ತುಮಕೂರಿನಲ್ಲಿ KSRTC ಬಸ್ಸನ್ನೇ ಕದ್ದ ಖದೀಮರು..!

suddionenews
1 Min Read

ತುಮಕೂರು: ಸಣ್ಣ ಪುಟ್ಟ ವಾಹನಗಳನ್ನ.. ವಾಹನದ ಬಿಡಿ ಭಾಗಗಳನ್ನ ಕದಿಯೋದನ್ನ ನೋಡ್ತಾ ಇದ್ವಿ.. ಆದ್ರೆ ಕಿರಾತಕರು ಇದೀಗ ಕೆಎಸ್ಆರ್ಟಿಸಿ ಬಸ್ಸನ್ನೇ ಕದ್ದೊಯ್ದಿದ್ದಾರೆ. ಈ ಘಟನೆ ನಡೆದಿರೋದು ಜಿಲ್ಲೆಯ ಗುಬ್ಬಿಯಲ್ಲಿ.

ಸದ್ಯಕ್ಕೆ ಕದ್ದ ಬಸ್ಸನ್ನ ಸಿ ಎಸ್ ಪುರ ಪೊಲೀಸ್ ಠಾಣೆಯ ಜನ್ನೇನಹಳ್ಳಿ ಗ್ರಾಮದಲ್ಲಿ ಬಿಟ್ಟು ಹೋಗಿದ್ದಾರೆ. ಜಿಲ್ಲೆಯ ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸನ್ನ ಕದ್ದೊಯ್ದು, ಜನ್ನೇನಹಳ್ಳಿಯಲ್ಲಿ ಬಿಟ್ಟು ಹೋಗಿದ್ದಾರೆ.

ಬಸ್ ಕದ್ದ ಬಳಿಕ ಖದೀಮರು ಎಲ್ಲೆಡೆ ಓಡಾಡಿದ್ದಾರೆ. ಕುಣಿಗಲ್, ಎಡೆಯೂರು, ಅಮೃತೂರು ಸುತ್ತಾಡಿ ಆ ಬಳಿಕ ಜನ್ನೇನಹಳ್ಳಿ ಬಳಿ ಬಂದು ಬಸ್ ಬಿಟ್ಟು ಹೋಗಿದ್ದಾರೆ. ಬಸ್ ನಲ್ಲಿದ್ದ ಡಿಸೇಲ್ ನಲ್ಲೂ ಕದ್ದಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಅಧಿಕಾರಿಗಳು. ಆದ್ರೆ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿದ್ರು, ಇನ್ನು ಕ್ರಮ ಕೈಗೊಳ್ಳದೇ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *