ಚಪ್ಪಲಿ ಟೆಂಡರ್ ಅನ್ನು ದಲಿತರಿಗೆ ನೀಡಿದ ವಿಚಾರ : ಸಿದ್ದರಾಮಯ್ಯನೆ ಕಾರಣವೆಂದ ಬಿಜೆಪಿ..!

suddionenews
1 Min Read

ಬೆಂಗಳೂರು: ದೊಡ್ಡ ಗಣಪತಿ ದೇವಸ್ಥಾನದಲ್ಲಿ ಹಲವು ಕೆಲಸಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಯಾವ್ಯಾವ ಟೆಂಡರ್ ಯಾವ್ಯಾವ ಜಾತಿಗೆ ಎಂದು ಟೆಂಡರ್ ಆದೇಶದಲ್ಲಿ ನಮೂದಿಸಲಾಗಿತ್ತು. ಅದರಲ್ಲಿ ಚಪ್ಪಲಿ ಟೆಂಡರ್ ಅನ್ನು ಪ.ಜಾತಿಗೆ ಮೀಸಲು ಮಾಡಲಾಗಿತ್ತು.

ಈ ಆದೇಶದ ಪ್ರತಿ ನೋಡಿದ ಮೇಲೆ ವಿರೋಧ ವ್ಯಕ್ತವಾಗಿತ್ತು. ಶಾಸಕ ಪ್ರಿಯಾಂಖ್ ಖರ್ಗೆ ಕೂಡ ಮುಜರಾಯಿ ದೇವಾಲಯಗಳಲ್ಲಿ ಮಿಕ್ಕೆಲ್ಲ ಟೆಂಡರ್ ಸಾಮಾನ್ಯ ವರ್ಗಕ್ಕೆ, ಚಪ್ಪಲಿ ಕಾಯುವುದು ಮಾತ್ರ ದಲಿತರಿಗೆ. ಇದು ಸರ್ಕಾರಿ ಅಸ್ಪೃಶ್ಯತೆ ಆಚರಣೆ, ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿ ಮನುಸ್ಮೃತಿ ಪಾಲಿಸುತ್ತಿದೆ ಬಿಜೆಪಿ ಸರ್ಕಾರ ಎಂದು ದೂರಿದ್ದರು.

ವಿವಾದ ಉಂಟಾದ ಬೆನ್ನಲ್ಲೆ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಮಧ್ಯೆ ಬಿಜೆಪಿ ಟ್ವೀಟ್ ಮಾಡಿ, ಕಾಂಗ್ರೆಸ್ ಮೇಲೆ ಹಾಕಿದೆ. “ಈ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಆದೇಶ ಹೊರಡಿಸಲಾಗಿದೆ” ಎಂದು ಆದೇಶ ಹೊರಡಿಸುವಾಗ @INCKarnataka ಸರ್ಕಾರ ಅಧಿಕಾರದಲ್ಲಿತ್ತು, @siddaramaiah ಸಿಎಂ ಆಗಿದ್ದರು. ಬಿಜೆಪಿ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡಿದೆ, ಹಾಗಾದರೆ ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿದ್ದು ಯಾರು @PriyankKharge ಅವರೇ? ಎಂದು ಟ್ವಿಟ್ಟರ್ ಮೂಲಕ ಪ್ರಶ್ನಿಸಿದೆ.

Share This Article
Leave a Comment

Leave a Reply

Your email address will not be published. Required fields are marked *