ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ನಿನ್ನೆ ಗಣಿತ ಪರೀಕ್ಷೆ ನಡೆದಿದೆ. ಆದ್ರೆ ಶಾಕಿಂಗ್ ಅಂದ್ರೆ ಕರ್ನಾಟಕದಾದ್ಯಂತ ಸುಮಾರು, 12,533 ವಿದ್ಯಾರ್ಥಿಗಳು ಗಣಿತ ಪರೀಕ್ಷೆಗೆ ಗೈರಾಗಿದ್ದಾರೆ. ಇನ್ನು ಯಾವೆಲ್ಲಾ ಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಗೈರಾಗಿದ್ದಾರೆ ಎಂಬುದನ್ನು ನೋಡುವುದಾದರೆ ಬೆಂಗಳೂರು ದಕ್ಷಿಣ ಭಾಗದಿಂದಾನೇ ಅತೀ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಹಾಗೇ ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಹಾಸನ ಭಾಗದಲ್ಲಿ ಪರೀಕ್ಷೆಗೆ ಹೋಗದೆ ವಿದ್ಯಾರ್ಥಿಗಳು ಸುಮ್ಮನೆ ಆಗಿದ್ದಾರೆ. ವಿದ್ಯಾರ್ಥಿಗಳ ಜೀವನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾದ ಘಟ್ಟವಾಗಿದೆ. ಈ ಪರೀಕ್ಷೆ ಪಾಸ್ ಮಾಡಿದರೆ ಮುಂದಿನ ಶೈಕ್ಷಣಿಕ ಬೆಳವಣಿಗೆ ಸುಲಭ. ಹೀಗಿರುವಾಗ ಪರೀಕ್ಷೆಗೆ ಇಷ್ಟೊಂದು ಮಕ್ಕಳು ಗೈರಾಗಿರುವುದು ಶಾಕಿಂಗ್ ಎನಿಸಿದೆ.
ಇನ್ನು ಈ ಸಂಬಂಧ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಈ ಪರೀಕ್ಷೆಗೆ ಹಾಜರಾಗದೆ ಇರುವವರಿಗೆ ಮತ್ತೊಂದು ಪರೀಕ್ಷೆಯ ಅವಕಾಶ ಇದ್ದೆ ಇದೆ. ಆದರೆ ಈಗಿನ ವಿದ್ಯಾರ್ಥಿಗಳಿಗೆ ಆ ಅವಕಾಶ ಮೂರು ಬಾರಿ ಇದೆ. ಅಂದ್ರೆ ಈ ಪರೀಕ್ಷೆಗೆ ಹಾಜರಾಗದೆ ಇದ್ದಲ್ಲಿ, ಫೇಲ್ ಆದಲ್ಲಿ ಮೂರು ಬಾರಿ ಪ್ರಯತ್ನ ಮಾಡಬಹುದಾಗಿದೆ. ಹೀಗಾಗಿ ಪರೀಕ್ಷೆಗೆ ಗೈರಾಗಿರುವವರ ಸಂಖ್ಯೆ ಜಾಸ್ತಿಯಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯ ಬಗ್ಗೆ ಆತ್ಮವಿಶ್ವಾಸ ಹೊಂದಿಲ್ಲದೆ ಇದ್ದರೆ ಈ ರೀತಿ ಹಿಂದೇಟು ಹಾಕುತ್ತಾರೆ. ಇನ್ನು ಎರಡು ಪರೀಕ್ಷೆಗಳಿಗೆ ಹಾಜರಾಗಬಹುದು ಎಂಬ ಮನೋಭಾವದಿಂದಾನೂ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರಬಹುದು ಎಂದು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿಗಳನ್ನೇ ಕೇಳಿದಾಗ ಈ ಬಾರಿಯ ಗಣಿತ ಪತ್ರಿಕೆ ಕಷ್ಟಕರವಾಗಿತ್ತು ಎಂಬ ಅಭಿಪ್ರಾಯ ತಿಳಿಸಿದ್ದಾರೆ.
ಬೆಂಗಳೂರು; ಪರೀಕ್ಷೆ ಬರೆದು ಫಲಿತಂಶಕ್ಕಾಗಿ ಕಾಯುತ್ತಿರುವ ದ್ವಿತೀಯ ಪಿಯುಸಿ ಮಕ್ಕಳಿಗೆ ಇಂದು ಢವಢವ ಶುರುವಾಗಿದೆ. ಎಷ್ಟೇ ಚೆನ್ನಾಗಿ ಬರೆದಿದ್ದರು, ನಿರೀಕ್ಷೆ…
ಸುದ್ದಿಒನ್ : ಸಾಂಪ್ರದಾಯಿಕವಾಗಿ, ಅನ್ನ ನಮ್ಮ ಪ್ರಧಾನ ಆಹಾರ. ಬಹುತೇಕ ಎಲ್ಲಾ ಊಟಗಳಲ್ಲಿ ಅನ್ನವು ಪ್ರಧಾನ ಆಹಾರವಾಗಿದೆ. ದಿನಕ್ಕೆ ಒಂದಕ್ಕಿಂತ…
ಈ ರಾಶಿಯವರಿಗೆ ವ್ಯಾಪಾರ ವಹಿವಾಟಗಳಲ್ಲಿ ನಷ್ಟವಾಗಲು ಏನು ಕಾರಣ ಇರಬಹುದು? ಲಾಭ ಗಳಿಸಲು ಏನು ಮಾಡಬೇಕು. ಮಂಗಳವಾರದ ರಾಶಿ ಭವಿಷ್ಯ…
ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…
ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…
ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…