Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಹಿತ್ಯ ಕ್ಷೇತ್ರಕ್ಕೆ ವೇಣು ಕೊಡುಗೆ ಅಪಾರ : ಮಾಜಿ ಸಚಿವ ಆಂಜನೇಯ

Facebook
Twitter
Telegram
WhatsApp

ಚಿತ್ರದುರ್ಗ, (ಜ.25): ಬೆಳಗೆರೆ, ತಳಕು ಕುಟುಂಬಳಗಳಂತೆ ಏಕಾಂಗಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಬಿ.ಎಲ್‍.ವೇಣು ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್‍.ಆಂಜನೇಯ ಬಣ‍್ಣಿಸಿದರು.

ಮಂಗಳವಾರ ಮಧ್ಯಾಹ್ನ ಬಿ.ಎಲ್‍.ವೇಣು ನಿವಾಸಕ್ಕೆ ಭೇಟಿ ನೀಡಿ ಅವರನ್ನು ಗೌರವಿಸಿ, ಬೇಡರ್ದಂಗೆ ಕಾದಂಬರಿ ಖರೀದಿಸಿದ ವೇಳೆ ಮಾತನಾಡಿದರು.

ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ‍್ಳಬೇಕೆಂಬ ಅಭಿಲಾಶೆ ಹೊಂದಿದ್ದೇ, ಆದರೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಇಂದು ಭೇಟಿ ನೀಡಿದ್ದೇನೆ ಎಂದರು.

ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿರುವ ಬಿ.ಎಲ್‍.ವೇಣು ಜಿಲ್ಲೆಯ ಹೆಮ್ಮೆ ಜತೆಗೆ ಆಸ್ತಿ ಆಗಿದ್ದಾರೆ. ಅವರನ್ನು ಗೌರವಿಸುವ ಕಾರ್ಯ ನಮ್ಮನ್ನು ನಾವು ಗೌರವಿಸಿಕೊಂಡು ಸಂಭ್ರಮಿಸಿದಂತೆ ಎಂದು ಅಭಿಪ್ರಾಯಪಟ್ಟರು.

ಹತ್ತಾರು ಕಾದಂಬರಿ, ಕಥೆಗಳು ಸೇರಿ ಅನೇಕ ಕೃತಿಗಳನ್ನು ರಚಿಸಿರುವ ವೇಣು ಅವರ ಸಾಹಿತ್ಯ ಸಾಮಾನ್ಯ ಓದುಗರ ಮನಗೆದ್ದಿದೆ. ಇನ್ನೂ ಹೆಚ್ಚು ಕೃತಿಗಳನ್ನು ತರಬೇಕು. ಈ ನಿಟ್ಟಿನಲ್ಲಿ ತಾವು ಆರೋಗ್ಯದ ಕಡೆ ಹೆ್ಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಕೃತಿಗಳನ್ನು ಜನತೆ ಹೆಚ್ಚು ಹೆಚ್ಚಾಗಿ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಜತೆಗೆ ಪಠ್ಯೇತ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಲು ಸಾಧ‍್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ಅಭಿವೃದ್ಧಿ, ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಸ್ಪರ ಚರ್ಚಿಸಿದ ಸಂದರ್ಭ, ವೇಣು ಮಾತನಾಡಿ, ನನ್ನ ಕಾದಂಬರಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ರಿ. ಆದರೆ ಸಚಿವರಾಗಿದ್ದ ಸಂದರ್ಭ ಕೆಲಸದ ಒತ್ತಡದಲ್ಲಿ ಸಾಧ್ಯವಾಗಲಿಲ್ಲ. ಈಗ ಸಮಯವಿದ್ದು, ಬೇಗ ಮಾಡುವಂತೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಂಜನೇಯ, ಹೌದು ನಿಮ್ಮ ಕಾದಂಬರಿಯನ್ನು ಸಿನಿಮಾವನ್ನಾಗಿ ಮಾಡಬೇಕೆಂಬ ಮಹದಾಸೆ ನನ್ನದು. ಉತ್ತಮವಾಗಿ ಚಿತ್ರ ಮೂಡಿಬರಬೇಕು. ಮತ್ತೊಮ್ಮೆ ಈ ಕುರಿತು ಸುಧಿರ್ಘ ಚರ್ಚೆ ನಡೆಸೋಣಾ, ನಿರ್ದೇಶಕ ನಾಗಾಭರಣ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಅನೇಕರನ್ನು ಕರೆಯಿಸಿ, ಅವರೊಂದಿಗೆ ಮಾತುಕತೆ ನಡೆಸಿ ಅಂತಿಮ ರೂಪ ಕೊಡೋಣಾ ಎಂದರು.

ಸಚಿವನಾಗಿದ್ದ ವೇಳೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೀರಾ. ಆದರೆ, ಅವುಗಳಿಗೆ ಪ್ರಚಾರ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದೀರಾ ಎಂದು ವೇಣು ಅವರು, ಆಂಜನೇಯ ಅವರಿಗೆ ಹೇಳಿದರು.

ನನ್ನ ಬಳಿ ತಾವು ಮಾಡಿದ ಅಭಿವೃದ್ಧಿ ಹೆಜ್ಜೆ ಗುರುತುಗಳನ್ನು ಹೇಳಿಕೊಂಡಂತೆ ಸಾರ್ವತ್ರಿಕವಾಗಿ ಹೇಳಿಕೊಳ‍್ಳಬೇಕು. ತಾವು್ ಮಾಡಿರುವ ಅಭೀವೃದ್ಧಿ ಕಾರ್ಯಗಳು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ತಾವು ಹೇಳುವ ಮಾತು ನಿಜ ಎಂದು ವೇಣು ಮಾತಿಗೆ ಸಹಮತ ವ್ಯಕ್ತಪಡಿಸಿದ ಆಂಜನೇಯ, ವಿಜ್ಞಾನ, ಕಲಾ ಕಾಲೇಜ್‍, ವಾಲ್ಮೀಕಿ ಭವನ, ಚಿತ್ರದುರ್ಗದಲ್ಲಿ ಈಗ ಆಗುತ್ತಿರುವ  ರಸ್ತೆ ಅಭಿವೃದ್ಧಿ ಕಾರ್ಯಗಳು ನಮ್ಮ ಕಾಂಗ್ರೆಸ್‍ ಸರ್ಕಾರದ ಅವಧಿ ಆಗಿರುವ  ಕೆಲಸಗಳು. ಜಿಲ್ಲೆಯಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕೆಲಸಗಳು ಮಾಡಿದ್ದೇವೆ. ಆದರೆ ನಾವು ಈ ವಿಷಯದಲ್ಲಿ ಪ್ರಚಾರ ಪಡೆದುಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೇವು. ಎಂದರು.

ಬೇಡರ್ದಂಗೆ ಕಾದಂಬರಿ ವಿಷಯದ ವಸ್ತು ಹಾಗೂ ಹಿನ್ನೆಲೆಯ ಮಾಹಿತಿಯನ್ನು ಬಿ.ಎಲ್‍.ವೇಣು ಅವರಿಂದ ಪಡೆದುಕೊಂಡ ಆಂಜನೇಯ ಅವರು, ಇಂತಹ ಕಾದಂಬರಿ ಬರೆಯುವ ಶಕ್ತಿ ಇನ್ನೂ ಹೆಚ್ಚು ಕಾಲ ದೊರೆಯಲಿ, ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮಿಂದ ಹೆಚ್ಚು ಕೊಡುಗೆ ಇನ್ನೂ ಲಭಿಸಲಿ ಎಂದು ಶುಭ ಹಾರೈಸಿ ಗೌರವಿಸಿದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲಾ ವಕೀಲರಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಚಾಲನೆ

  ಚಿತ್ರದುರ್ಗ, ಮಾರ್ಚ್. 29 : ಚಿತ್ರದುರ್ಗ ಜಿಲ್ಲಾ ವಕೀಲರ ಕಲಾ ಬಳಗದಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅಕ್ಟೋಬರ್ 13, 2024 ರಂದು ಮದಕರಿ ನಾಯಕ ಜಯಂತಿ ಅಂಗವಾಗಿ

ನನ್ನ ರಾಜಕೀಯ ಶಕ್ತಿ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ : ಶಾಸಕ ಎಂ.ಚಂದ್ರಪ್ಪ ಸವಾಲು

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29  : ನನ್ನ ಮಗ ಏನು ತಪ್ಪು ಮಾಡಿದ್ದಾ ಅಂತ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೇಟ್

BMTCಯಲ್ಲಿ 2,500 ಹುದ್ದೆಗಳು ಖಾಲಿ : ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2,500 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಅರ್ಜಿ ಆಹ್ವಾನ ಮಾಡಿ, ನೋಟಿಫೀಕೇಷನ್ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ cetonline.karnataka.gov.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಹಾಕುವವರು ದ್ವಿತೀಯ

error: Content is protected !!