ಸದ್ಯ ಮಳೆಗಾಲದಲ್ಲಿದ್ದೇವೆ.ಒಂದುಕಡೆ ಕೊರೊನಾ ಮತ್ತೊಂದು ಕಡೆ ವಾತಾವರಣ ಬದಲಾವಣೆ. ಹೀಗಾಗಿ ಇಂಥ ಸಂದರ್ಭದಲ್ಲಿ ನಾವೂ ಸೇವಿಸುವ ಆಹಾರವೂ ತುಂಬಾ ಮುಖ್ಯವಾಗುತ್ತೆ. ಅದರಲ್ಲಿ ಕುದಿಸಿ, ಆರಿಸಿದ ನೀರು ಕೂಡ ಒಂದು.
ಕುದಿಸಿ, ಆರಿಸಿ ನೀರು ಕುಡಿಯೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..? ಇದರಿಂದ ಉರಿ ಮೂತ್ರರೋಗ ಕಡಿಮೆ ಆಗುತ್ತದೆ.
-ತುಪ್ಪದ ಹೀರೆಕಾಯಿಯನ್ನು ಅಡುಗೆಯಲ್ಲಿ ಹೇರಳವಾಗಿ ಉಪಯೋಗಿಸುವುದರಿಂದ ಮೂತ್ರವು ಸುಸೂತ್ರವಾಗಿ ಆಗುವುದು.
– ಕಬ್ಬಿನ ಹಾಲು, ಎಳೆನೀರು, ಹಸಿ ಶುಂಠಿ, ನಿಂಬೆರಸ ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಕುಡಿಯುವುದರಿಂದ ಮೂತ್ರಬಾಧೆ ಕಡಿಮೆಯಾಗುವುದು.
– ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿಮೆಣಸು ಪುಡಿಯನ್ನು ಸೇರಿಸಿ, ಊಟ ಮಾಡುವುದರಿಂದ ಮೂತ್ರ, ಗುದದ್ವಾರದ ಉರಿ ಕಡಿಮೆ ಆಗುವುದಲ್ಲದೆ, ತೊಂದರೆ ಇಲ್ಲದೆ ಮೂತ್ರ ವಿಸರ್ಜನೆಯಾಗುವುದು.
-ಹೆಚ್ಚು ಮೂತ್ರ ವಿರ್ಸಜನೆ ಆಗುತ್ತಿದ್ದರೆ ದಾಲ್ಚಿನ್ನಿ ಪುಡಿಯನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ಗುಣ ಆಗುವುದು.
-ಬೂದಗುಂಬಳವನ್ನು ತಿನ್ನುವುದರಿಂದ ಕೂಡ ಮೂತ್ರ ವಿಸರ್ಜನೆ ಸಲೀಸಾಗುವುದು.