Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಠ, ರಾಜಕಾರಣಿಗಳ ಮನೆಗೆ ಪಬ್ಲಿಕ್‌ ಟಿವಿ ರಂಗಣ್ಣ ಭೇಟಿ ಏಕೆ ?

Facebook
Twitter
Telegram
WhatsApp

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸದಾ ಒಂದಲ್ಲ ಒಂದು ರೀತಿ ಹೊಸ ಪ್ರಯೋಗಗಳ ಮೂಲಕ ರಾಜ್ಯದ ಜನರ ಮನೆ ಮಾತಾಗಿರುವ ಕೆಲವೇ ಪತ್ರಕರ್ತರಲ್ಲಿ ಎಚ್‌.ಆರ್‌.ರಂಗನಾಥ್‌ ಪ್ರಮುಖರು. ಕನ್ನಡಪ್ರಭ, ಸುವರ್ಣ ಟಿವಿ ಸೇರಿ ವಿವಿಧ ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಿರುವ ರಂಗನಾಥ್‌ ಸದ್ಯ ತಮ್ಮದೇ ಮಾಲೀಕತ್ವದಲ್ಲಿ ಪಬ್ಲಿಕ್‌ ಟಿವಿ ದೃಶ್ಯ ಮಾಧ್ಯಮ ನಡೆಸುತ್ತಿದ್ದು, ಇದರ ಕೇಂದ್ರಬಿಂದು ಕೂಡ ರಂಗನಾಥ್‌ ಆಗಿದ್ದಾರೆ.

ಪ್ರತಿದಿನ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಇವರು ರಾಜಕಾರಣಿಗಳು, ಅಧಿಕಾರಿಗಳ ತಪ್ಪು ನಡೆಯನ್ನು ಹಳ್ಳಿ ಸೊಗಡು ಶೈಲಿಯಲ್ಲಿ ಖಂಡಿಸಿ ಜನರ ಮನ ಗೆದ್ದಿದ್ದಾರೆ.

ಇಂತಹ ರಂಗನಾಥ್‌ ಒಂದೆರಡು ದಿನಗಳಿಂದ ಪ್ರಮುಖ ರಾಜಕಾರಣಿಗಳು, ಮಠಾಧೀಶರು, ಅಧಿಕಾರಿಗಳ ಮನೆಗೆ ಭೇಟಿ ನೀಡುತ್ತಿರುವುದು ವಿಶೇ಼ಷವಾಗಿ ಗಮನಸೆಳೆದಿದೆ. ಯಾತಕ್ಕಾಗಿ ಈ ರೀತಿ ರಂಗನಾಥ್‌ ಭೇಟಿ ನೀಡುತ್ತಿದ್ದಾರೆ ಎಂಬುದು ಬಹುತೇಕರನ್ನುಕಾಡುತ್ತಿದೆ.

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ್‌, ಕಾಗಿನೆಲೆ ಮಠದ ಶ್ರೀ ನಿರಾಂಜನಾನಂದಪುರಿ ಸ್ವಾಮೀಜಿ ಹೀಗೆ ಸಾಲು ಸಾಲು ಅಧಿಕಾರಿಗಳು, ರಾಜಕಾರಣಿಗಳು, ಚಲನಚಿತ್ರ ನಟರು, ಉದ್ಯಮಿಗಳು, ಮಠಾಧೀಶರನ್ನು ರಂಗನಾಥ್‌ ಬಿಡುವು ಇಲ್ಲದೇ ಭೇಟಿ ನೀಡುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣ ತಮ್ಮ ಪುತ್ರಿ ವಿವಾಹ ಡಿಸೆಂಬರ್‌ 4 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದು, ಈ ಶುಭ ಕಾರ್ಯಕ್ಕೆ ತಾವುಗಳು ಆಗಮಿಸಿ ವಧು-ವರರನ್ನು ಆಶೀವರ್ದಿಸಬೇಕೆಂದು ಅಮಂತ್ರಣ ಪತ್ರಿಕೆ ವಿತರಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮೋದಿ ಅಬ್ಬರ : ಅಭ್ಯರ್ಥಿಗಳ ಗೆಲುವಿಗೆ ಮತಯಾಚನೆ

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ‌. ರಾಜ್ಯಕ್ಕೆ ಬಂದಿರುವ ಪ್ರಧಾನಿ ಮೋದಿ ಅಭ್ಯರ್ಥಿಗಳ ಪರವಾವಿ ಮತಯಾಚನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಸಂಚಾರ ನಡೆಸಿ, ಮತಯಾಚನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದ

ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ಹೋರಾಟ ಅನಿವಾರ್ಯ : ಬಿ.ಎನ್.ಚಂದ್ರಪ್ಪ

ಸುದ್ದಿಒನ್,  ಚಿತ್ರದುರ್ಗ: ಏ.20 :  ಕೇಂದ್ರ ಬಿಜೆಪಿ ಸರ್ಕಾರದ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು. ಹಿರಿಯೂರು ತಾಲೂಕಿನ ಕೋಡಿಹಳ್ಳಿ

ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ 25 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20  : ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಿ.ಯೋಗೇಶ್‍ಬಾಬು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಎಸ್.ಬಸವರಾಜು, ಕೆ.ಚಂದ್ರಣ್ಣ,

error: Content is protected !!