ಪಂಜಾಬ್ ಸಿಎಂ ಯಾರಾಗ್ಬೇಕು..? ಸಿಎಂ ಕೇಜ್ರಿವಾಲ್ ನಂಬರ್ ಕೊಟ್ಟಿದ್ದು ಯಾಕೆ..?

suddionenews
1 Min Read

ನವದೆಹಲಿ: ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣಾ ದಿನಾಂಕ ಅನೌನ್ಸ್ ಆಗಿದೆ. ಗೆಲ್ಲಬೇಕೆಂಬ ಹಂಬಲ ಎಲ್ಲಾ ಪಕ್ಷಗಳಿಗೂ ಇದ್ದೇ ಇದೆ. ಈ ಮಧ್ಯೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೊಸ ಅವಕಾಶವೊಂದನ್ನ ಜನತೆಗೆ ನೀಡಿದ್ದಾರೆ.

ಪಂಜಾಬ್ ಚುನಾವಣೆಗೆ ಎಎಪಿ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡಿದ್ದು, ಪಂಜಾಬ್ ಎಎಪಿ ಮುಂದಿನ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡುತ್ತಾರೆ. ಈ ಬಗ್ಗೆ ಜನರು ಯಾವುದೇ ಗೊಂದಲವಿಲ್ಲದೆ ಮುಕ್ತವಾಗಿ ತಿಳಿಸಬಹುದು. ಅದಕ್ಕಾಗಿಯೇ ನಂಬರ್ ಅನ್ನು ನೀಡಲಾಗಿದೆ. ಆ ನಂಬರ್ ಗೆ ಕರೆ ಮಾಡಿ ಅಭ್ಯರ್ಥಿ ಯಾರೆಂದು ತಿಳಿಸಬಹುದು.

ಜನವರಿ 17 ಸಂಜೆ 5ರ ವೇಳೆಗೆ ಸಿಎಂ ಅಭ್ಯರ್ಥಿ ಹೆಸರು ತಿಳಿಸಲು ಸೂಚನೆ ನೀಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷವೊಂದು ಸಿಎಂ ಅಭ್ಯರ್ಥಿ ಆಯ್ಕೆಗೆ ಜನರಿಗೆ ಬಿಟ್ಟಿದೆ. ಈ ಬಾರಿ ರೈತರು ಕೂಡ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದಾರೆ. ವರ್ಷಾನುಗಟ್ಟಲೇ ಮಳೆ, ಗಾಳಿ, ಚಳಿ ಎನ್ನದೆ ದೆಹಲಿಯ ರಸ್ತೆಯಲ್ಲಿ ಕೂತು, ಮಲಗಿ ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ಮಾಡಿದ್ದಾರೆ. ಇದೀಗ ಚುನಾವಣೆಗೆ ಅವರೇ ನಿಲ್ಲುತ್ತಿರುವುದು ಅದೆಷ್ಟು ಪಕ್ಷಗಳಿಗೆ ಹಿನ್ನಡೆಯಾಗುತ್ತೋ ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *