ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಬೈಕ್ ಚಲಿಸಲು ಹೋಗಿ ಅಪಾಯ ತಂದುಕೊಂಡ ಯುವಕ..!

suddionenews
1 Min Read

ಚಿಕ್ಕಬಳ್ಳಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಹಿನ್ನೆಲೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನು ನಾಲ್ಕೈದು ದಿನ ಮಳೆಯಾಗುತ್ತೆ ಎಂಬ ಹವಮಾನ ಇಲಾಖೆ ಎಚ್ಚರಿಕೆಯಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಈ ಮಧ್ಯೆ ತುಂಬಿ ಹರಿಯುವ ನೀರಿನಲ್ಲಿ ವಾಹನ ಓಡಿಸಲು ಹೋಗಿ ಅಲ್ಲೊಬ್ಬ ಯುವಕ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ಮಳೆಯಿಂದಾಗಿ ಸೇತುವೆಯಲ್ಲ ತುಂಬಿ ಹರಿಯುತ್ತಿತ್ತು. ಅದೇ ಸೇತುವೆ ಮೇಲೆ ಯುವಕನೊಬ್ಬ ಬೈಕ್ ಓಡಿಸಲು ಹೋಗಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ.

ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿತ್ತು. ಆದರೂ ಅದನ್ನು ಲೆಕ್ಕಿಸದೇ ಬೈಕದ ಸವಾರ ಮುಂದೆ ನುಗ್ಗಿದ್ದ. ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವನನ್ನ ಸ್ಥಳೀಯರ ಸಮಯ ಪ್ರಜ್ಞೆ ಮೆರೆದು ಜೆಸಿಬಿಯಿಂದ ರಕ್ಷಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *