Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಲ್ ಖೈದಾ ಜವಾಹರಿ ಬ್ಯಾನ್ ಆಗಿದ್ರು ವಿಡಿಯೋ ಎಲ್ಲಿಂದ ಬಂತು : ವಿಚಾರಣೆಗೆ ಒತ್ತಾಯಿಸಿದ ಪ್ರಮೋದ್ ಮುತಾಲಿಕ್

Facebook
Twitter
Telegram
WhatsApp

ಬೆಳಗಾವಿ: ಪ್ರಮೋದ್ ಮುತಾಲಿಕ್ ಜಿಲ್ಲೆ ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೇಳ್ತಾ ಇದ್ದೀನಿ, ಯಾವಾಗ ಯಾವಾಗ ಎಲೆಕ್ಷನ್ ಬರುತ್ತೆ ಆಗಾಗ RSS ಅನ್ನು ಬೈತೀರಿ. ಕಾರಣ ಏನು ಅಂದ್ರೆ ಮುಸ್ಲಿಂ ವೋಟು ಸಲುವಾಗಿ ಆರ್ ಎಸ್ ಎಸ್ ಅನ್ನು ಬೈತೀರಿ. ಆರ್ ಎಸ್ ಎಸ್ ಗೆ ಆಲ್ ಖೈದಾ ಹೋಲಿಕೆ ಮಾಡ್ತೀರಿ, ಆರ್ ಎಸ್ ಎಸ್ ಯಾವುದು ಆಲ್ ಖೈದಾ ಯಾವುದು. ಬಾಂಬ್ ಬ್ಲಾಸ್ಟ್ ಮಾಡಿಕೊಂಡು ಇಡೀ ದೇಶದಲ್ಲಿ ಅದೊಂದು ಟೆರರಿಸ್ಟ್ ಅನ್ನೋದು ಗೊತ್ತಿದೆ. ಆರ್ ಎಸ್ ಎಸ್ ಎಂದಾದರೂ ಬಾಂಬು, ಬಂದೂಕು ಅಂತ ಮಾಡಿದೆಯಾ. ದೇಶದ್ರೊಇಹಿ ಕೃತ್ಯವನ್ನು ಎಂದಾದರೂ ಮಾಡಿದೆಯಾ. ಒಂದು ಉದಾಹರಣೆ ಇದೆಯಾ..? ಎಂದು ಪ್ರಶ್ನಿಸಿದ್ದಾರೆ.

ಜಗತ್ ಪ್ರಸಿದ್ಧವಾದ ರಾಜಕೀಯೇತರ ಸಂಘಟನೆ 96 ವರ್ಷಗಳಿಂದ ಕೆಲಸ ಮಾಡುತ್ತಿದೆ. ಅಂತಹ ಸಂಘಟನೆಯನ್ನು ಆಲ್ ಖೈದಾಗೆ ಹೋಲಿಸುವುದು ಖಂಡನೀಯವಾಗಿದೆ. ಅಕ್ಷಮ್ಯ ಅಪರಾಧವನ್ನು ಮಾಡಿದ್ದೀರಿ. ನೀವೂ ಮುಸ್ಲಿಂ ವೋಟ್ ತೆಗೆದುಕೊಳ್ಳಿ, ಆದರೆ ರಾಷ್ಟ್ರೀಯ ದೇಶ ಭಕ್ತಿ ಹಿನ್ನೆಲೆ ಇರುವು ಸಂಘಟನೆಗೆ ತೊಂದರೆಎಂದಿದ್ದಾರೆ.

ಇನ್ನು ಮುಸ್ಕಾನ್ ಹುಡುಗಿಗೆ ಹೊಗಳಿಕೆಯ ವಿಡಿಯೋ ಬಗ್ಗೆ ಮಾತನಾಡಿ, ಆಲ್ ಖೈದಾದಿಂದ ವಿಡಿಯೋವೊಂದು ಬಿಡುಗಡೆಯಾಗಿದೆ. ಅದರಲ್ಲಿ ಮುಸ್ಕಾನ್ ಎಂಬ ವಿದ್ಯಾರ್ಥಿಯನ್ನು ಹೊಗಳಿರುವುದನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ. ಬಿನ್ ಲಾಡೆನ್ ನಂತರ ಆಲ್ ಖೈದಾದ ಪ್ರಮುಖ ಜವಾಹರಿ ಬ್ಯಾನ್ ಆಗಿದೆ. ಬ್ಯಾನ್ ಆದ ಬಳಿಕವೂ ಈ ವಿಡಿಯೊ ಎಲ್ಲಿಂದ ಬಂತು, ಹೇಗೆ ಬಂತು. ನಮ್ಮ ಕರ್ನಾಟಕದ ಮಂಡ್ಯದ ಮುಸ್ಕಾನ್ ವರೆಗೂ ಹೇಗೆ ಬಂತು ಅನ್ನೋದನ್ನು ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ನಡೆಸಬೇಕು ಎಂಬುದನ್ನು ನಾನು ಹೇಳೀದು. ಮುಸ್ಕಾನ್ ಮತ್ತು ಅವರ ತಂದೆಯನ್ನು ಬಂಧನ ಮಾಡಿ, ವಿಚಾರಣೆ ನಡೆಸಬೇಕು. ಅವರ ಮನೆಗೆ ಯಾರ್ಯಾರು ಭೇಟಿ ಕೊಟ್ಟಿದ್ದಾರೆ. ಅವರ ಮನೆಗೆ ಮಹಾರಾಷ್ಟ್ರದ ಮುಸ್ಲಿಂ ಎಂಎಲ್ಎ ಬಂದು ಮೊಬೈಲ್ ಕೊಟ್ಟು ಹೋಗಿದ್ದಾರೆ. ಆ ಮೊಬೈಲ್ ಕೂಡ ಸೀಜ್ಹ್ ಆಗಬೇಕು. ಆಲ್ ಖೈದಾ ಜವಾಹರಿಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಮ್ಮ ದೇಶ ತಾಲಿಬಾನ್ ಅಲ್ಲ, ನಮ್ಮ ದೇಶ ಕುರಾನ್ ಮೇಲೆ ನಡೆಯೋದಲ್ಲ. ನಮ್ಮ ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತೆ ಎಂದಿದ್ದಾರೆ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!