Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಮಾರಸ್ವಾಮಿ ಹೇಳಿದ್ದು ಸತ್ಯವಾಗಿದೆ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

Facebook
Twitter
Telegram
WhatsApp

ಬೆಂಗಳೂರು: ಪಿಎಸ್ಐ ಹಗರಣದ ತನಿಖೆ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇವತ್ತಿನ ತನಕ ಒಬ್ಬ ಆಫೀಸರ್ ನ ಕರೆದು ತನಿಖೆ ನಡೆಸಿಲ್ಲ. ಎಕ್ಸಾಂ ಅಥಾರಿಟಿ ಇತ್ತು, ಹಿರಿಯ ಅಧಿಕಾರಿಗಳಿಗೆ ನೋಟೀಸ್ ಕೊಟ್ಟಿಲ್ಲ ಆ ಬಗ್ಗೆ ಇಲ್ಲಿವರೆಗೆ ಮಾತನಾಡುತ್ತಿಲ್ಲ. ಮೊದಲು ನಾವೂ ರಾಜ್ಯದ ಜೈಲರ್ ವಿಚಾರದಲ್ಲಿ ಯಾರು ಹೊರಗಡೆ ಇದ್ದಾರೆ, ಒಳಗಡೆ ಸೇರಿದ್ದಾರೆ ಅವರು ಜೈಲಿನ ಪರೀಕ್ಷೆಯಲ್ಲಿ ನಾನು ಭಾಗಿಯಾಗಿದ್ದೆ ಎಂಬ ಸ್ಟೇಟ್ ಮೆಂಟ್ ಕೊಟ್ಟರು, ಅದನ್ನು ಸೈಡಿಗಿಟ್ಟು ಬರೀ ಪಿಎಸ್ಐ ವಿಚಾರಕ್ಕೆ ಹೋಗುತ್ತಿದ್ದಾರೆ. ನಮಗೇನು ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ.

ಕುಮಾರಸ್ವಾಮಿ ಅವರು ಏನು ಹೇಳಿದ್ರು, ಇದು ದೊಡ್ಡ ಡೀಲ್ ಅಂತ. ಬಹುಶಃ ನಾನು ನಮ್ಮ ತನಿಖೆ ನೋಡಿದಾಗ ಅವರ ಹೇಳಿಕೆಯಲ್ಲೂ ಬಹಳ ಸತ್ಯ ಕಾಣುತ್ತಿದೆ. ಅವರು ನೀಡಿದ ಹೇಳಿಕೆ ಮೇಲೆ ಸರ್ಕಾರ ಮೊದಲು ಚಿಂತನೆ ಮಾಡಬೇಕು. ಈ ಸಂಬಂಧ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.

ನಮ್ಮ ಅಜೆಂಡಾನೆ 40% ಪ್ಲಸ್ ಉದ್ಯೋಗದ ಹಗರಣ ನಡೆಯುತ್ತದೆಯಲ್ಲ ಅದನ್ನು ಸರಿ ಮಾಡುವುದು. ಬರಿ ಪಿಎಸ್ಐ ಒಂದೇ ಅಲ್ಲ. ಪಿಎಸ್ಐ ನೇಮಕಾತಿ ವಿಚಾರದಲ್ಲಿ ಬರೀ ಹುಡುಗರನ್ನಹ ತರ್ತಾ ಇದ್ದಾರೆ. ಹುಡುಗರಲ್ಲ ರೀ. ಹುಡುಗರು ಅಂಗಡು ತೆಗೆದಿದ್ದಕ್ಕೆ ಸಿಗುತ್ತೆ ಅಂತ ಹೋಗಿ ಖರೀದಿ ಮಾಡೋದಕ್ಕೆ ಹೋಗಿದ್ದರು ಅಷ್ಟೆ. ಯಾರು ಆ ಅಂಗಡಿ ನಡೆಸಿದರು, ಅದಕ್ಕೆ ಬೆನ್ನೆಲುಬು ಯಾರು ಎಂಬ ನಂಬರ್ ಗಳು ನಮ್ಮ ಬಳಿ ಬಂದಿದೆ. ಏನು ತನಿಖೆ ಮಾಡುತ್ತಾರೆ ಎಂಬುದನ್ನು ನೋಡುತ್ತಾ ಇದ್ದೇವೆ. ತನಿಖೆ ನಡೆಯಲಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

error: Content is protected !!