮೇಲೆ ಬೀಳದಂತೆ ಕಾಪಾಡಿದ್ದಾಳೆ. ಅದು ಒಂದು ಎರಡು ಗಂಟೆಯಲ್ಲ ಸುಮಾರು 17 ಗಂಟೆಗಳ ಕಾಲ.
ಕಾಪಾಡಿದ ಅಕ್ಕನಿಗೂ ದೊಡ್ಡ ವಯಸ್ಸೇನು ಅಲ್ಲ. ಒಂದು ಕೊಡ ಬಿಂದಿಗೆಯನ್ನು ಎತ್ತುವುದಕ್ಕೆ ಆಗದಷ್ಟು ವಯಸ್ಸದು. ಬರೀ ಏಳು ವರ್ಷ. ಆಯಸ್ಸು ಮುಗಿಯದೆ ಇದ್ದರೆ ಬಂಡೆ ಕಲ್ಲು ಬಿದ್ದರು ಏನು ಆಗುವುದಿಲ್ಲ. ಆಯಸ್ಸು ಮುಗಿದಿದ್ದರೇ ಹುಲ್ಲು ಕಡ್ಡಿಯೇ ಸಾಕು ಪ್ರಾಣ ಹೋಗುವುದಕ್ಕೆ ಅಂತಾರಲ್ಲ ಹಾಗೇ ಇದು ಒಂದು ಉದಾಹರಣೆಯೇ ಆಗಿದೆ.
ಅಲ್ಲಿನ ಸರ್ಕಾರ ಅವಶೇಷದಡಿ ಸಿಲುಕಿದವರನ್ನು ಕಾಪಾಡುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ. ದಿನೇ ದಿನೇ ಸಾಯುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ಕಟ್ಟಡಗಳು ಕುಸಿದು ಬೀಳುತ್ತಿರುವುದು ನೋಡುಗರ ಕಣ್ಣಿಗೆ ಅಯ್ಯೋ ಎನಿಸುತ್ತಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್