Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುಕ್ಸಟ್ಟೆ ಲೈಫು ಚಿತ್ರದ  ಟೈಟಲ್ ಟ್ರ್ಯಾಕ್ ಫುಲ್ ವೈರಲ್

Facebook
Twitter
Telegram
WhatsApp
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಟನೆಯ  ಪುಕ್ಸಟ್ಟೆ ಲೈಫು ಚಿತ್ರದ ಟೈಟಲ್ ಟ್ರ್ಯಾಕ್  ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ  ಹಲ್ ಛಲ್ ಎಬ್ಬಿಸಿದೆ.
ಚಿತ್ರನ್ನ ಜಾಕೆ ಬಿರಿಯಾನಿ ಬಂತು ಹಾಡಿನಲ್ಲಿ  ಒಬ್ಬ  ಬೀಗ ವ್ಯಾಪಾರಿಯ ಬದುಕಿನ ಬವಣೆಗಳ  ಜೊತೆಗೆ ಬದುಕಿನಲ್ಲಾದ ಬದಲಾವಣೆಗಳನ್ನು ಚಿತ್ರಿಸಲಾಗಿದೆ.

ಟೈಟಲ್ ಟ್ರಾಕ್ ಜೊತೆಗೆ ಚಿತ್ರತಂಡ ಪುಕ್ಸಟೆ ಲೈಫು ತೆರೆಕಾಣುವ ದಿನಾಂಕವನ್ನು ಸಹ ತಿಳಿಸಿದೆ.  ಇದೇ ತಿಂಗಳ 17ರಂದು ಪುಕ್ಸಟ್ಟೆ ಲೈಫು ಚಿತ್ರ  ರಾಜ್ಯದ್ಯಂತ ತೆರೆಕಾಣಲಿದೆ.

ಚಿತ್ರದಲ್ಲಿ ಸಂಚಾರಿ ವಿಜಯ್  ಬೀಗ ರಿಪೇರಿಯ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದು, ಪೊಲೀಸರೇ ಬೀಗ ರಿಪೇರಿಯನ್ನು ಕಳ್ಳತನಕ್ಕಿಳಿಸುವ ಕಥೆ ಎನ್ನುವುದನ್ನು ಟ್ರೈಲರ್ ತಿಳಿಸಿದೆ. ಆದರೆ ಚಿತ್ರದ ಅಸಲಿ ಕಥೆ ಏನು ಎನ್ನುವುದು ಚಿತ್ರ ತೆರೆಕಂಡ ಬಳಿಕಷ್ಟೇ ತಿಳಿಯಬೇಕಿದೆ.

ಪುಕ್ಸಟ್ಟೆ ಲೈಫು ಚಿತ್ರವನ್ನು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದು, ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಸೇರಿದಂತೆ ಖ್ಯಾತ ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ರಂಗಭೂಮಿ ಕಲಾವಿದರೇ ಸೇರಿ ಮಾಡಿರುವ ಪುಕ್ಸಟ್ಟೆ ಲೈಫು  ಸೆಪ್ಟೆಂಬರ್ 17ರಂದು ರಿಲೀಸ್ ಆಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ಹೋರಾಟ ಅನಿವಾರ್ಯ : ಬಿ.ಎನ್.ಚಂದ್ರಪ್ಪ

ಸುದ್ದಿಒನ್,  ಚಿತ್ರದುರ್ಗ: ಏ.20 :  ಕೇಂದ್ರ ಬಿಜೆಪಿ ಸರ್ಕಾರದ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು. ಹಿರಿಯೂರು ತಾಲೂಕಿನ ಕೋಡಿಹಳ್ಳಿ

ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ 25 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20  : ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಿ.ಯೋಗೇಶ್‍ಬಾಬು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಎಸ್.ಬಸವರಾಜು, ಕೆ.ಚಂದ್ರಣ್ಣ,

ಬಿ.ಎನ್.ಚಂದ್ರಪ್ಪನವರ ಗೆಲುವು ಖಚಿತ : ನಗುತಾ ರಂಗನಾಥ್

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರ ಎಲ್ಲೆಡೆ ಮತದಾರರ ಉತ್ತಮ ಒಲವು

error: Content is protected !!