Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಇರಬೇಕಾದ್ರೆ ಕುಮಾರಸ್ವಾಮಿ ವಿಷ ಕಾರುತ್ತಿದ್ರು: ಜಮೀರ್ ಅಹ್ಮದ್

Facebook
Twitter
Telegram
WhatsApp

ಬೆಂಗಳೂರು: ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಇರಬೇಕಾದ್ರೆ ಕುಮಾರಸ್ವಾಮಿ ವಿಷ ಕಾರುತ್ತಿದ್ರು ಎಂದು ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಖಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನನ್ನ ಸಿದ್ದರಾಮಯ್ಯ ಮುಗಿಸಬೇಕು ಅಂದುಕೊಂಡ್ರೆ ಅಹಾರ ಖಾತೆ ಕೊಡಿಸುತ್ತಿರಲಿಲ್ಲ, ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆಸುತ್ತಾರೆ ಹೊರತು ರಾಜಕೀಯವಾಗಿ ಯಾರನ್ನೂ ಮುಗಿಸಲ್ಲ ಎಂದು ಕುಮಾರಸ್ವಾಮಿ ವಿರುದ್ದವಾಗಿ ಕಿಡಿಕಾರಿದರು,

ಇನ್ನೂ ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ಕೊಟ್ಟಿದ್ರು, ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾನಾನು ಕಾಂಗ್ರೆಸ್ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ರು. ಜಾಫರ್ ಷರೀಫ್ ಮೊಮ್ಮಗನನ್ನ ಮುಗಿಸಿದ್ದು ಕುಮಾರಸ್ವಾಮಿನಾನು ಮುಸ್ಲಿಂರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದೆ, ದೇವೇಗೌಡರ ಬಳಿಯೂ ಕೇಳಿಕೊಂಡೆ ಅದಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ. ಮಾಜಿ ಪ್ರಧಾನಿಗಳಾದ ದೇವೇಗೌಡರು ನನ್ನನ್ನು ಮೀರ್ ಸಾದಿಕ್ ಎಂದು ಕರೆದ್ರು. ನಾನು ಅಭ್ಯರ್ಥಿ ಹಾಕಬೇಡಿ ಎಂದು ಹೇಳಿದ್ರು ಹಾಕಿದ್ರು ಇದು ನಿಮ್ಮ ಮುಸ್ಲಿಂ ಮೇಲಿನ ಕಾಳಜಿಯೇ ಕುಮಾರಸ್ವಾಮಿ ಎಂದು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರ ಇದ್ದಾಗ ಬಿಎಸ್ ವೈ ಗೆ ಅಧಿಕಾರ ಕೊಡಲಿಲ್ಲ, ಎಚ್.ಡಿ ರೇವಣ್ಣ ಡಿಸಿಎಂ ಆಗ್ತಾರೆ ಅಂತ ಬಿಎಸ್ ವೈ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ ಸ್ವತಃ ಅವರ ಅಣ್ಣ ಬೆಳೆಯೋದನ್ನೇ ಕುಮಾರಸ್ವಾಮಿ ಸಹಿಸಲಿಲ್ಲ ಅಲ್ಪಸಂಖ್ಯಾತರು ಬೆಳೆಯೋದನ್ನ ಹೆಚ್ ಡಿಕೆ ಸಹಿಸ್ತಾರಾ..? ಎಂದು ಕಿಡಿಕಾರಿದರು, ಇನ್ನೂ ಫಾರೂಕ್ ಅವರನ್ನ ಮಂತ್ರಿ ಮಾಡಲಿಲ್ಲ, ಫಾರುಕ್ ಅವರನ್ನ ಡಿಸಿಎಂ ಮಾಡಿ , ಹೋಮ್ ಮಿನಿಸ್ಟರ್ ಮಾಡ್ತೇನೆ ಎಂದಿದ್ರು ಫಾರೂಕ್ ಅವರನ್ನ ಮಂತ್ರಿ ಮಾಡಿದ್ರಾ ಕುಮಾರಸ್ವಾಮಿ ಅವರೇ ಎಂದರು.

ದೇವೇಗೌಡರು ಜಾತ್ಯಾತೀತ ನಾಯಕ, ಕುಮಾರಸ್ವಾಮಿ, ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ.ರಾಮನಗರ ಮುಸ್ಲಿಂ ಅಭ್ಯರ್ಥಿ ಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡೂ ಕಡೆ ನಿಲ್ಲುವ ಅಗತ್ಯ ಏನಿತ್ತು, ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ರು.ಅನಿತಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು,ಮುಸ್ಲಿಂ ಪರ ಕಾಳಜಿ ತೋರಿಸಬೇಕಿತ್ತು ಎಂದು ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಯಕ ಸಮುದಾಯ ಬಿ.ಎನ್.ಚಂದ್ರಪ್ಪ, ಪ್ರಭಾ ಮಲ್ಲಿಕಾರ್ಜನ್ ರವರನ್ನು ಬೆಂಬಲಿಸಲಿ : ಎನ್.ಡಿ.ಕುಮಾರ್ ಮನವಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ.25 : ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಎನ್.ಚಂದ್ರಪ್ಪ, ಮತ್ತು ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜನ್ ಅವರನ್ನು

ದೇಶದ ಅಭಿವೃದ್ಧಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ :  ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 25:  ದೇಶದ ಅಭಿವೃದ್ಧಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮೇಲಿದೆ.

ಚಿತ್ರದುರ್ಗ | ಜಿಲ್ಲೆಯಾದ್ಯಂತ 54 ವಿಶೇಷ ಮತಗಟ್ಟೆಗಳ ಸ್ಥಾಪನೆ, ಮತದಾರರ ಸ್ವಾಗತಕ್ಕೆ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು

ಚಿತ್ರದುರ್ಗ. ಏ.25: ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಏ.26ರಂದು ಶುಕ್ರವಾರ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು, ಮತದಾರರನ್ನು ಆಕರ್ಷಿಸಲು ಜಿಲ್ಲೆಯಾದ್ಯಂತ 54 ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು,

error: Content is protected !!