ನಾವು ಜೈಲಿಗೆ ಹೋಗಲು ಸಿದ್ಧ ; ಮಾಜಿ ಸಚಿವ ಆಂಜನೇಯ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಅ.06) :  ನೀವು ಯಾರನ್ನ ಬೇಕಾದರು ಬಂಧಿಸಿ ನಾವು ಜೈಲಿಗೆ ಹೋಗಲು ಸಿದ್ಧವಾಗಿದ್ದೇವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ರಾಜಕೀಯವಾಗಿ ನೀವು ಸದ್ಯ ಉಳಿದಿರುವುದಕ್ಕೆ ಕೊರೊನಾ ಹೆಮ್ಮಾರಿ ಕಾರಣವಾಗಿದೆ. ಈ ಹೆಮ್ಮಾರಿ ಇಲ್ಲವಾಗಿದ್ದರೆ ಈ ದೇಶದಲ್ಲಿ ಅಹಿಂಸಾತ್ಮಕ ಚಳುವಳಿ ನಡೆಯುತ್ತಿತ್ತು. ಕೊರೊನಾ ಕಾರಣಕ್ಕೆ ನಾವು ಶಾಂತಿ ರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಎಚ್ಚರಿಸಿದರು.

ನಮ್ಮ ಹೋರಾಟಕ್ಕೆ ಬೆಲೆ ಕೊಟ್ಟು ರೈತರ ಸಮಸ್ಯೆಗಳನ್ನ ಇತ್ಯರ್ಥ ಮಾಡಬೇಕು. ಪ್ರಿಯಾಂಕ ಗಾಂಧಿ ಅವರನ್ನ ಬಂಧಿಸಿರುವ ಅಮಾನವೀಯ ಘಟನೆಗೆ ದೇಶದ ಜನರಲ್ಲಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಉತ್ತರಪ್ರದೇಶದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ರಾಜಕಾರಣಿಗಳ ಮಕ್ಕಳು ರೈತರ ಮೇಲೆ ಜೀಪ್ ಹರಿಸಿ ಮೂಲಕ ಕೊಲೆ ಮಾಡಿದ್ದಾರೆ. ಕ್ರೂರ ಮನಸ್ಸಿನ ನೀವು ದೇಶವನ್ನು ಆಳಲಿಕ್ಕೆ ಯೋಗ್ಯರಾ ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *