Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬದುಕಿದ್ದಾಗ ನೋಡಲು ಬಾರದ ಮಗಳು ಸತ್ತಾಗ ತಂದೆ ಪಾರ್ಥಿವ ಶರೀರದ ಮುಂದೆ ಕಣ್ಣೀರು..!

Facebook
Twitter
Telegram
WhatsApp

ಬೆಂಗಳೂರು: ಒಂದು ಕಡೆ ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡಿದ್ದ ನಟ ಸತ್ಯಜಿತ್ ಅದೇ ನೋವಿನಲ್ಲಿ ಬದುಕ್ತಾ ಇದ್ರು.. ಅದರ ನಡುವೆ 72 ವರ್ಷ ವಯಸ್ಸು ವಯೋಸಹಜ ಕಾಯಿಲೆಯಿಂದ ಒಂದಷ್ಟು ನೋವು.. ಆಸ್ಪತ್ರೆಗೆ ದಾಖಲಾಗಿದ್ದ ಸತ್ಯಜಿತ್ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆದ್ರೆ ಕನವರಿಸುತ್ತಿದ್ದ ಮಗಳು ಮಾತ್ರ ಅಪ್ಪನನ್ನ ನೋಡೋದಕ್ಕೆ ಬಂದೇ ಇರಲಿಲ್ಲ.

ಸತ್ಯಜಿತ್ ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಲಕ್ಷಾಂತರ ರೂಪಾಯಿಯನ್ನ ವ್ಯಯಿಸಿದ್ರಂತೆ. ಈ ಬಗ್ಗೆ ಅವರೇ ನೋವು ತೋಡಿಕೊಂಡಿದ್ರು. ಆದ್ರೆ ಮದುವೆಯಾದ ಬಳಿಕ ತಂದೆಯಿಂದ ದೂರಾದ ಮಗಳು ಸತ್ಯಜಿತ್ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು, ನಾನು ನಮ್ಮ ತಂದೆಗೆ ಹಣ ಕೊಡಬೇಕೆಂಬ ಕಾನೂನು ಇದ್ಯಾ ಅಂತ ಕೇಳಿದ್ರು. ಅಂದಿನಿಂದ ತಂದೆ ಮಗಳ ನಡುವಿನ ಬಾಂಧವ್ಯ ದೂರವಾಗಿತ್ತು.


ಸತ್ಯಜಿತ್ ಒಂದು ಕಾಲು ಕಳೆದುಕೊಂಡು ಅಕ್ಷರಶಃ ಆರ್ಥಿಕ ನಷ್ಟದಲ್ಲಿದ್ರು. ಅವಕಾಶಗಳು ಕಡಿಮೆಯಾಗ್ತಾ ಹೋಯ್ತು.. ಹಣದ ಕೊರತೆ ಜಾಸ್ತಿಯಾಗಿತ್ತು.. ಈ ಮಧ್ಯೆ ಅನಾರೋಗ್ಯ ಬಿಗಡಾಯಿಸಿತ್ತು.. ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ರು ಮಗಳು ಮಾತ್ರ ಕ್ಯಾರೆ ಎಂದಿರಲಿಲ್ಲ.. ಇದೀಗ ತಂದೆ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಮಗಳು ಕಣ್ಣೀರು ಸುರಿಸುತ್ತಾ ಓಡೋಡಿ ಬಂದಿದ್ದಾರೆ. ನನ್ನಿಂದ ತಪ್ಪಾಯ್ತು ಎಂದಿದ್ದಾರೆ. ಆದ್ರೆ ಈ ಸಮಯ.. ಈ ಕ್ಷಣ ಯಾವುದು ಆ ಸತ್ಯಜಿತ್ ದೇಹಕ್ಕೆ ಕೇಳಿಸುತ್ತಿಲ್ಲ ಅನ್ನೋದು ಅಷ್ಟೆ ‘ಸತ್ಯ’.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!