in ,

ಉರಿಗೌಡ – ನಂಜೇಗೌಡ ಸಿನಿಮಾ ಇದೀಗ ಆದಿಚುಂಚನಗಿರಿ ಅಂಗಳಕ್ಕೆ..!

suddione whatsapp group join

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ಉರಿಗೌಡ ಮತ್ತು ನಂಜೇಗೌಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದ್ದಾರೆ. ಅಶ್ವತ್ಥ್ ನಾರಾಯಣ್ ಅವರು ಅದ್ಯಾವಾಗ ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಅಂದ್ರೋ ಅಂದಿನಿಂದಾನೂ ಈ ವಿಚಾರ ಚಾಲ್ತಿಯಲ್ಲಿದೆ.

ಅಷ್ಟೆ ಅಲ್ಲ ಇದೃ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಸಚಿವ ಮುನಿರತ್ನ ಘೋಷಣೆ ಮಾಡಿದ್ದಾರೆ. ಸಿನಿಮಾ ಶೂಟಿಂಗ್ ಯಾವಾಗ ಎಂಬುದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಬಿಜೆಪಿ ನಾಯಕರ ಸಿನಿಮಾ ಮಾಡುವ ವರ್ತನೆಗೆ ವಿರೋಧ ವ್ಯಕ್ತಪಡಿಸಿದರು. ಇದು ಒಕ್ಕಲಿಗ ಸಮುದಾಯಕ್ಕೆ ಮಾಡುವ ಅವಮಾನ ಎಂದು ಹೇಳಿದ್ದರು. ಇದೀಗ ಈ ವಿಚಾರಕ್ಕೆ ಆದಿಚುಂಚನಗಿರಿ ಅಂಗಳಕ್ಕೆ ಸಮಸ್ಯೆ ಹೋಗಿದೆ.

ನಾಳೆ ಆದಿಚುಂಚನಗಿರಿ ಶ್ರೀಗಳನ್ನು ಮುನಿರತ್ನ ಅವರು ಭೇಟಿಯಾಗಲಿದ್ದಾರೆ. ಭೇಟಿಯ ಬಳಿಕ ಮುಂದಿನ ನಿರ್ಧಾರ ತಿಳಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಮುನಿರತ್ನ, ನಾನು ನಿರ್ಮಾಪಕನಾಗಿ ಸಿನಿಮಾ ಮಾಡೋಣಾ ಅಂತಿದ್ದೀನಿ
ಶ್ರೀಗಳ ಜೊತೆಗೆ ಮಾತನಾಡ್ತೀನಿ. ಸಲಹೆ ಪಡೆದು ಮುಂದಿನ ನಿರ್ಧಾರ ಮಾಡ್ತೇನೆ. ಶ್ರೀಗಳನ್ನು ಭೇಟಿ ಮಾಡ್ತೀನಿ, ಅಲ್ಲಿಯ ತನಕ ಚಿತ್ರದ ಹೆಚ್ಚೇನು ಮಾತನಾಡುವುದಿಲ್ಲ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ರಾಷ್ಟ್ರೀಯ ಸೇವಾ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಬೆಳೆಯಲು ಸಹಕಾರಿ:ಮಾಧವ್ ಅಭಿಮತ

ಜ್ಯೋತಿ ಗಣೇಶ್ ಮತ್ತು ಸೊಗಡು ಶಿವಣ್ಣ ಟಿಕೆಟ್ ಪೈಪೋಟಿಯಿಂದ ಕಾಂಗ್ರೆಸ್ ಗೆ ಗೆಲುವಾಗುತ್ತಾ..?