ನನಗೆ ಸಚಿವ ಸ್ಥಾನ ಕೊಡಲೇಬೇಕು : ಕಾರಣ ಬಿಚ್ಚಿಟ್ಟ ಶಾಸಕ ರೇಣುಕಾಚಾರ್ಯ

suddionenews
1 Min Read

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಸಚಿವರಾಗಬೇಕೆಂಬ ಬಯಕೆ ಇರೋದು ಹೊಸದೇನಲ್ಲ. ಸಚಿವ ಸ್ಥಾನಕ್ಕಾಗಿ ಸಾಕಷ್ಟು ಹೋರಾಟ ಕೂಡ ಮಾಡ್ತಾ ಇದ್ದಾರೆ. ಆದ್ರೆ ಈ ಬಾರಿ ನನ್ನನ್ನ ಸಚಿವನಾಗಿ ಮಾಡಲೇಬೇಕು ಎಂದಿದ್ದಾರೆ. ಅದಕ್ಕೆ ಕೊಟ್ಟ ಕಾರಣವೇ ಸಾಮಾಜಿಕ ಕೆಲಸ.

ನಾನು ಸಾಕಷ್ಟು ಸಾಮಾಜಿಕ ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಲೇಬೇಕು. ಈ ಬಾರಿ ಸಚಿವ ಸ್ಥಾನಕ್ಕೆ ನಾನು‌ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅರುಣ್ ಸಿಂಗ್ ಅವರು ಕರೆದಿದ್ದಾರೆ. ಹೀಗಾಗಿ ದೆಹಲಿಗೆ ಹೋಗ್ತೇನೆ. ಈ ವೇಳೆ ಸಚಿವ ಸ್ಥಾನ ಬೇಕೆ ಬೇಕು ಎಂದು ಕೇಳುತ್ತೇನೆ.

ಅಷ್ಟೇ ಅಲ್ಲ ಕೆಲವು ಸಚಿವರ ವಿರುದ್ಧವೂ ದೂರು ನೀಡ್ತೇನೆ. ನನ್ನ ವಿರುದ್ಧವೂ ದೂರು ನೀಡಿದ್ದಾರೆ. ಅವರು ದೂರಿನ ಬಗ್ಗೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ನಾನು ಆಗ ಮಾತನಾಡುತ್ತೇನೆ ಎಂದು ಸಚಿವ ಸುಧಾಕರ್ ಹಾಗೂ ಮುನಿರತ್ನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಈ ಹಿಂದೆಯೇ ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದ ಶಾಸಕ ರೇಣುಕಾಚಾರ್ಯ, ಕೊಟ್ಟವರಿಗೆ ಸಚಿವ ಸ್ಥಾನ ಕೊಡೋದು ಯಾಕೆ..? ಅದೇ ಮುಖಗಳನ್ನ ನೋಡಿ ನೋಡಿ ಬೇಜಾರಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದರು. ಈ ಬಾರಿಯಾದ್ರೂ ಅವರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆ ಸ್ವತಃ ಶಾಸಕರು ಹಾಗೂ ಬೆಂಬಲಿಗರಿಗಿದೆ.

Share This Article
Leave a Comment

Leave a Reply

Your email address will not be published. Required fields are marked *