Categories: Home

ದಾವಣಗೆರೆಯಲ್ಲಿ ಕ್ವಿಂಟಾಲ್ ಅಡಿಕೆಯ ಬೆಲೆ ಇಂದು ಎಷ್ಟಿದೆ..?

 

ದಾವಣಗೆರೆ; ಅಡಿಕೆ ಬೆಲೆ ಕೂಡ ಒಂದೊಮದು ಮಾರುಕಟ್ಟೆಯಲ್ಲಿ ಒಂದೊಂದು ರೀತಿ ಇರಲಿದೆ. ದಾವಣಗೆರೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತವನ್ನ ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ಅಡಿಕೆ ಬೆಳೆಗಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿಯೇ ಇದ್ದಾರೆ. ಹೀಗಾಗಿ ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟಕ್ಕೆ ಹೋಯ್ತು ಎಂಬ ಕುತೂಹಲ ಇದ್ದೆ ಇರುತ್ತದೆ. ಆ ಮಾಹಿತಿ ಇಲ್ಲಿದೆ ನೋಡಿ.

ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 52,279 ರೂಪಾಯಿ ಇದೆ. ಕಳೆದ ದಿನದ ಮಾರುಕಟ್ಟೆಯ ದರಕ್ಕೆ ಹೋಲಿಕೆ ಮಾಡಿದರೆ ಸುಮಾರು 179 ರೂಪಾಯಿ ಏರಿಕೆಯಾಗಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ಬೇಸಿಗೆ ಆಗಿರೋ ಕಾರಣ ಬಿಸಿಲು ಜಾಸ್ತಿ, ಈ ಬಿರು ಬೇಸಿಗೆಯಲ್ಲಿ ಅಡಿಕೆ ಗಿಡಗಳನ್ನ ಕಾಪಾಡಿಕೊಳ್ಳುವುದೇ ರೈತನಿಗೆ ಒಂದು ದೊಡ್ಡ ಟಾಸ್ಕ್ ಆಗಿದೆ. ಹೀಗಾಗಿ ಅಡಿಕೆ ಬೆಲೆ ಜಾಸ್ತಿಯಾಗಿರೋದಕ್ಕೆ ರೈತನ ಮೊಗದಲ್ಲಿ ಕೊಂಚ ನೆಮ್ಮದಿಯ ನಗು ಕಾಣಿಸುತ್ತಿದೆ.

ಚನ್ನಗಿರಿ ಅಡಿಕೆ ಧಾರಣೆ ಗರಿಷ್ಠ 52,279 ರೂಪಾಯಿ ಆಗಿದೆ. ಹಾಗೇ ಕನಿಷ್ಠ 43,000 ರೂಪಾಯಿ ಇತ್ತು. ಬೆಟ್ಟೆ ಅಡಿಕೆ ಗರಿಷ್ಠ 24,786 ರೂಪಾಯಿ ಇದೆ. ಗರಿಷ್ಠ ದರ 17,659 ರೂಪಾಯಿ ಇತ್ತು. ಇನ್ನು ಜನವರಿಯಲ್ಲಿ 52 ಸಾವಿರದ ಒಳಗಿದ್ದ ಅಡಿಕೆ, ಫೆಬ್ರವರಿಯಲ್ಲಿ 53 ಸಾವಿರದ ಗಡಿ ದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿಯೇ ಅಡಿಕೆ ಬೆಳೆಗಾರರಿಗೆ ಕೊಂಚ ಸಮಾಧಾನವಾಗುವಂತ ದರ ಕಂಡು ಬಂದಿದೆ. ಅಡಿಕೆ ದರ ಹೀಗೆ ಏರಿಕೆಯಾದರೆ ರೈತರಿಗೂ ಒಂದು ನೆಮ್ಮದಿ. ಯಾಕಂದ್ರೆ ಅಡಿಕೆ ಬೆಳೆಗೆ ನೀರನ್ನ ಒದಗಿಸೋದು ಒಂದೇ ಸವಾಲಿನ ಕೆಲಸವಲ್ಲ, ಜೊತೆಗೆ ರೋಗಗಳಿಂದಾನು ಅಡಿಕೆ ಬೆಳೆಯನ್ನ ಕಾಪಾಡಿಕೊಳ್ಳಬೇಕಾಗಿದೆ.

suddionenews

Recent Posts

ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಾರಾ..?

ಹುಬ್ಬಳ್ಳಿ; ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬಿಜೆಪಿ ಪಕ್ಷದಲ್ಲಿಯೇ ಇದ್ರು ಕೂಡ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ…

16 minutes ago

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

  ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 15 ) ಹತ್ತಿ ಮಾರುಕಟ್ಟೆ…

2 hours ago

ಚಿತ್ರದುರ್ಗ ಪಿಎಸ್ಐ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ ಆರೋಪ

  ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ…

3 hours ago

ರುದ್ರಪ್ಪ ಲಮಾಣಿ ದಿಢೀರನೇ ಬೆಂಗಳೂರಿಗೆ ಶಿಫ್ಟ್

  ಬೆಂಗಳೂರು; ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಈಗಾಗಲೇ…

3 hours ago

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ, ಈ ರಾಶಿಯವರು ಸೋಲಿಲ್ಲದ ಸರದಾರನಾಗಿ ಮುಟ್ಟಿದ್ದೆಲ್ಲ ಚಿನ್ನ. ಶನಿವಾರದ ರಾಶಿ ಭವಿಷ್ಯ…

10 hours ago

ಹಿರಿಯೂರು ಬಳಿ ಉಪ ಸಭಾಪತಿಗೆ ಬೈಕ್ ಡಿಕ್ಕಿ : ಪ್ರಾಣಾಪಾಯದಿಂದ ಪಾರು

ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…

19 hours ago