Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಕಮಹಾದೇವಿ ವಚನಗಳು ಪುಸ್ತಕದಲ್ಲಿ  ಉಳಿಯದೆ ಮಸ್ತಕದಲ್ಲಿಡಬೇಕು : ಶ್ರೀಮತಿ ಸಿ ಬಿ ಶೈಲ ಜಯಕುಮಾರ್

Facebook
Twitter
Telegram
WhatsApp

 

ಚಿತ್ರದುರ್ಗ,(ಏ.26) : ಅನುಭವಮಂಟಪದಲ್ಲಿ ಅಲ್ಲಮನ ಪರೀಕ್ಷೆಗಳನ್ನೂ ಗೆದ್ದು ನಿಂತ  ಶ್ರೇಷ್ಠ ವಚನಕಾರ್ತಿ. ಇಂತಹ ಅಕ್ಕಮಹಾದೇವಿಯು ಬರೆದ ವಚನಗಳು ಪುಸ್ತಕದಲ್ಲಿ  ಉಳಿಯದೆ ಮಸ್ತಕದಲ್ಲಿಡಬೇಕು ಎಂದು ನಿವೃತ ಉಪನ್ಯಾಸಕರಾದ ಶ್ರೀಮತಿ ಸಿ ಬಿ ಶೈಲ ಜಯಕುಮಾರ್ ತಿಳಿಸಿದರು.

ಅಖಿಲಭಾರತ ವೀರಶೈವ ಮಹಾಸಭಾ (ರಿ)ಜಿಲ್ಲಾ ಮಹಿಳಾ ಘಟಕದಲ್ಲಿ ಆಯೋಜಿಸಲಾಗಿದ್ದ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ಮಹಿಳೆಯರಿಗೆ ಅಕ್ಕಮಹಾದೇವಿಯ ವಚನ ಬರೆದು ಹಾಡುವ ಸ್ಪರ್ಧೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಶ್ರೀಮತಿ ಅನಿತಾ ಮಹಂತೇಶರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿ ಮಾತನಾಡಿದರು.

12 ನೇ ಶತಮಾನದಲ್ಲೇ ಸ್ತ್ರಿ ಸ್ವಾತಂತ್ರಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ  ಅಕ್ಕಮಹಾದೇವಿ. ಅವರ ಅನುಭಾವದ ವಚನಗಳು ಎಷ್ಟು ಅರ್ಥಪೂರ್ಣ ಅವಳ ವೇದನೆ ನಿವೇದನೆ ವಚನಗಳಲ್ಲಿ ಬರೆಯಬೇಕೆಂಬ ಸಂವೇದನೆ ತನ್ನ ವಚನಗಳಲ್ಲಿ ಬರೆದು ಆಕರ್ಷಣಿಯಾದಳು. ಕೌಶಿಕ ಮಹಾರಾಜನ ತೊರೆದು ತನ್ನ ಕೇಶ ರಾಶಿಯಲ್ಲಿ ಸೌಂದರ್ಯವನ್ನು ಮರೆಮಾಚಿ ನಿರಾಡಬರಳಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನ ಮನದಲ್ಲಿ ಪೂಜಿಸಿ ಆರಾಧಿಸಿ ಕದಳಿಯ ದಟ್ಟ ಅಡವಿಯಲ್ಲಿ ಅಲೆದ ಗಟ್ಟಿಗಿತ್ತಿ ಅನುಭವಮಂಟಪದಲ್ಲಿ ಅಲ್ಲಮನ ಪರೀಕ್ಷೆಗಳನ್ನೂ ಗೆದ್ದು ನಿಂತ  ಶ್ರೇಷ್ಠ ವಚನಕಾರ್ತಿ. ಇಂತಹ ಅಕ್ಕಮಹಾದೇವಿಯು ಬರೆದ ವಚನಗಳು ಪುಸ್ತಕದಲ್ಲಿ  ಉಳಿಯದೆ ಮಸ್ತಕದಲ್ಲಿಡಬೇಕು ವಚನಗಳಲ್ಲಿ ಶ್ಲೇಷಾ ಅಲಂಕಾರಗಳನ್ನು ಗಮನಿಸಬೇಕು ಕನ್ನಡಿಗರಾಗಿ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕು. ಬಹುಮಾನಗಳಿಗಿಂತ ಪುಸ್ತಕಗಳನ್ನು ಕೊಟ್ಟು ಓದುವ ಅಭ್ಯಾಸವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ (ರಿ)ಜಿಲ್ಲಾ ಮಹಿಳಾ ಘಟಕದ ಶ್ರೀಮತಿ ನಿರ್ಮಲ ಬಸವರಾಜ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 25 ಜನ ಸ್ಪರ್ಧಿಗಳು ಭಾಗವಹಿಸಿದ್ದರು.

ತೀರ್ಪುಗಾರರಾಗಿ ನಿವೃತ ಉಪನ್ಯಾಸಕರಾದ ಶ್ರೀಮತಿ ಸಿ ಬಿ ಶೈಲಜಯಕುಮಾರ್ ಹಾಗು ಸಂಗೀತ ಶಿಕ್ಷಕರಾದ ಶ್ರೀಮತಿ ಮುಕ್ತ ನಾಗರಾಜ್ ಭಾಗವಹಿಸಿದ್ದರು. ಹಾಗು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಮಹಡಿ ಶಿವಮೂರ್ತಿ ರಾಜ್ಯ ಕಮಿಟಿ ಸದಸ್ಯರಾದ ಶ್ರೀಮತಿ ಆರತಿ ಮಹಡಿ ಭಾಗವಹಿಸಿದ್ದರು.

ಶ್ರೀಮತಿ ನಿರ್ಮಲ ಬಸವರಾಜ್ ಸ್ವಾಗತಿಸಿದರೆ. ಕಾರ್ಯದರ್ಶಿ ರೀನವೀರಭದ್ರಪ್ಪ ವರದಿಯನ್ನು ಮಂಡಿಸಿ.. ಪ್ರಾಸ್ತಾವಿಕ ಮಾತನಾಡಿದರು.  ಸ್ಫರ್ದೆಯಲ್ಲಿ ಪ್ರಥಮ ಶ್ರೀಮತಿ ಹೇಮಲತಾ,ದ್ವಿತೀಯ ಶ್ರೀಮತಿ ಇಂದಿರಾ ಜಯದೇವಮೂರ್ತಿ,ಮೂರನೇ ಬಹುಮಾನವನ್ನು ಸುನೀತಾ ನಾಗರಾಜ್ ಪಡೆದರು. ಕಮಿಟಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

error: Content is protected !!