ಈ ಬಾರಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಸ್ವಲ್ಪ ಜೋರಾಗಿಯೇ ಹೊತ್ತಿಕೊಂಡಿದೆ. ಟಿಕೆಟ್ ಸಿಗಲ್ಲ ಅಂತ ಗೊತ್ತಾಗಿದ್ದೆ ತಡ ಎಲ್ಲರೂ ನಾ ಮುಂದು ತಾ ಮುಂದು ಅಂತ ರಾಜೀನಾಮೆ ಪತ್ರ ಹಿಡಿದು ನಿಂತಿದ್ದಾರೆ. ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದಾರೆ. ಇದೀಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಂಡಾಯವೆದ್ದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ.
ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಕೊಟ್ಟು ಕಿತ್ತುಕೊಂಡಾಗಲೂ ಸುಮ್ಮನೆ ಇದ್ದರು, ಆದರೆ ಟಿಕೆಟ್ ವಿಚಾರದಲ್ಲಿ ಎರಡನೇ ಪಟ್ಟಿ ರಿಲೀಸ್ ಆದಾಗ ಸವದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಮೂಲಗಳ ಪ್ರಕಾರ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸೇರುವುದಕ್ಕೂ ಮುನ್ನ ಎರಡು ಡಿಮ್ಯಾಂಡ್ ಇಟ್ಟಿದ್ದಾರಂತೆ.
ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲೀ ಗೆಲ್ಲುವ ಕುದುರೆಯನ್ನು ನೋಡುತ್ತಾರೆ. ಹಣ ಬಲ, ಜನ ಬಲ ಇದ್ದರೆ ಆ ಅಭ್ಯರ್ಥಿ ಯಾವ ಪಕ್ಷದಿಂದಾದರೂ ಸರಿ ಅವರ ಪಕ್ಷಕ್ಕೆ ಬಂದರೆ ಕರೆದುಕೊಳ್ಳುತ್ತಾರೆ. ಇದೀಗ ಲಕ್ಷ್ಮಣ ಸವದಿ, ತನ್ನ ಮಗನಿಗೆ ಅಥಣಿಯಲ್ಲಿ ಟಿಕೆಟ್ ನೀಡಬೇಕು ಹಾಗೇ ಆ ಕ್ಷೇತ್ರದಲ್ಲಿ ಯಾರೂ ಬಂಡಾಯವೇಳಬಾರದು ಎಂದು ಕಂಡೀಷನ್ ಹಾಕಿದ್ದಾರೆ. ಈಗ ಕಾಂಗ್ರೆಸ್ ಈ ಕಂಡೀಷನ್ ಗೆ ಒಕೆ ಎಂದರೆ ಸವದಿ, ಮಗನ ಸಮೇತ ಕಾಂಗ್ರೆಸ್ ಕೈಹಿಡಿಯಲಿದ್ದಾರೆ.