Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೊಡ್ಡ ಗರಡಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಿದ ಕೀರ್ತಿ ತಿಪ್ಪಾನಾಯಕರದ್ದು : ಡಾ.ಬಿ.ರಾಜಶೇಖರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.06): ಸುಧೀರ್ಘ ಅವಧಿ ಬದುಕಿದ ಹಿರಿಯ ರಂಗ ಕಲಾವಿದ ತಿಪ್ಪನಾಯಕರವರನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.

ಬಸವಮಂಟಪದಲ್ಲಿ ತಿಪ್ಪಾನಾಯಕರವರಿಗೆ ಸೋಮವಾರ ಏರ್ಪಡಿಸಲಾಗಿದ್ದ ಭಾವಪೂರ್ಣ ಶ್ರದ್ದಾಂಜಲಿ, ನುಡಿನಮನದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯ ಸಾಂಸ್ಕೃತಿಕ ಚೇತನರಾಗಿದ್ದ ತಿಪ್ಪಾನಾಯಕರವರು ಜೀವಂತವಾಗಿದ್ದಿದ್ದರೆ ಈ ತಿಂಗಳ ಅಂತ್ಯಕ್ಕೆ 99 ವರ್ಷಗಳನ್ನು ಪೂರೈಸಿ ನೂರನೆ ವರ್ಷಕ್ಕೆ ಕಾಲಿಡುತ್ತಿದ್ದರು. ಆ ಸಂತೋಷವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ನಾವುಗಳೆಲ್ಲಾ ಕಳೆದುಕೊಂಡಿರುವುದು ನಿಜಕ್ಕೂ ದುಃಖದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ತಿಪ್ಪಾನಾಯಕರವರು ಮದಕರಿನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದುದು ಎಲ್ಲರ ಮನಸೆಳೆಯುವಂತಿತ್ತು. ಸುಬ್ಬಯ್ಯನಾಯ್ಡು, ಬಿ.ಸರೋಜದೇವಿಯಂತಹವರ ಜೊತೆ ಅಭಿನಯಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಬರೀ ಫೈಲ್ವಾನರಿಗಷ್ಟೆ ಮೀಸಲಾಗಿದ್ದ ದೊಡ್ಡಗರಡಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಿದ ಕೀರ್ತಿ ತಿಪ್ಪಾನಾಯಕರವರಿಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.

ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡುತ್ತ ಪ್ರಜ್ಞಾಪೂರ್ವಕವಾಗಿ ಬದುಕುವ ವ್ಯಕ್ತಿತ್ವ ತಿಪ್ಪಾನಾಯಕರವರದಾಗಿತ್ತು. ಮದಕರಿನಾಯಕನ ಪಾತ್ರದಲ್ಲಿ ಅಭಿನಯಿಸಿದಾಗ ಸಿಕ್ಕಷ್ಟು ಖುಷಿ ನನಗೆ ಬೇರೆ ಯಾವುದೂ ಇಲ್ಲ ಎಂದು ಹೇಳುತ್ತಿದ್ದರು.

ಎಲ್ಲರೊಡನೆ ಒಡನಾಟ, ಅವಿನಾಭಾವ ಸಂಬಂಧವಿರಿಸಿಕೊಂಡಿದ್ದರು. ನಾಟಕಗಳಲ್ಲಿ ಅವರು ಬಳಸುತ್ತಿದ್ದ ಭಾಷೆ ಅಮೋಘವಾಗಿತ್ತು ಎಂದರು.

ಸಾಹಿತಿ ಡಾ.ಬಿ.ಎಲ್.ವೇಣು ಮಾತನಾಡಿ ರಾಜವೀರ ಮದಕರಿನಾಯಕನ ಮೀಸೆ, ಕಟ್ಟುಮಸ್ತಾದ ಮೈಕಟ್ಟು ಈ ರೀತಿ ಇರುತ್ತಿತ್ತೇನೋ ಎನ್ನುವ ಕಲ್ಪನೆಯನ್ನು ಮೊದಲು ಜನತೆಯ ಮನದಲ್ಲಿ ಮೂಡಿಸಿದ್ದು ಹಿರಿಯ ರಂಗ ಕಲಾವಿದ ತಿಪ್ಪಾನಾಯಕರವರು.

99 ವರ್ಷಗಳ ಕಾಲ ಬದುಕಿದ ಅವರ ಮಾತು ಸದಾ ಗತ್ತು ಗಾಂಭೀರ್ಯದಿಂದ ಕೂಡಿರುತ್ತಿತ್ತು. ಮೈಸೂರು ಮಹಾರಾಜರು ಅವರನ್ನು ಕರೆಸಿಕೊಂಡು ಮದಕರಿನಾಯಕನ ಪಾತ್ರದಲ್ಲಿ ನಾಟಕ ಆಡಿಸಿ ನೋಡಿ ಮೆಚ್ಚಿಕೊಂಡಿದ್ದರೆಂದರೆ ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು ಎಂದು ಪ್ರಶಂಶಿಸಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡುತ್ತ ತಿಪ್ಪಾನಾಯಕರವರು ವೀರಾವೇಷದಿಂದ ರಂಗ ಪ್ರವೇಶ ಮಾಡುತ್ತಿದ್ದರು.

ರಾಜಾವೀರಮದಕರಿನಾಯಕ ಹೀಗಿದ್ದಿರಬಹುದು ಎನ್ನುವ ಕಲ್ಪನೆಯನ್ನು ಜನರಲ್ಲಿ ಮೂಡಿಸಿದ ಮೊಟ್ಟ ಮೊದಲ ರಂಗ ಕಲಾವಿದ. ದೊಡ್ಡ ವ್ಯಕ್ತಿತ್ವ ಅವರದು. ಎಲ್ಲರೊಡನೆ ಆತ್ಮೀಯತೆ ಇತ್ತು ಎಂದು ಸ್ಮರಿಸಿ ದಿವಂಗತ ಎ.ಭೀಮಪ್ಪನಾಯಕರಂತವರನ್ನು ದುರ್ಗದ ಜನ ಮರೆತಿರುವುದು ನೋವಿನ ಸಂಗತಿ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಕೆ.ನಾಗರಾಜ್ ಮಾತನಾಡಿ ಮಹಾನ್ ಕಲಾವಿದ ತಿಪ್ಪಾನಾಯಕರವರು ಇನ್ನು ಕೆಲವು ದಿನಗಳು ನಮ್ಮೊಂದಿಗಿದ್ದಿದ್ದರೆ ನೂರು ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಿ ಖುಷಿ ಪಡಬಹುದಿತ್ತು. ಆದರೆ ಸಾವು ಯಾರನ್ನು ಬಿಡುವುದಿಲ್ಲ. ಮಾನವನ ಸಹಜ ಧರ್ಮ.

1950-55 ರಲ್ಲಿ ದೊಡ್ಡಗರಡಿಯಲ್ಲಿ ನಾಟಕ ಸ್ಥಾಪನೆಯಾಯಿತು. ರಕ್ತರಾತ್ರಿ, ಮದಕರಿನಾಯಕ, ವಿಜಯನಗರ ಸಾಮ್ರಾಜ್ಯ ಇನ್ನು ಅನೇಕ ಮೈನವಿರೇಳಿಸುವ ಪಾತ್ರದ ನಾಟಕಗಳು ಹೆಚ್ಚು ಜನಪ್ರಿಯತೆ ಪಡೆಯಿತು. ಮೈಸೂರಿನ ಮಹಾರಾಜರು ತಿಪ್ಪಾನಾಯಕರನ್ನು ಕರೆಸಿಕೊಂಡು ಮದಕರಿನಾಯಕ ನಾಟಕ ಆಡಿಸಿ ಮೆಚ್ಚಿಕೊಂಡಿದ್ದರು.

ಕರ್ನಾಟಕ ಸರ್ಕಾರ 2008 ರಲ್ಲಿ ನಾಟಕ ಅಕಾಡೆಮಿ ಸ್ಥಾಪಿಸಿದಾಗ ಮೊದಲು ತಿಪ್ಪಾನಾಯಕರ ಹೆಸರನ್ನು ನಾನು ಸೂಚಿಸಿದೆ. ಆಗ ಶಿವಮೊಗ್ಗದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಕುವೆಂಪು ರಂಗಮಂದಿರದಲ್ಲಿ ಪ್ರಶಸ್ತಿ ನೀಡಿತು ಎಂದು ನೆನಪಿಸಿಕೊಂಡರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಪ್ಪಾನಾಯಕರ ಕುರಿತು ಮಾತನಾಡಿದರು.

ತ.ರಾ.ಸು.ರಂಗಮಂದಿರದಲ್ಲಿ ಕಳೆದ ತಿಂಗಳು ನಡೆದ ಸಾಹಿತಿ ಡಾ.ಬಿ.ಎಲ್.ವೇಣುರವರ ಬದುಕು ಬರಹ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ತಿಪ್ಪಾನಾಯಕರವರನ್ನು ಸನ್ಮಾನಿಸಬೇಕಿತ್ತು. ಕಾರ್ಯಕ್ರಮಕ್ಕೂ ಮುನ್ನ ಅವರು ಇಹಲೋಕ ತ್ಯಜಿಸಿದ್ದರಿಂದ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಅವರ ಕೊನೆಯ ಪುತ್ರಿ ಚಿನ್ನಬೋರಮ್ಮನನ್ನು ಡಾ.ದೊಡ್ಡಮಲ್ಲಯ್ಯನವರು ಸನ್ಮಾನಿಸಿದರು.

ತಿಪ್ಪಾನಾಯಕರವರ ಮಕ್ಕಳು, ಕುಟುಂಬ ವರ್ಗದವರು, ಬಂಧು-ಮಿತ್ರರು ಹಾಗೂ ಅಪಾರ ಅಭಿಮಾನಿಗಳು ನುಡಿನಮನದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ನಗರಸಭೆಯ ಆಸ್ತಿ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಗೆ ಅವಕಾಶ : ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ. ಏ.19:  ಚಿತ್ರದುರ್ಗ ನಗರಸಭೆಯ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಇತರೆ ಶುಲ್ಕಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಅಪ್ಲಿಕೇಷನ್‍ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್

ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಕಾಂಗ್ರೆಸ್ ನೇತ್ರತ್ವದ ಇಂಡಿಯಾವನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ : ಸಂವಾದ ಕಾರ್ಯಕ್ರಮದಲ್ಲಿ ಕಾಮ್ರೇಡ್ ಕೆ.ರಾಧಾಕೃಷ್ಣ ಹೇಳಿಕೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : “ದೇಶದಾದ್ಯಂತ ಇಂದು ಎರಡು ಒಕ್ಕೂಟಗಳು ಜನರ ಮುಂದಿವೆ. ಒಂದು ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಇನ್ನೊಂದು ಕಾಂಗ್ರೆಸ್ ನೇತ್ರತ್ವ ಇಂಡಿಯಾ. ಇವೆರಡನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ ಎಂದು

ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಬೆಂಬಲ : ಗೌಸ್ ಪೀರ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 19 : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆ ಮತ್ತು ಸೆಸ್ ಕಾಯ್ದೆ

error: Content is protected !!