Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಎಪಿಗೆ ಮತ ನೀಡಿ ಸ್ವಚ್ಚ ಆಡಳಿತಕ್ಕೆ ಅವಕಾಶ ನೀಡಿ : ಜಗದೀಶ್

Facebook
Twitter
Telegram
WhatsApp

 

ಚಿತ್ರದುರ್ಗ,(ಫೆ.21) : ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಕಿತ್ತು ಹಾಕಿ ಎಎಪಿಗೆ ಮತವನ್ನು ಹಾಕುವುದರ ಮೂಲಕ ಭ್ರಷ್ಠಾಚಾರ ರಹಿತ ಆಡಳಿತವನ್ನು ನೀಡಲು ಅವಕಾಶವನ್ನು ನೀಡುವಂತೆ ಮತದಾರರಲ್ಲಿ ಎಎಪಿಯ ಜಂಟಿ ಕಾರ್ಯದರ್ಶಿಗಳಾದ ಜಗದೀಶ್ ಮನವ ಮಾಡಿದ್ದಾರೆ.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಸ್ವಚ್ಚತಾ ಕಾರ್ಯವನ್ನು ಪ್ರಾರಂಭ ಮಾಡಿ ಸಂತೇಪೇಟೆ ವೃತ್ತ, ಬಿಡಿರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಮಹಾವೀರ ವೃತ್ತ, ಓನಕೆ ಒಬವ್ವ ವೃತ್ತ, ನಿಜಲಿಂಗಪ್ಪ ರಸ್ತೆ, ವಿಪಿ ಬಡಾವಣೆಯ ಎಎಪಿ ಪಕ್ಷದ ಕಾರ್ಯಲಯದವರೆಗೂ ಸ್ವಚ್ಚತಾ ಕಾರ್ಯವನ್ನು ಮಾಡಿದರು.

ನಂತರ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಚಿತ್ರದುರ್ಗ ವಿಧಾನಸಬಾ ಕ್ಷೇತ್ರ ಯಾವುದೇ ರೀತಿಯಿಂದಲೂ ಅಭಿವೃದ್ದಿಯನ್ನು ಕಂಡಿಲ್ಲ, ಕಳೆದ ಹಲವಾರು ವರ್ಷಗಳಿಂದ ಶಾಸಕರಾಗಿರುವರು ಸಹಾ ಕ್ಷೇತ್ರದ ಅಭಿವೃದ್ದಿಯನ್ನು ಮಾಡದೇ ತಮ್ಮ ಅಭಿವೃದ್ದಿಯನ್ನು ಮಾಡಿಕೊಂಡಿದ್ದಾರೆ ಕಮಿಷನ್ ಪಡೆಯುವುದರ ಮೂಲಕ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಬಾರಿ ಎಎಪಿ ಪಕ್ಷಕ್ಕೆ ಅಧಿಕಾರವನ್ನು ನೀಡುವುದರ ಮೂಲಕ ಸ್ವಚ್ಚವಾದ ಆಡಳಿತವನ್ನು ನೀಡಲು ಅವಕಾಶವನ್ನು ನೀಡಬೇಕಿದೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸೂರು ಇಲ್ಲದೆ ಸಾವಿರಾರು ಮಂದಿ ಇದ್ದಾರೆ. ಅವರಿಗೆ ಸೂರನ್ನು ನೀಡುವುದರ ನಮ್ಮ ಕರ್ತವ್ಯವಾಗಿದೆ. ಜೆಸಿಬಿ ಪಕ್ಷಗಳಿಂದ ಯಾವುದೇ ರೀತಿಯಿಂದಲೂ ಅಭಿವೃದ್ದಿ ಸಾಧ್ಯವಿಲ್ಲ, ದೆಹಲಿಯಲ್ಲಿ ಕ್ರೇಜಿವಾಲ್‌ರವರು ಉತ್ತಮವಾದ ಆಡಳಿತವನ್ನು ನೀಡುತ್ತಿದ್ದಾರೆ.

ಇದೇ ರೀತಿಯ ಆಡಳಿತವನ್ನು ಕರ್ನಾಟಕದಲ್ಲೂ ಸಹಾ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಚಿತ್ರದುರ್ಗದಲ್ಲಿ ಪಕ್ಷದವತಿಯಿಂದ ಸದಸ್ಯತ್ವವನ್ನು ಮಾಡಲಾಗಿದ್ದು ಇದರಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಸದಸ್ಯರಾಗಿದ್ದಾರೆ, ಜಿಲ್ಲೆಯಲ್ಲಿ 20ಸಾವಿರಕ್ಕೂ ಹೆಚ್ಚು ಜನ ಸದಸ್ಯರಾಗಿದ್ದಾರೆ. ಎಂದ ಅವರು ಸರ್ಕಾರದಿಂದ ಬಂದ ಮನೆಗಳನ್ನು ಶಾಸಕರು ಅರ್ಹರಿಗೆ ನೀಡುವ ಬದಲು ತಮ್ಮ ಹಿಂಬಾಲಕರಿಗೆ ನೀಡಿದ್ದಾರೆ. ಇದರಿಂದ ಬಡವರು ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವನ್ನು ಮಾಡುವುದರ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷರಾದ ಫಾರೂಕು, ಹಿರಿಯೂರು ರಾಧಮ್ಮ, ತಿಪ್ಪೇಸ್ವಾಮಿ, ರವಿ,ಬಸವರಾಜು, ಲೋಹಿತ್, ನವೀನ್, ಆನಂದಪ್ಪ, ದಾಸಣ್ಣ, ತಿರುಕ, ಕುಬೇರ್ ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!