ಯಡಿಯೂರಪ್ಪ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿ.. ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ : ಹೆಚ್ ವಿಶ್ವನಾಥ್

suddionenews
1 Min Read

ಮೈಸೂರು: ಯಡಿಯೂರಪ್ಪ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿಯಾಗಿತ್ತು ಇದೀಗ ಬಸವರಾಜ್ ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ ಆಗಿದೆ. ಬೊಮ್ಮಾಯಿ ಅವರು ರಾಜ್ಯಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.

ಜನರ ಸುತ್ತ ಅಭಿವೃದ್ಧಿ ಸುತ್ತಬೇಕೆ ವಿನಃ ಅಭಿವೃದ್ಧಿಯ ಸುತ್ತ ಜನ ಸುತ್ತಬಾರದು ಎಂಬ ಮಾತನ್ನ ಪ್ರೂವ್ ಮಾಡ್ತಾ ಇರೋದು ಬಸವರಾಜ್ ಬೊಮ್ಮಾಯಿ. ಅವ್ರು ಯಡಿಯೂರಪ್ಪ ಅವರ ನೆರಳಲ್ಲ. ಯಾರು ಸಿಎಂ ಪಕ್ಷದ ಅಧ್ಯಕ್ಷನಾಗಿರುತ್ತಾನೊಕ ಅವರದ್ದೆ ನಾಯಕತ್ವ ಇದ್ದೆ ಇರುತ್ತೆ. ಸಾಮೂಹಿಕ ನಾಯಕತ್ವ ಇದ್ದರ ಒಬ್ಬ ಮೇಟಿ ಬೇಕು. ಅದರಂತೆ ಸಿಎಮನ ಬಸವರಾಜ್ ಬೊಮ್ಮಾಯಿ ಕೂಡ.

ಇದೇ ವೇಳೆ ಒ್ರತಾಪ್ ಸಿಂಹ ವಿರುದ್ಧವೂ ಹರಿಹಾಯ್ದಿರುವ ವಿಶ್ವನಾಥ್, ಪ್ರತಾಪ್ ಸಿಂಹ ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅಂತಾರೆ. ಪ್ರತಾಪ್ಬಸಿಂಹ ಮೊದಲು ತಮ್ಮ ಸ್ಥಾನಕ್ಕೆ ಗೌರವವಿಟ್ಟು ಮಾತನಾಡಲಿ. ಹಿಂದಿನ ಸರ್ಕಾರದಲ್ಲೇ ದಶಪಥ ರಸ್ತೆಗೆ ಸಂಬಂಧಿಸಿದ ದಾಖಲೆ ಇದೆ. ತಮ್ಮದೆ ಆ ಯೋಜನೆ ಅಂತ ಹೇಳೋದು ಸರಿ ಅಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *