ಪಕ್ಷದಿಂದ ಯತ್ನಾಳ್ ಉಚ್ಚಾಟನೆ; ಬಿಜೆಪಿಗೆ ಎಚ್ಚರಿಕೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ; ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಬಗ್ಗೆ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಸದಾ ನಾಲಿಗೆ ಹರಿ ಬಿಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇದೀಗ ಯತ್ನಾಳ್ ಪರವಾಗಿ ಪಂಚಮಸಾಲಿ ಪೀಠಾಧ್ಯಕ್ಷರಾದ ಜಯ ಮೃತ್ಯುಂಜಯ ಸ್ವಾಮೀಜಿಗಳು ನಿಂತಿದ್ದಾರೆ. ಅವರನ್ನ ಉಚ್ಛಾಟನೆ ಮಾಡಿ, ಅಧಿಕಾರ ಹಿಡಿಯುವುದಕ್ಕೆ ಸಾಧ್ಯವೇ ಇಲ್ಲವೆಂದು ಎಚ್ಚರಿಕೆಯನ್ನು ನೀಡಿದ್ದಾರೆ.

 

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ಕೇವಲ ಲಿಂಗಾಯತರು ಮಾತ್ರ ಬೆಂಬಲ‌ ಕೊಡ್ತಾ ಇಲ್ಲ. ಎಲ್ಲಾ ಜಾತಿ ಜನಾಂಗದವರು, ಎಲ್ಲಾ ಅಭಿಮಾನಿಗಳು, ಎಲ್ಲಾ ಹಿಂದೂಪರ ಸಂಘಟನೆಯವರು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೆಂಬಲ ನೀಡ್ತಾ ಇದಾರೆ. ಈ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿಗೆ ಹೇಳುವುದಕ್ಕೆ ಇಚ್ಛೆ ಪಡ್ತೀನಿ, ಲಿಂಗಾಯತರನ್ನು ಕಡೆಗಣಿಸಿ, ಅದರಲ್ಲಿ ವಿಶೇಷವಾಗಿ ದೊಡ್ಡ ಸಮುದಾಯವಾಗಿರುವ ಪಂಚಮಸಾಲಿ ನಾಯಕರನ್ನು ಕಡೆಗಣಿಸಿ, ನೀವೇನಾದ್ರೂ ಅಧಿಕಾರ ಮಾಡ್ತೀವಿ, ಪಕ್ಷ ಅಧಿಕಾರಕ್ಕೆ ತರ್ತೀವಿ ಎಂದು ಕನಸು ಕಾಣ್ತಾ ಇದ್ರೆ ಅದು ಕೇವಲ ನಿಮ್ಮ ಭ್ರಮೆ.

ಇವತ್ತು ಬಿಜೆಪಿಗೆ ಲಿಂಗಾಯತರು ದೊಡ್ಡ ಶಕ್ತಿ. ಅದರಲ್ಲೂ ಪಂಚಮಸಾಲಿ ಜನಾಂಗ ಯಾವಾಗಲೂಬಿಜೆಪಿ ಪರ ಇರುವುದು. ಕಳೆದ ಬಾರಿ ಈ ಜನಾಂಗ ಮೀಸಲಾತಿ ಹೋರಾಟ ಶುರು ಮಾಡಿದ ಮೇಲೆ, ಅಲ್ಲಿವರೆಗೂ ಅಪ್ಪ ಹೇಳಿದ್ದೆ ವೇದ ವಾಕ್ಯ ಎಂಬಂತೆ ಕೇಳುತ್ತಿದ್ದರು. ಹೋರಾಟ ಆದ್ಮೇಲೆ ನಮ್ಮ ಜನರಿಗೂ ಸತ್ಯ ಗೊತ್ತಾಯ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಮಾತನಾಡಿದ್ದಾರೆ.

suddionenews

Recent Posts

ದಾವಣಗೆರೆಯ ಬ್ಯಾಂಕ್ ರಾಬರಿ ಕಥೆ ; 6 ತಿಂಗಳ ಬಳಿಕ ಅಂದರ್ ಆಗಿದ್ದೇಗೆ ಖದೀಮರು..?

ದಾವಣಗೆರೆ; ಕಳ್ಳತನ ಮಾಡಿದ ಕಳ್ಳರು ಸಣ್ಣದಾದ ಯಾವುದಾದರೊಂದು ಸುಳಿವನ್ನ ಬಿಟ್ಟು ಹೋಗಿರುತ್ತಾರೆ. ಅದರಿಂದಾನೇ ತಗಲಾಕಿಕೊಳ್ಳುತ್ತಾರೆ. ಇದೀಗ ದಾವಣಗೆರೆಯಲ್ಲೂ ಅಂಥದ್ದೇ ಘಟನೆಯೊಂದು…

1 hour ago

ಬಳ್ಳಾರಿ ಜಿಲ್ಲೆಯಲ್ಲಿ ಮೆಗಾ ಡೈರಿ ; ರೈತರು – ಕೆಎಂಎಫ್ ಅಧ್ಯಕ್ಷರ ನಡುವೆ ಜಟಾಪಟಿ ಶುರುವಾಗಿದ್ದೇಕೆ..?

ಬಳ್ಳಾರಿ; ಜಿಲ್ಲೆಯಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಲಾಗುವುದು ಎಂದು ಅಂದಿನ ಸಿಎಂ ಆಗಿದ್ದ ಬಸವರಾಜ್…

1 hour ago

ಚಿತ್ರದುರ್ಗದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ದೇಶಾದ್ಯಂತ ಇಂದು ಸೋಮವಾರ ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್(ರಂಜಾನ್) ಆಚರಿಸಲಾಗುತ್ತಿದೆ.…

4 hours ago

ದೆಹಲಿಗೆ ತೆರಳುವ ಮುನ್ನ ಸಿಎಂ – ಡಿಸಿಎಂ ಭೇಟಿ ; ಏನೆಲ್ಲಾ ಚರ್ಚೆ ಆಯ್ತು.?

ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಹನಿಟ್ರ್ಯಾಪ್ ಪ್ರಜರಣದ್ದೆ ಜೋರು ಸದ್ದು. ಅದರಲ್ಲೂ ಸಚಿವ ಕೆ.ಎನ್.ರಾಜಣ್ಣ ಹೆಸರು ಕೇಳಿ ಬಂದಿದೆ. ಈ…

5 hours ago

ಚಿತ್ರದುರ್ಗ : ನಗರದ ಮಧ್ಯಭಾಗದಲ್ಲಿ ಸಂಭವಿಸಿದ ಅಗ್ನಿ ಅವಘಡ : ಘಟನೆಗೆ ಅಸಲಿ ಕಾರಣವೇನು ಗೊತ್ತಾ ?

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31: ಆಕಸ್ಮಿಕ ಬೆಂಕಿಯಿಂದಾಗಿ ನಗರದ ಬಿ.ಡಿ. ರಸ್ತೆಯ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ (ಎಸ್.ಬಿ.ಐ.…

5 hours ago

ಪ್ರತಿದಿನ ಬಾದಾಮಿ ಹಾಲು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

  ಸುದ್ದಿಒನ್ ಬಾದಾಮಿ ಹಾಲು ಒಂದು ಆರೋಗ್ಯಕರ ಪಾನೀಯವಾಗಿದ್ದು, ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ನುಣ್ಣಗೆ ಪುಡಿಮಾಡಿ, ಸೋಸಿ ತಯಾರಿಸಲಾಗುತ್ತದೆ. ಇದು…

6 hours ago