ಬೆಂಗಳೂರು; ಇತ್ತೀಚೆಗಷ್ಟೇ ನಟಿ ನೇಹಾಗೌಡ ಹಾಗೂ ಚಂದನ್ ಗೌಡ ಅವರು ತಮ್ಮ ಮಗಳ ನಾಮಕರಣವನ್ನು ಮಾಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಬಂಧು ಬಳಗದವರನ್ನ ಕರೆದು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಮಗಳಿಗೆ ಶಾರದಾ ಎಂಬ ಹೆಸರನ್ನ ಇಟ್ಟಿದ್ದಾರೆ. ಈ ಹೆಸರಿನ ಬಗ್ಗೆಯೇ ಸಾಕಷ್ಟು ಚರ್ಚೆ ಆಗ್ತಾ ಇದೆ. ಇದಕ್ಕೆ ಅವರ ತಂದೆ ರಾಮಕೃಷ್ಣ ಅವರೇ ಉತ್ತರ ನೀಡಿದ್ದಾರೆ.
ಈಗಂತೂ ಜನ ಹೊಸ ಹೊಸ ಹೆಸರುಗಳನ್ನೇ ಇಡುತ್ತಾರೆ. ಅದರಲ್ಲೂ ಇಂಗ್ಲೀಷ್ ಟೋನ್ ಇರುವಂತ ಹೆಸರು ಬರುತ್ತಿವೆ. ಆದ್ದರಿಂದ ಮೊಮ್ಮಗಳಿಗೆ ನಮ್ಮ ಪರಂಪರೆಯ, ನಮ್ಮ ಸಂಸ್ಕೃತಿ ಇದೆಲ್ಲಾ ಬಿಂಬಿತವಾಗುವಂತ ಹೆಸರನ್ನ ಇಡಬೇಕು ಅನ್ನಿಸಿತು. ಹೀಗಾಗಿ ಶಾರದ ಎಂಬ ಹೆಸರನ್ನ ಇಟ್ಟಿದ್ದೇವೆ. ಈ ಹೆಸರನ್ನು ಕೇಳಿದ ಎಲ್ಲರಿಗೂ ಖುಷಿ ಕೊಟ್ಟಿದೆ. ಅದ್ದರಿಂದ ನಮ್ಮೆಲ್ಲರಿಗೂ ಖುಷಿಯಾಗಿದೆ. ಶಾರದೆ ನಮ್ಮ ವಿದ್ಯಾದೇವತೆ. ವಿದ್ಯೆಗೆ ಆಕೆಯೇ ಅಧಿಪತಿ. ಈ ಹೆದರಿಟ್ಟಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ.
ಮಕ್ಕಳಿಗೆ ಅಕ್ಷರ ಚೆನ್ನಾಗಿ ತಲೆಗೆ ಹೋಗಲಿ, ವಿದ್ಯೆ ಒಲಿಯಲಿ ಎಂಬ ಕಾರಣಕ್ಕೆ ಸಾಕಷ್ಟು ಜನ ಶೃಂಗೇರಿ ಶಾರದಾ ಪೀಠಕ್ಕೆ ಹೋಗಿ ಈಗಲೂ ಅಕ್ಷರಾಭ್ಯಾಸ ಮಾಡಿ ಬರುತ್ತಾರೆ. ಹೀಗಾಗಿ ನೇಹಾ ಗೌಡ ಮತ್ತು ಚಂದನ್ ದಂಪತಿ ಮಗುವಿಗೆ ಶಾರದಾ ಎಂಬ ಹೆಸರನ್ನೇ ಇಟ್ಟಿದ್ದಾರೆ. ಶಾರದಾ ಎಂಬ ಹೆಸರು ಕೇಳುವುದಕ್ಕೂ ಹಿತ ಎನಿಸುತ್ತದೆ. ಕರೆಯುವುದಕ್ಕೂ ಖುಷಿ ಎನಿಸುತ್ತದೆ. ಕೊಂಚ ಹಿಂದಿನ ಕಾಲದ ಹೆಸರೇ ಆದರೂ ಆ ಹೆಸರಿನ ಮೇಲೆ ಎಲ್ಲರಿಗೂ ಅಪಾರವಾದ ಗೌರವ ಇರುವುದು ಕಾಣಿಸುತ್ತದೆ. ಇನ್ಮುಂದೆ ನೇಹಾ ಮಗಳು ಶಾರದೆಯಾಗಿ ನಲಿಯುತ್ತಾಳೆ.
ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ವಾಸ ಅನಿಭವಿಸುತ್ತಿದ್ದಾರೆ. ಇದರ ನಡುವೆ ತನಿಖೆಯು ನಡೆಯುತ್ತಿದ್ದು, ಗೌರವ…
ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ ಇದೆ.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಬ್ಯಾಂಕ್ ಕಾಲೋನಿ ವಾಸಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೈತ್ತ ಶಿಕ್ಷಕ…
ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ…
ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು, ಭಾನುವಾರದ ರಾಶಿ ಭವಿಷ್ಯ…
ಬೆಂಗಳೂರು; ಒಂದನೇ ತರಗತಿಗೆ ಸೇರಿಸ ಬಯಸುವ ಮಕ್ಕಳನ್ನು ಶಾಲೆಗೆ ಸೇರಿಸುವ ಗೊಂದಲ ಸಾಕಷ್ಟು ಇದೆ. ಆರು ವರ್ಷ ಆಗಿರಲೇಬೇಕು ಎಂಬ…